ಆ್ಯಪ್ನಗರ

ದೇಶ ಭಕ್ತಿಯಿಂದ ಮಹದಾನಂದ

ದೇಶಭಕ್ತಿ ಮೈಗೂಡಿಸಿಕೊಂಡರೆ ಸಿಗುವ ಆನಂದ ಬೇರೆಲ್ಲೂಸಿಗದು ಎಂದು ಬಿಜೆಪಿಯ ಸಾಗರ ತಾಲೂಕು ಗ್ರಾಮಾಂತರ ಅಧ್ಯಕ್ಷ ಪ್ರಸನ್ನ ಕೆರೆಕೈ ತಿಳಿಸಿದರು.

Vijaya Karnataka 27 Sep 2019, 5:00 am
ಆನಂದಪುರಂ: ದೇಶಭಕ್ತಿ ಮೈಗೂಡಿಸಿಕೊಂಡರೆ ಸಿಗುವ ಆನಂದ ಬೇರೆಲ್ಲೂಸಿಗದು ಎಂದು ಬಿಜೆಪಿಯ ಸಾಗರ ತಾಲೂಕು ಗ್ರಾಮಾಂತರ ಅಧ್ಯಕ್ಷ ಪ್ರಸನ್ನ ಕೆರೆಕೈ ತಿಳಿಸಿದರು.
Vijaya Karnataka Web 26ANPP1_46


ಅವರು ಬುಧವಾರ ಇಲ್ಲಿನ ಶ್ರೀಲಕ್ಷಿತ್ರ್ಮೕ ರಂಗನಾಥ ಸ್ವಾಮಿ ಕಲ್ಯಾಣ ಮಂಟಪದ ಆವರಣದಲ್ಲಿಏರ್ಪಡಿಸಿದ್ದ ಪಂಡಿತ ದೀನದಯಾಳ್‌ ಉಪಾಧ್ಯಾಯರ ಜನ್ಮ ದಿನಾಚರಣೆ ಉದ್ದೇಶಿಸಿ ಮಾತನಾಡಿ, ಭಾರತೀಯರ ಮನೆ -ಮನಗಳಿಗೆ ದೇಶಭಕ್ತಿ ತಲುಪುವಂತೆ ಅವಿರತ ಶ್ರಮಿಸಿದ ದೀನ ದಯಾಳ ಉಪಾಧ್ಯಾಯರ ಕಾರ್ಯ ವೈಖರಿ ಮಾದರಿಯಾಗಿದೆ ಎಂದರು.

ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರತೀಯರಿಗೆ ಸಮಾನ ಕಾನೂನು ಇರಬೇಕು. ದೇಶದ ಸಮಗ್ರತೆಯಿಂದ ಪ್ರಗತಿ ಸಾಧ್ಯ. ದೇಶವನ್ನು ಪ್ರೀತಿಸುವವರ ಬದುಕು ಸಾರ್ಥಕವಾಗುತ್ತದೆ. ಇಂತಹ ಅಂಶಗಳನ್ನು ಭಾರತೀಯರಲ್ಲಿಬಿತ್ತಿದ ಮಹಾನ್‌ ಚೇತನ ದೀನದಯಾಳ್‌ ಎಂದರು. ಪ್ರಮುಖರಾದ ದೇವೇಂದ್ರಪ್ಪ ಯಲಕುಂದ್ಲಿ, ಆಚಾಪುರ ಶಾಂತಕುಮಾರ ಗೌಡ, ರೇವಪ್ಪ ಹೊಸಕೊಪ್ಪ, ಷಣ್ಮುಖಪ್ಪ, ರವಿಕುಮಾರ್‌ ಯಡೇಹಳ್ಳಿ, ಹೇಮಾರಾಜಪ್ಪ, ಮಧು ದಾಸಕೊಪ್ಪ, ಹಿರಿಯಣ್ಣಪ್ಪ, ನಾರಣಪ್ಪ, ನವೀನ ಜೇಡಿಸರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ