ಆ್ಯಪ್ನಗರ

ಅಚ್ಚುಕಟ್ಟಾದ ಊಟ ಇರಲಿ

ಪಟ್ಟಣದ ಬರುವೆ ಗ್ರಾಮದ ಮೆಟ್ರಿಕ್‌ ನಂತರದ ಬಿಸಿಎಂ ವಿದ್ಯಾರ್ಥಿನಿಲಯಕ್ಕೆ ಬಿಸಿಎಂ ಇಲಾಖೆ ಜಿಲ್ಲಾಧಿಕಾರಿ ಕುಮಾರ್‌ ಬುಧವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 20 Jul 2019, 5:00 am
ರಿಪ್ಪನ್‌ಪೇಟೆ: ಪಟ್ಟಣದ ಬರುವೆ ಗ್ರಾಮದ ಮೆಟ್ರಿಕ್‌ ನಂತರದ ಬಿಸಿಎಂ ವಿದ್ಯಾರ್ಥಿನಿಲಯಕ್ಕೆ ಬಿಸಿಎಂ ಇಲಾಖೆ ಜಿಲ್ಲಾಧಿಕಾರಿ ಕುಮಾರ್‌ ಬುಧವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web SMR-18RPT1


ಇತ್ತೀಚೆಗೆ ಹಾಸ್ಟೆಲ್‌ಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭ ಊಟದ ಕೊಠಡಿ ಬಳಿಯ ಗೋಡೆಯಲ್ಲಿ ನೀರು ಜಿನುಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದರು. ಮೇಲು ಮಹಡಿಯ ಶೌಚಾಲಯ ಬಂದ್‌ ಮಾಡಿ ಅದನ್ನು ಬೇರೆ ಕಡೆ ಬದಲಾಯಿಸಲು ಕ್ರಮ ಕೈಗೊಳ್ಳುವಂತೆ ತಾಲೂಕು ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿಗೆ ಕುಮಾರ್‌ ಸೂಚಿಸಿದರು.

ಇನ್ನೂ ದಾಸ್ತಾನು ಕೊಠಡಿಯಲ್ಲಿರುವ ಸಕ್ಕರೆ ಮತ್ತು ಬೇಳೆ, ಹುರುಳಿಕಾಳು ಸೇರಿದಂತೆ ತರಕಾರಿಯನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. ಧಾನ್ಯಗಳಲ್ಲಿ ಬೂಸ್ಟ್‌ ಬಾರದಿರಲು ಗಾಳಿ ಬರದಂತೆ ನೋಡಿಕೊಳ್ಳಬೇಕೆಂದು ಅಡುಗೆಯವರಿಗೆ ಮಾಹಿತಿ ನೀಡಿದರು. ಮಕ್ಕಳಿಗೆ ಚಪಾತಿ, ಚಟ್ನಿ ಹಾಗೂ ಕಾಳು ಪಲ್ಲೆ ಮಾಡಿಕೊಡುವಂತೆ ಸೂಚಿಸಿದರು. ಅಲ್ಲದೇ ಇದೇ ಸಂದರ್ಭ ಶುಚಿ-ರುಚಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ ಕುಮಾರ್‌, ವಿದ್ಯಾರ್ಥಿಗಳ ಕುಂದು ಕೊರತೆ ವಿಚಾರಿಸಿ, ಹೆಚ್ಚುವರಿ ಕೊಠಡಿ ಶೀಘ್ರ ಉದ್ಘಾಟನೆಯಾಗಲಿದೆ. ಆಗ ವಿದ್ಯಾರ್ಥಿಗಳಿಗೆ ಕೊಠಡಿ ವ್ಯವಸ್ಥೆ ಸರಿಯಾಗುತ್ತದೆ. ಅಲ್ಲಿವರೆಗೆ ಸುಧಾರಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಮೊಬೈಲ್‌ ಬಳಕೆ ಬಗ್ಗೆ ವಾರ್ಡನ್‌ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಆಗಸ್ಟ್‌ನಲ್ಲಿ ಹೆಚ್ಚುವರಿ ಕಟ್ಟಡವನ್ನು ಕ್ಷೇತ್ರದ ಶಾಸಕರು, ಇತರ ಜನಪ್ರತಿನಿಧಿಗಳು ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.

ಜಿಲ್ಲಾ ಬಿಸಿಎಂ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕ ಚನ್ನಪ್ಪ ಇಂಗಳಳ್ಳಿ , ತಾಲೂಕು ಬಿಸಿಎಂ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ವಾರ್ಡನ್‌ ಮೋಹನ್‌ ಕುಮಾರ್‌, ಇಲಾಖೆ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ