ಆ್ಯಪ್ನಗರ

ರಸ್ತೆಗೆ ಕುದುರೆ ಅಡ್ಡ: ಸರಣಿ ಅಪಘಾತ

ರಸ್ತೆಗೆ ಕುದುರೆಗಳು ಅಡ್ಡ ಬಂದು ಸರಣಿ ಅಪಘಾತ ನಡೆದ ಘಟನೆ ಶುಕ್ರವಾರ ವಿದ್ಯಾನಗರದಲ್ಲಿ ನಡೆದಿದೆ.

Vijaya Karnataka 26 May 2018, 5:00 am
ಶಿವಮೊಗ್ಗ: ರಸ್ತೆಗೆ ಕುದುರೆಗಳು ಅಡ್ಡ ಬಂದು ಸರಣಿ ಅಪಘಾತ ನಡೆದ ಘಟನೆ ಶುಕ್ರವಾರ ವಿದ್ಯಾನಗರದಲ್ಲಿ ನಡೆದಿದೆ.
Vijaya Karnataka Web horse enter road series accident
ರಸ್ತೆಗೆ ಕುದುರೆ ಅಡ್ಡ: ಸರಣಿ ಅಪಘಾತ


ಶಿವಮೊಗ್ಗ-ಭದ್ರಾವತಿ ಮುಖ್ಯ ರಸ್ತೆಯಲ್ಲಿನ ವಿದ್ಯಾನಗರ ಸಂಚಾರಿ ಪೊಲೀಸ್‌ ಠಾಣೆ ಸಮೀಪದಲ್ಲಿ 10ಕ್ಕೂ ಹೆಚ್ಚು ಬಿಡಾಡಿ ಕುದುರೆಗಳು ರಸ್ತೆಗೆ ಏಕಾಏಕಿ ನುಗ್ಗಿವೆ. ಪರಿಣಾಮ ಭದ್ರಾವತಿ ಕಡೆಗೆ ಸಂಚರಿಸುತ್ತಿದ್ದ ಐದಕ್ಕೂ ಹೆಚ್ಚು ವಾಹನಗಳ ನಡುವೆ ಸರಣಿ ಅಪಘಾತ ಉಂಟಾಗಿದೆ.

ಏಕಾಏಕಿ ಕುದುರೆಗಳು ರಸ್ತೆಗೆ ಅಡ್ಡ ಬಂದ ಪರಿಣಾಮ ಅಪಘಾತ ತಪ್ಪಿಸಲು ಗೂಡ್ಸ್‌ ಆಟೋ ಚಾಲಕ ಬ್ರೇಕ್‌ ಹಾಕಿದ್ದಾನೆ. ಆಟೋ ಹಿಂಭಾಗದಲ್ಲಿ ಬರುತ್ತಿದ್ದ ಟ್ರ್ಯಾಕ್ಸ್‌ , ಮಾರುತಿ ಸ್ವಿಫ್ಟ್‌, ಮಾರುತಿ 800 ಹಾಗೂ ಟೊಯೋಟೋ ಇಟಿಯೋಸ್‌ ವಾಹನಗಳು ಪರಸ್ಪರ ಹಿಂಬದಿಯಿಂದ ಡಿಕ್ಕಿ ಹೊಡೆದುಕೊಂಡಿವೆ. ಅದೃಷ್ಟವಶಾತ್‌ ವಾಹನದಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಅಪಘಾತದಿಂದಾಗಿ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ