ಆ್ಯಪ್ನಗರ

ಹಾಲಪ್ಪ -ಕಾಗೋಡು ಕುಶಲ ಮಾತುಕತೆ

ಇಲ್ಲಿನ ವರದಹಳ್ಳಿ ರಸ್ತೆಯ ಆರ್ಯ ಈಡಿಗರ ಸಂಘದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ‍್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಶಾಸಕ ಎಚ್‌. ಹಾಲಪ್ಪ ಇಬ್ಬರೂ ಪರಸ್ಪರ ಸೌಹಾರ್ದತೆಯಿಂದ ಕುಶಲವಾಗಿ ಮಾತನಾಡಿದ ದೃಶ್ಯ ಕಂಡುಬಂತು.

Vijaya Karnataka 3 Aug 2019, 5:00 am
ಸಾಗರ: ಇಲ್ಲಿನ ವರದಹಳ್ಳಿ ರಸ್ತೆಯ ಆರ್ಯ ಈಡಿಗರ ಸಂಘದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ‍್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಶಾಸಕ ಎಚ್‌. ಹಾಲಪ್ಪ ಇಬ್ಬರೂ ಪರಸ್ಪರ ಸೌಹಾರ್ದತೆಯಿಂದ ಕುಶಲವಾಗಿ ಮಾತನಾಡಿದ ದೃಶ್ಯ ಕಂಡುಬಂತು.
Vijaya Karnataka Web SMR-02sgr14


ಶಾಸಕ ಎಚ್‌. ಹಾಲಪ್ಪ ಅವರ ಹೆಗಲ ಮೇಲೆ ಕೈ ಹಾಕಿ ಆತ್ಮೀಯತೆಯಿಂದ ಮಾತನಾಡಿದ ಕಾಗೋಡು ತಿಮ್ಮಪ್ಪ ಅವರು ' ಏ.... ಹಾಲಪ್ಪ. ತಮ್ಮಾ ನಮ್ಮ ತಾಲೂಕು ಕಚೇರಿಯ ನೂತನ ಕಟ್ಟಡದ ಕಾಮಗಾರಿಯನ್ನು ಆದಷ್ಟು ಬೇಗ ಶುರು ಮಾಡಿಸೋ. ಈಗಾಗಲೆ ಅದರ ಟೆಂಡರ್‌ ಕರೆದು ಬಹಳ ದಿನವಾಗಿದೆ. ಇನ್ನು ತಡ ಮಾಡಬೇಡ ಕೆಲಸ ಆರಂಭ ಮಾಡಿಸು' ಎಂದು ಹೇಳಿದರು.

ತಕ್ಷ ಣ ಉತ್ತರಿಸಿದ ಹಾಲಪ್ಪ ಅವರು ಮಾತನಾಡಿ, ಆಯಿತು ಸರ್‌ ಕೂಡಲೆ ಆರಂಭಿಸುತ್ತೇನೆ. ನೀವು ಎರಡು ಅಂತಸ್ತು ಕಟ್ಟಡಕ್ಕೆ ಯೋಜನೆ ರೂಪಿಸಿದ್ದೀರಿ. ನಾನು ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದರೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಅದನ್ನು ಶುರು ಮಾಡಿಸಲಿಲ್ಲ. ಇನ್ನು ತಡ ಮಾಡುವುದಿಲ್ಲ, ಕೂಡಲೆ ಆರಂಭ ಮಾಡಿಸುತ್ತೇನೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ