ಆ್ಯಪ್ನಗರ

ಹಕ್ಕುಪತ್ರಕ್ಕೆ ಒತ್ತಾಯಿಸಿ ಪಾದಯಾತ್ರೆ

ತಾಲೂಕಿನ ಮೂಡುಗೊಪ್ಪ ನಗರ ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ನೀಡದಿರುವ ಕ್ರಮ ವಿರೋಧಿಸಿ ಇಲ್ಲಿನ ಗ್ರಾ.ಪಂ ಉಪಾಧ್ಯಕ್ಷ, ಸಾಮಾಜಿಕ ಹೋರಾಟಗಾರ ಕರುಣಾಕರಶೆಟ್ಟಿ ಗುರುವಾರ ಪಾದಯಾತ್ರೆ ನಡೆಸಿದರು.

Vijaya Karnataka 18 Oct 2019, 5:00 am
ಹೊಸನಗರ : ತಾಲೂಕಿನ ಮೂಡುಗೊಪ್ಪ ನಗರ ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ನೀಡದಿರುವ ಕ್ರಮ ವಿರೋಧಿಸಿ ಇಲ್ಲಿನ ಗ್ರಾ.ಪಂ ಉಪಾಧ್ಯಕ್ಷ, ಸಾಮಾಜಿಕ ಹೋರಾಟಗಾರ ಕರುಣಾಕರಶೆಟ್ಟಿ ಗುರುವಾರ ಪಾದಯಾತ್ರೆ ನಡೆಸಿದರು.
Vijaya Karnataka Web hike forcing the claim
ಹಕ್ಕುಪತ್ರಕ್ಕೆ ಒತ್ತಾಯಿಸಿ ಪಾದಯಾತ್ರೆ

ಮೂಡುಗೊಪ್ಪ ನಗರದಿಂದ ಹೊಸನಗರ ತಾಲೂಕು ಕಚೇರಿವರೆಗೆ ಸುಮಾರು 17 ಕಿ.ಮೀ. ದೂರ ಕೈಗೊಂಡಿರುವ ಪಾದಯಾತ್ರೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಚಾಲನೆ ನೀಡಿ ಮಾತನಾಡಿ, ಹಕ್ಕುಪತ್ರ ನೀಡದಿರುವ ಕುರಿತು ಪಕ್ಷಾತೀತವಾಗಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. ಬಡ ರೈತರು, ಕೂಲಿಕಾರ್ಮಿಕರ ನ್ಯಾಯೋಚಿತ ಬೇಡಿಕೆಗೆ ಆಡಳಿತವರ್ಗ ಸ್ಪಂದಿಸುತ್ತಿಲ್ಲ.
ಸಮಸ್ಯೆಗೆ ಶೀಘ್ರದಲ್ಲಿಯೇ ಇತಿಶ್ರೀ ಹೇಳದಿದ್ದಲ್ಲಿ, ಖುದ್ದು ತಾವೇ ಪ್ರತಿಭಟನೆ ಮಾರ್ಗ ಹಿಡಿಯುವುದಾಗಿ ಎಚ್ಚರಿಸಿದರು. ಪಾದಯಾತ್ರೆಗೆ ಶುಭ ಹಾರೈಸಿ ಮಾತನಾಡಿದ ಸಾಹಿತಿ ಅಂಬ್ರಯ್ಯಮಠ, ಸರಕಾರಗಳು ಜನಸ್ನೇಹಿ ಆಡಳಿತ ನೀಡಬೇಕು. ಶ್ರೀಸಾಮಾನ್ಯನನ್ನು ವಿನಾಕಾರಣ ಸತಾಯಿಸುವುದು ಸರಿಯಲ್ಲ. ಅಲ್ಲದೇ, ಫಲಾನುಭವಿಗಳ ಆಯ್ಕೆಯಲ್ಲಿತಾರತಮ್ಯ ತೋರುವುದು ಅಕ್ಷಮ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ