ಆ್ಯಪ್ನಗರ

ಹಿಂದೂ ಮಹಾಸಭಾ ಗಣೇಶ ಮೆರವಣಿಗೆ ಶಾಂತಿಯುತ

ಪಟ್ಟಣದ ಹುಚ್ಚುರಾಯಸ್ವಾಮಿ ದೇವಸ್ಥಾನ ಎದುರು ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಕಾರ‍್ಯಕ್ರಮ ಭಾನುವಾರ ಅದ್ಧೂರಿ, ಶಾಂತಿಯುತವಾಗಿ ನೆರವೇರಿತು.

Vijaya Karnataka 24 Sep 2019, 5:00 am
ಶಿಕಾರಿಪುರ: ಪಟ್ಟಣದ ಹುಚ್ಚುರಾಯಸ್ವಾಮಿ ದೇವಸ್ಥಾನ ಎದುರು ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಕಾರ‍್ಯಕ್ರಮ ಭಾನುವಾರ ಅದ್ಧೂರಿ, ಶಾಂತಿಯುತವಾಗಿ ನೆರವೇರಿತು.
Vijaya Karnataka Web hindu maha ganesha procession is peaceful
ಹಿಂದೂ ಮಹಾಸಭಾ ಗಣೇಶ ಮೆರವಣಿಗೆ ಶಾಂತಿಯುತ


ಭಾನುವಾರ ಬೆಳಗಿನ ಜಾವ ಗಣಪತಿ ವಿಸರ್ಜನೆ ಕಾರ‍್ಯಕ್ಕೆ ಚಾಲನೆ ನೀಡಲಾಯಿತು, ಅಲಂಕೃತ ಟ್ರಾಕ್ಟರ್‌ನಲ್ಲಿಗಣೇಶ ಮೂರ್ತಿ ಕೂರಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಡೊಳ್ಳು ಕುಣಿತ, ಹಲಗೆ ವಾದ್ಯ ಸೇರಿ ಹಲವು ಜನಪದ ಮೇಳ ಇದ್ದವು. ಪಟ್ಟಣದ ಪ್ರಮುಖ ಬೀದಿಗಳಲ್ಲಿಸಂಚರಿಸಿದ ಮೆರವಣಿಗೆಯಲ್ಲಿನೂರಾರು ಯುವಕರು ಪಾಲ್ಗೊಂಡು ಪ್ರಮುಖ ವೃತ್ತಗಳಲ್ಲಿನೃತ್ಯ ಮಾಡಿದರು. ಮೆರವಣಿಗೆಗೆ ಬಿಗಿ ಪೊಲೀಸ್‌ ಬಂದೋಬಸ್‌್ತ ವಹಿಸಲಾಗಿತ್ತು. ರಾತ್ರಿ ಹುಚ್ಚುರಾಯಸ್ವಾಮಿ ಕೆರೆಯಲ್ಲಿಗಣೇಶಮೂರ್ತಿ ವಿಸರ್ಜಿಸಲಾಯಿತು. ಅಧ್ಯಕ್ಷ ಜೀವರಾಜ್‌, ಯಾದವಮೂರ್ತಿ, ಸತೀಶ, ಪ್ರಕಾಶ್‌, ಗಿರೀಶ್‌ ಗೋರ್ಪಡೆ, ಕೆ.ಎಂ.ಜಗದೀಶ್‌, ಎಸ್‌.ಎಂ.ಪ್ರಕಾಶ್‌, ಮಂಜುನಾಥ್‌ ಸಾವಿರಾರು ಯುವಕರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ