ಆ್ಯಪ್ನಗರ

‘ಸೂರ‍್ಯನಮಸ್ಕಾರ’ದಿಂದ ಉಲ್ಲಾಸದ ಬದುಕು

ಸೂರ್ಯೋಪಾಸನೆಯಿಂದ ಮನಸ್ಸು ಚೈತನ್ಯದಿಂದ ಇರಲು ಸಾಧ್ಯ ಎಂದು ನಗರಸಭೆ ಪೌರಾಯುಕ್ತ ಮನೋಹರ್‌ ಹೇಳಿದರು.

Vijaya Karnataka 14 Feb 2019, 5:00 am
ಭದ್ರಾವತಿ: ಸೂರ್ಯೋಪಾಸನೆಯಿಂದ ಮನಸ್ಸು ಚೈತನ್ಯದಿಂದ ಇರಲು ಸಾಧ್ಯ ಎಂದು ನಗರಸಭೆ ಪೌರಾಯುಕ್ತ ಮನೋಹರ್‌ ಹೇಳಿದರು.
Vijaya Karnataka Web SMR-12BDVT2


ಅವರು ಹಳೇನಗರದ ಶ್ರೀವೀರಭದ್ರೇಶ್ವರ ಚಿತ್ರ ಮಂದಿರದ ಆವರಣದಲ್ಲಿ ಪತಂಜಲಿ ಪರಿವಾರದಿಂದ ರಥ ಸಪ್ತಮಿ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಸೂರ್ಯ ನಮಸ್ಕಾರ ಯಜ್ಞ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾಘ ಮಾಸದ ರಥ ಸಪ್ತಮಿ ದಿನವಾಗಿರುವ ಹಿನ್ನೆಲೆಯಲ್ಲಿ ಸೂರ್ಯ ನಮಸ್ಕಾರ ಮಾಡುವುದರಿಂದ ನಮ್ಮಲ್ಲಿನ ಋುಣಾತ್ಮಕ ಶಕ್ತಿ ನಿವಾರಣೆಯಾಗಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ನಿತ್ಯ ಯೋಗದೊಂದಿಗೆ ಸೂರ್ಯ ನಮಸ್ಕಾರ ಮಾಡುವುದರಿಂದ ಆರೋಗ್ಯ ವೃದ್ಧಿ ಸಾಧ್ಯ. ಹಿಂದಿನಿಂದಿಲೂ ಋುಷಿ ಮಹರ್ಷಿಗಳು ಯೋಗಾಸನ ಕಟ್ಟುನಿಟ್ಟಾಗಿ ಮಾಡುತ್ತಿದ್ದರಿಂದ ನೂರಾರು ವರ್ಷ ಕಾಲ ಆರೋಗ್ಯವಂತರಾಗಿ ಬದುಕುತ್ತಿದ್ದರು ಎಂದರು.

ಯೋಗ ಸಾಧಕ ಚನ್ನಪ್ಪ ಮಾತನಾಡಿ, ಪ್ರತಿಯೊಬ್ಬರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ ಮಾಡಬೇಕು. ಯೋಗ ಗುರು ಬಾಬ ರಾಮ್‌ ದೇವ್‌, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಯೋಗಕ್ಕೆ ವಿಶ್ವ ಮಾನ್ಯತೆ ತಂದುಕೊಟ್ಟಿರುವುದು ಹೆಮ್ಮೆಯ ಸಂಗತಿ ಎಂದರು. ಪತಂಜಲಿ ಯೋಗ ಸಮಿತಿಯ ಅನ್ನಪೂರ್ಣ, ವಿಶ್ವಹಿಂದೂ ಪರಿಷತ್‌ನ ಹಾ.ರಾಮಪ್ಪ, ಪ್ರಮುಖರಾದ ಶಿವಕುಮಾರ್‌, ಸಂತೋಷ್‌, ಮಹೇಶ್‌, ನಾಗರಾಜ್‌, ಮದನ್‌, ರಶ್ಮೀ, ರತ್ನ, ಪ್ರೇಮ ಗೋವಿಂದ್‌, ಜಂಗಮಪ್ಪ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ