ಆ್ಯಪ್ನಗರ

ಜೇನು ದಾಳಿ:ವೃದ್ಧ ಸಾವು

ಇಲ್ಲಿನ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಪ್ರಗತಿ ಶಾಲೆ ಸಮೀಪ ಜೇನು ಹುಳುಗಳು ದಾಳಿ ಮಾಡಿದ ಹಿನ್ನೆಲೆಯಲ್ಲಿ ಹಲವರು ಗಾಯಗೊಂಡು ಒಬ್ಬ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

Vijaya Karnataka 4 May 2019, 5:00 am
ಸಾಗರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಪ್ರಗತಿ ಶಾಲೆ ಸಮೀಪ ಜೇನು ಹುಳುಗಳು ದಾಳಿ ಮಾಡಿದ ಹಿನ್ನೆಲೆಯಲ್ಲಿ ಹಲವರು ಗಾಯಗೊಂಡು ಒಬ್ಬ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
Vijaya Karnataka Web honeybee attack old man death
ಜೇನು ದಾಳಿ:ವೃದ್ಧ ಸಾವು

ಲೋಹಿಯಾನಗರದ ಕೂಲಿ ಕಾರ್ಮಿಕ ಆಲಿಮುತ್ತು(60)ಮೃತಪಟ್ಟವ. ಮಧ್ಯಾಹ್ನದ ಬಿಸಿಲಿನ ಝಳಕ್ಕೆ ಏಕಾಏಕಿ ಗೂಡು ಬಿಟ್ಟ ಜೇನುಹುಳುಗಳು ಜೋಗ ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೆæೕ ದಾಳಿ ಮಾಡಿವೆ. ಈ ಸಂದರ್ಭ ಇಬ್ಬರು ದ್ವಿಚಕ್ರವಾಹನ ಸವಾರರು ಸ್ಕಿಡ್‌ ಆಗಿ ಬಿದ್ದು ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಆಲಿಮುತ್ತು ಅವರ ಮೇಲೆ ಜೇನುಹುಳ ದಾಳಿ ಮಾಡಿದ್ದರಿಂದ ತೀವ್ರ ಗಾಯಗೊಂಡು ಸರಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.
ಸಾವಿರಾರು ವಿದ್ಯಾರ್ಥಿಗಳು ಶಿಕ್ಷ ಣ ಪಡೆಯುತ್ತಿರುವ ಪ್ರಗತಿ ಸಂಯುಕ್ತ ಶಾಲೆಗೆ ಬೇಸಿಗೆ ರಜೆ ಇರುವ ಹಿನ್ನೆಲೆಯಲ್ಲಿ ಆಗಬಹುದಾದ ದೊಡ್ಡ ಅನಾಹುತ ತಪ್ಪಿದೆ . ಅಲ್ಲದೇ ಸಾಕಷ್ಟು ವಾಹನ ಮತ್ತು ಜನಸಂಚಾರದ ಮುಖ್ಯ ರಸ್ತೆ ಸಹ ಇದಾಗಿದೆ. ಅಲ್ಲದೇ ಪ್ರಗತಿ ಶಾಲೆ ಕಟ್ಟಡದಲ್ಲೇ ಹಲವು ಹೆಜ್ಜೇನು ಗೂಡುಗಳಿದ್ದು, ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ