ಆ್ಯಪ್ನಗರ

ಜಿಎಸ್‌ಟಿ ದೇಶದ ಆದಾಯದ ಬೆನ್ನೆಲುಬು

ಜಿ.ಎಸ್‌.ಟಿ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರದ ಜತೆಗೆ ಆದಾಯದ ಬೆನ್ನೆಲುಬು ಆಗಿದೆ ಎಂದು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಬಿ.ವಿ.ರವಿ ಹೇಳಿದರು.

Vijaya Karnataka 27 Jul 2019, 5:00 am
ಶಿವಮೊಗ್ಗ : ಜಿ.ಎಸ್‌.ಟಿ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರದ ಜತೆಗೆ ಆದಾಯದ ಬೆನ್ನೆಲುಬು ಆಗಿದೆ ಎಂದು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಬಿ.ವಿ.ರವಿ ಹೇಳಿದರು.
Vijaya Karnataka Web SMG-2607-2-15-26SMG3


ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೆರೋಕ್ಯಾಸ್ಟ್‌ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿ.ಎಸ್‌.ಟಿ.ಯಲ್ಲಿನ ವಾರ್ಷಿಕ ವರದಿ ಮತ್ತು ಹುಟ್ಟುವಳಿ ತೆರಿಗೆ ಮೇಲಿನ ನಿರ್ಬಂಧ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿ.ಎಸ್‌.ಟಿ ಆರಂಭವಾಗಿ 2 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಈಗಾಗಲೇ ಎಲ್ಲ ವಾಣಿಜ್ಯೋದ್ಯಮಿಗಳು ಈ ಜಿಎಸ್‌ಟಿ ಕಾಯಿದೆ ಒಳಪಟ್ಟಿರುವುದು ತುಂಬಾ ಹೆಮ್ಮೆಯ ವಿಚಾರವಾಗಿದೆ. ಸರಕು ಮತ್ತು ಸೇವಾ ತೆರಿಗೆಯಿಂದ ಬರುವ ಆದಾಯದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿ ಕಾಣುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಾನೂನು ವಿಭಾಗದ, ಜಂಟಿ ಆಯುಕ್ತರಾದ ಡಾ.ಎಂ.ಪಿ.ರವಿಪ್ರಸಾದ್‌, ಎಚ್‌.ಎಸ್‌.ಜಿಯಾವುಲ್ಲಾ ಖಾನ್‌, ಸಂಘದ ತೆರಿಗೆ ಸಲಹಾ ಸಮಿತಿ ಛೇರ್ಮನ್‌.ಯು.ಮದುಸೂದನ್‌ಮಾತನಾಡಿದರು.

ಕಾರ್ಯಗಾರದ ಅಧ್ಯಕ್ಷ ತೆಯನ್ನು ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಘದ ಉಪಾಧ್ಯಕ್ಷ ಎಸ್‌.ಎಸ್‌.ಉದಯಕುಮಾರ್‌ ವಹಿಸಿದ್ದರು. ಕಾರ್ಯದರ್ಶಿಗಳಾದ ಬಿ.ಗೋಪಿನಾಥ್‌, ಸಂತೋಷ್‌.ಬಿ.ಆರ್‌, ಜಿ.ಎನ್‌.ಪ್ರಕಾಶ್‌, ಎ.ಎಂ.ಸುರೇಶ್‌, ಜಿ.ವಿಜಯಕುಮಾರ್‌, ಎಂ.ಎಲ್‌.ಪ್ರತಾಪ್‌, ವಸಂತ ಹೋಬಳಿದಾರ್‌, ಸಂದೀಪ್‌.ಎನ್‌, ಗೋಪಿನಾಥ್‌, ಜಗನ್ನಾಥ್‌, ಸುಕುಮಾರ್‌.ಕೆ.ಎಸ್‌ ಹಾಗೂ ಟಿ.ಎನ್‌.ಲಕ್ಷ್ಮೀಕಾಂತ್‌, ಮಾಜಿ ಅಧ್ಯಕ್ಷ ರಾದ ಭಾರದ್ವಾಜ್‌ ಹಾಗೂ ಅಶ್ವತ್‌ನಾರಾಯಣ್‌ ಶೆಟ್ಟಿ, ಕೆ.ವಸಂತಕುಮಾರ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ