ಆ್ಯಪ್ನಗರ

‘ಹೈಟೆಕ್‌ ಲ್ಯಾಬ್‌ ನಿರ್ಮಾಣಕ್ಕೆ ಸೌಲಭ್ಯ’

ಜನ್ನಾಪುರ ನಗರ ಆರೋಗ್ಯ ಕೇಂದ್ರದಲ್ಲಿ ಹೈಟೆಕ್‌ ಲ್ಯಾಬ್‌ ನಿರ್ಮಿಸುವ ಸಂಬಂಧ ನಗರಸಭೆ ವತಿಯಿಂದ ಎಲ್ಲ ಸೌಲಭ್ಯ ಕಲ್ಪಿಸಿಕೊಡುವುದಾಗಿ ಪೌರಾಯುಕ್ತ ಮನೋಹರ್‌ ಭರವಸೆ ನೀಡಿದರು.

Vijaya Karnataka 8 Aug 2019, 5:00 am
ಭದ್ರಾವತಿ: ಜನ್ನಾಪುರ ನಗರ ಆರೋಗ್ಯ ಕೇಂದ್ರದಲ್ಲಿ ಹೈಟೆಕ್‌ ಲ್ಯಾಬ್‌ ನಿರ್ಮಿಸುವ ಸಂಬಂಧ ನಗರಸಭೆ ವತಿಯಿಂದ ಎಲ್ಲ ಸೌಲಭ್ಯ ಕಲ್ಪಿಸಿಕೊಡುವುದಾಗಿ ಪೌರಾಯುಕ್ತ ಮನೋಹರ್‌ ಭರವಸೆ ನೀಡಿದರು.
Vijaya Karnataka Web SMR-7BDVT4


ಆರೋಗ್ಯ ಕೇಂದ್ರದಲ್ಲಿ ಹೈಟೆಕ್‌ ಲ್ಯಾಬ್‌ ನಿರ್ಮಿಸುವಂತೆ ಭಾರತರತ್ನ ಸರ್‌.ಎಂ. ವಿಶ್ವೇಶ್ವರಯ್ಯ ಚಾರಿಟಬಲ್‌ ಟ್ರಸ್ಟ್‌, ಡಿ.ದೇವರಾಜ ಅರಸು ಜನಸ್ಪಂದನ ಸೇನೆ ಮತ್ತು ಭದ್ರಾ ಸುವರ್ಣ ಮಹಿಳಾ ಸೇನೆ ವತಿಯಿಂದ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಬುಧವಾರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಪೌರಾಯುಕ್ತರು ಪರಿಶೀಲನೆ ನಡೆಸಿದರು. ಹೈಟೆಕ್‌ ಲ್ಯಾಬ್‌ಗೆ ಅಗತ್ಯವಿರುವ ಉಪಕರಣಗಳನ್ನು ನಗರಸಭೆ ಅನುದಾನದಲ್ಲಿ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಪ್ರಸ್ತುತ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಕಾರ‍್ಯನಿರ್ವಹಿಸುವ ನಗರ ಆರೋಗ್ಯ ಕೇಂದ್ರದ ಲ್ಯಾಬ್‌ನಲ್ಲಿ ಎಚ್‌ಬಿಜಿಆರ್‌ಬಿಎಸ್‌, ಮಲೇರಿಯಾ, ಎಚ್‌ಬಿಎಸ್‌ಎಜಿ, ವಿಡಿಆರ್‌ಎಲ್‌, ಯೂರಿನ್‌, ಇಎಸ್‌ಆರ್‌, ಬ್ಲಡ್‌ ಗ್ರೂಪ್‌, ವಾಟರ್‌ ಟೆಸ್ಟ್‌, ಎಚ್‌ 2ಎಸ್‌ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಆರೋಗ್ಯ ಕೇಂದ್ರಕ್ಕೆ ಬರುವ ಈ ಭಾಗದ ನಿವಾಸಿಗಳಿಗೆ ಹೆಚ್ಚಿನ ಪ್ರಯೋಜನವಾಗುತ್ತಿದೆ ಎಂದರು.

ಹೈಟೆಕ್‌ ಲ್ಯಾಬ್‌ ಆದರೆ ಹೆಚ್ಚಿನ ಪ್ರಯೋಜನವಾಗಲಿದೆ. ಡೆಂಗೇ, ಚಿಕೂನ್‌ ಗುನ್ಯ, ಹೃದಯ ಹಾಗೂ ಕಿಡ್ನಿ ಸಂಬಂಧಿ ಕಾಯಿಲೆಗಳ ಪರೀಕ್ಷೆಗಳಿಗೆ ಅಗತ್ಯವಿರುವ ಉಪಕರಣ ಅವಶ್ಯವಿದೆ. ನಗರಸಭೆ ಅನುದಾನದಲ್ಲಿ ಉಪಕರಣ ಖರೀದಿಸುವುದಾಗಿ ಪೌರಾಯುಕ್ತರು ತಾಲೂಕು ಆರೋಗ್ಯಾಧಿಕಾರಿ ಎಂ.ಆರ್‌.ಗಾಯತ್ರಿ ಅವರಿಗೆ ಭರವಸೆ ನೀಡಿದ್ದಾರೆ. ಭಾರತರತ್ನ ಸರ್‌.ಎಂ ವಿಶ್ವೇಶ್ವರಯ್ಯ ಚಾರಿಟಬಲ್‌ ಟ್ರಸ್ಟ್‌ ಛೇರ್ಮನ್‌ ಆರ್‌. ವೇಣುಗೋಪಾಲ್‌, ನಗರಸಭೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಲಾಬ್‌ ಟೆಕ್ನಿಷಿಯನ್‌ ಸಚಿನ್‌, ಸಹಾಯಕ ದೇವರಾಜ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ