ಆ್ಯಪ್ನಗರ

ಗುರುವಂದನೆ, ಸಾಂಸ್ಕೃತಿಕ ಕಾರ‍್ಯಕ್ರಮ

ಸನ್ಯಾಸತ್ವ ಸ್ವೀಕರಿಸಿ ಸ್ವಾಮೀಜಿಗಳಾಗುವುದು ಸುಲಭ. ಆದರೆ ನುಡಿದಂತೆ ನಡೆದುಕೊಳ್ಳುವುದು ಸುಲಭದ ಮಾತಲ್ಲ. ರಾಮಕೃಷ್ಣ, ರಮಣಮಹರ್ಷಿಗಳು ನಡೆದ ದಾರಿಯಲ್ಲಿ ಸಾಗುವ ಹಂಬಲವಿದೆ ಎಂದು ಗೋಣಿಬೀಡು ಶೀಲಸಂಪಾದನಾ ಮಠದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

Vijaya Karnataka 5 Jul 2019, 5:00 am
ಭದ್ರಾವತಿ: ಸನ್ಯಾಸತ್ವ ಸ್ವೀಕರಿಸಿ ಸ್ವಾಮೀಜಿಗಳಾಗುವುದು ಸುಲಭ. ಆದರೆ ನುಡಿದಂತೆ ನಡೆದುಕೊಳ್ಳುವುದು ಸುಲಭದ ಮಾತಲ್ಲ. ರಾಮಕೃಷ್ಣ, ರಮಣಮಹರ್ಷಿಗಳು ನಡೆದ ದಾರಿಯಲ್ಲಿ ಸಾಗುವ ಹಂಬಲವಿದೆ ಎಂದು ಗೋಣಿಬೀಡು ಶೀಲಸಂಪಾದನಾ ಮಠದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
Vijaya Karnataka Web SMR-4BDVT2


ಶ್ರೀಗಳು ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, 25 ತಿಂಗಳಿಂದ ಮಠದ ಆವರಣದಲ್ಲಿ ಪ್ರತಿ ತಿಂಗಳ 2ನೇ ಭಾನುವಾರ ಅನುಭಾವ ಗೋಷ್ಠಿಗಳು ನಡೆಯುತ್ತಾ ಬಂದಿದೆ. 25ನೇ ಕಾರ್ಯಕ್ರಮವಾಗಿ ಸಮ್ಮೇಳನ ನಡೆಸಲು ಶೀಲಸಂಪಾದನಾಮಠ ಸ್ಪಿರಿಚ್ಯುಯಲ್‌ ಫೌಂಡೇಶನ್‌ ತೀರ್ಮಾನಿಸಿ ಆಯೋಜಿಸಿದೆ ಎಂದರು.

ಮೂರು ದಿನದ ಈ ಕಾರ‍್ಯಕ್ರಮದಲ್ಲಿ ಕೃಷಿ, ಆಧ್ಯಾತ್ಮಿಕ, ಸಾಹಿತ್ಯ, ಯುವಜನೋತ್ಸವ, ಮಹಿಳೆ ಮತ್ತು ಆಧ್ಯಾತ್ಮ, ಗುರುವಂದನಾ ನಡೆಯಲಿದೆ. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ನಾಗರಿಕರು, ಆಸಕ್ತರು ಹಾಗೂ ಅಧ್ಯಾತ್ಮ ಅಭಿಮಾನಿಗಳು ಆಗಮಿಸುವಂತೆ ಇದೇ ಸಂದರ್ಭ ಆಹ್ವಾನಿಸಿದರು. ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಸಿದ್ದಲಿಂಗಯ್ಯ, ಮುಖಂಡರಾದ ಆರ್‌.ಎಸ್‌. ಶೋಭಾ, ಸಂತೋಷಕುಮಾರ್‌, ಉದಯಕುಮಾರ್‌, ಡಾ.ಜಿ. ಹಿರೇಮಠ, ಸಮನ್ವಯಕಾಶಿ ಇತರರು ಇದ್ದರು.

===============================
ಪ್ರಶಸ್ತಿ
ಇದೇ ಸಂದರ್ಭ ಲಿಂಗಾನುಭಾವಿ ಸಿದ್ಧವೀರ ಶಿವಯೋಗಿ ಪ್ರಶಸ್ತಿಯನ್ನು ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ನಾದ ತರಂಗಿಣಿ ಪ್ರಶಸ್ತಿಯನ್ನು ಸಂಗೀತ ಲೋಕದಲ್ಲಿ ಸೇವೆ ಸಲ್ಲಿಸಿದ ಶಿವಮೊಗ್ಗ ನಾಗರತ್ನ ಚಂದ್ರಶೇಖರಯ್ಯ ಅವರಿಗೆ ಪ್ರದಾನ ಮಾಡಲಾಗುವುದು.
-ಡಾ.ಸಿದ್ದಲಿಂಗ ಮಹಾಸ್ವಾಮಿಗಳು, ಗೋಣಿಬೀಡು ಶೀಲಸಂಪಾದನಾ ಮಠ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ