ಆ್ಯಪ್ನಗರ

ಇಂಗುಗುಂಡಿಯಿಂದ ಅಂತರ್ಜಲ ಉಳಿವು

ಇತ್ತೀಚೆಗೆ ನೀರಿನ ಬಳಕೆ ಹೆಚ್ಚಾಗುತ್ತಿರುವುದರಿಂದ ಅಂತರ್‌ ಜಲ ಕಡಿಮೆ ಆಗುತ್ತಿದೆ. ಇಂಗು ಗುಂಡಿ ನಿರ್ಮಿಸುವುದರಿಂದ ಅಂತರ್‌ಜಲ ಬತ್ತದಂತೆ ಕಾಯ್ದುಕೊಳ್ಳಬಹುದು ಎಂದು ಉಪನ್ಯಾಸಕ ಕೆ.ಸತೀಶ್‌ ಕುಮಾರ್‌ ಹೇಳಿದರು.

Vijaya Karnataka 5 Aug 2019, 5:00 am
ಹೊಳೆಹೊನ್ನೂರು: ಇತ್ತೀಚೆಗೆ ನೀರಿನ ಬಳಕೆ ಹೆಚ್ಚಾಗುತ್ತಿರುವುದರಿಂದ ಅಂತರ್‌ ಜಲ ಕಡಿಮೆ ಆಗುತ್ತಿದೆ. ಇಂಗು ಗುಂಡಿ ನಿರ್ಮಿಸುವುದರಿಂದ ಅಂತರ್‌ಜಲ ಬತ್ತದಂತೆ ಕಾಯ್ದುಕೊಳ್ಳಬಹುದು ಎಂದು ಉಪನ್ಯಾಸಕ ಕೆ.ಸತೀಶ್‌ ಕುಮಾರ್‌ ಹೇಳಿದರು.
Vijaya Karnataka Web SMR-4HHR3


ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಶನಿವಾರ ನಡೆದ ಶ್ರಮದಾನ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲೆಡೆ ವಾಡಿಕೆಗಿಂತ ಕಡಿಮೆ ಮಳೆ ಆಗುತ್ತಿದೆ. ಬಿದ್ದ ಮಳೆ ನೀರು ಪೋಲಾಗುತ್ತಿದೆ. ಇದನ್ನು ಭೂಮಿಯಲ್ಲಿ ಇಂಗಿಸಬೇಕು. ಇದರಿಂದ ಅಂತರ್‌ ಜಲ ಹೆಚ್ಚಾಗಿ ನೀರನ್ನು ಪುನರ್‌ ಬಳಕೆ ಮಾಡಿಕೊಳ್ಳಲು ಸಹಕಾರಿ ಆಗುತ್ತದೆ. ಈ ಬಗ್ಗೆ ಯೋಚಿಸಿ ಸಕಾಲದಲ್ಲಿ ನೀರು ಸಂಗ್ರಹಿಸಲು ಕಾಲೇಜು ಆವರಣದಲ್ಲಿ ಬಿದ್ದ ನೀರನ್ನು ಭೂಮಿಯಲ್ಲಿ ಇಂಗಿಸಲು ಕಾಲೇಜಿನ ಸ್ವಯಂ ಸೇವಕರು ಇಂಗು ಗುಂಡಿ ನಿರ್ಮಿಸಿದ್ದಾರೆ. ಇಂತಹ ಇಂಗು ಗುಂಡಿ ಎಲ್ಲೆಡೆ ನಿರ್ಮಿಸಬೇಕು. ಇದರಿಂದ ಮುಂದೆ ಎದುರಾಗುವ ನೀರಿನ ಬವಣೆ ಕೊಂಚ ಕಡಿಮೆ ಆಗುತ್ತದೆ ಎಂದರು. ದೈಹಿಕ ಶಿಕ್ಷ ಣ ನಿರ್ದೇಶಕ ರೋಹನ್‌ ಡಿ,ಕಾಸ್ಟ, ಉಪನ್ಯಾಸಕ ಎಚ್‌.ಸುರೇಶ್‌ ಸಾಗರ್‌, ಸ್ವಯಂ ಸೇವಕರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ