ಆ್ಯಪ್ನಗರ

ಹೊಸಗುಂದ ದೇವಾಲಯ ಶೃಂಗೇರಿ ಪೀಠಕ್ಕೆ ಸಮರ್ಪಣೆ

ಐತಿಹಾಸಿಕ ಕಾಲಘಟದಲ್ಲಿ ರಾಜರು ರಕ್ತ ಸುರಿಸಿ, ತಪಸ್ವಿಗಳು ಪುಣ್ಯ ಹರಿಸಿ ಕಟ್ಟಿದ ನಾಡು ಹೊಸಗುಂದ. ದೇವಾಲಯ ನಗರವಾಗಿ ಹೊರಹೊಮ್ಮಿದ ಈ ಕ್ಷೇತ್ರ ವಿಶ್ವದ ಭೂಪಟದಲ್ಲಿ ವಿಶಿಷ್ಟ ಪ್ರವಾಸಿ ಸ್ಥಳವಾಗಲಿದೆ ಎಂದು ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರುಗಳಾದ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

Vijaya Karnataka 4 May 2019, 5:00 am
ಆನಂದಪುರಂ: ಐತಿಹಾಸಿಕ ಕಾಲಘಟದಲ್ಲಿ ರಾಜರು ರಕ್ತ ಸುರಿಸಿ, ತಪಸ್ವಿಗಳು ಪುಣ್ಯ ಹರಿಸಿ ಕಟ್ಟಿದ ನಾಡು ಹೊಸಗುಂದ. ದೇವಾಲಯ ನಗರವಾಗಿ ಹೊರಹೊಮ್ಮಿದ ಈ ಕ್ಷೇತ್ರ ವಿಶ್ವದ ಭೂಪಟದಲ್ಲಿ ವಿಶಿಷ್ಟ ಪ್ರವಾಸಿ ಸ್ಥಳವಾಗಲಿದೆ ಎಂದು ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರುಗಳಾದ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
Vijaya Karnataka Web SMR-3ANPP4 HOSAGUNDA


ಅವರು ಗುರುವಾರ ಹೊಸಗುಂದದ ಶ್ರೀಉಮಾಮಹೇಶ್ವರ ಹಾಗೂ ಪರಿವಾರ ದೇವತೆಗಳ ಆಲಯಗಳ ಪುನರ್‌ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯ ನೆರವೇರಿಸಿ ಧರ್ಮ ಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದೇವಾಲಯ ನಿರ್ಮಾಣ ಪುಣ್ಯದ ಕೆಲಸ. ಸಂಪೂರ್ಣ ಪಾಳು ಬಿದ್ದ ದೇವಾಲಯವನ್ನು ಜೀರ್ಣೋದ್ಧಾರಗೊಳಿಸುವುದು ನೂರಾರು ಹೊಸ ದೇವಾಲಯ ನಿರ್ಮಿಸುವುದಕ್ಕಿಂತ ಹೆಚ್ಚಿನ ಪುಣ್ಯದ ಕಾರ್ಯ. ಅಂತಹ ಪುಣ್ಯ ಪ್ರದ ಕಾರ್ಯ ಈ ಕ್ಷೇತ್ರದಲ್ಲಿ ನಡೆದಿದೆ. ಈ ಕ್ಷೇತ್ರದಲ್ಲಿ ವಿವಿಧ ದೇವತೆಗಳು ಸದಾ ನೆಲೆಸಿ ಭಕ್ತರನ್ನು ಉದ್ದರಿಸುತ್ತಾರೆ ಎಂದರು.

ಈ ಕ್ಷೇತ್ರವನ್ನು ಶೃಂಗೇರಿ ಶಾರದಾ ಪೀಠ ವಹಿಸಿಕೊಂಡು ಇನ್ನಷ್ಟು ಉಚ್ರಾಯ ಸ್ಥಿತಿಗೆ ಕೊಂಡೊಯ್ಯಬೇಕು ಎಂದು ದೇವಾಲಯದ ಸೇವಾ ಟ್ರಸ್ಟಿನ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ.ಎನ್‌. ಶಾಸ್ತ್ರಿ ಭಿನ್ನವಿಸಿಕೊಂಡರು. ಇದಕ್ಕೆ ಶ್ರೀಗಳು ಸಮ್ಮತಿ ಸೂಚಿಸಿ ಸಂಪೂರ್ಣ ಅಭಿವೃದ್ಧಿಗೆ ಶಾರದಾ ಪೀಠ ಮತ್ತು ಈಗಿನ ದೇವಾಲಯ ಟ್ರಸ್ಟ್‌ ಹಾಗೂ ಸಮಸ್ತ ಗ್ರಾಮಸ್ಥರು ಒಟ್ಟಾಗಿ ಶ್ರಮಿಸುವಂತಾಗಲಿ ಎಂದರು.

ಟ್ರಸ್ಟ್‌ ಪದಾಧಿಕಾರಿಗಳಾದ ಶೋಭಾ ಶಾಸ್ತ್ರಿ, ಪುಟ್ಟಪ್ಪ ಕೋವಿ, ಹೆಡ್ತ್ರಿ ಬಸವರಾಜಪ್ಪ ಗೌಡ, ಗಿರೀಶ ಕೋವಿ, ಜ್ಯೋತಿ ಕೋವಿ, ಮಹೇಶ ಹೆಗಡೆ ಮಂಕಾಳೆ, ಶೇಷಗಿರಿ, ಶ್ರೀಧರ ಅಡಿಗ, ಸಿಗಂದೂರಿನ ಧರ್ಮದರ್ಶಿ ಡಾ.ರಾಮಪ್ಪ, ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಡಾ.ಗೌರಿಶಂಕರ, ದೆಹಲಿಯ ಭಾರತೀ ಪೀಠದ ಶ್ರೀಸರ್ವಾನಂದ ಭಾರತೀ ಸ್ವಾಮೀಜಿ, ದೆಹಲಿಯ ದೀನದಯಾಳ ಸೇವಾ ಟ್ರಸ್ಟ್‌ ಮುಖ್ಯಸ್ಥ ಅತುಲ್‌ ಜೈನ್‌, ಆರೆಸ್ಸೆಸ್‌ ಪರ್ಯಾವರಣ ಸಂರಕ್ಷ ಣ ವಿಭಾಗದ ಸಂಚಾಲಕ ಗೋಪಾಲ ಆರ್ಯ, ರಾಜೇಶ ಅಗರವಾಲ್‌, ಹುಂಚದ ಬಿಲ್ಲೇಶ್ವರ ದೇವಾಲಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ