ಆ್ಯಪ್ನಗರ

ಹುಲಿಕಲ್‌ ಘಾಟಿ ರಸ್ತೆಯಲ್ಲಿ ಹೊಂಡ ಗುಂಡಿ: ಪ್ರಯಾಸದ ಪ್ರಯಾಣ

ತಾಲೂಕಿನ ಹುಲಿಕಲ್‌ ಘಾಟಿ ಸಮೀಪ ರಾಜ್ಯ ಹೆದ್ದಾರಿಯ ನಡುವೆ ಬೃಹದಾಕಾರದ ಹೊಂಡಗುಂಡಿಗಳು ಬಿದ್ದಿದ್ದು, ವಾಹನ ಚಾಲಕರು ತೊಂದರೆ ಅನುಭವಿಸುವಂತಾಗಿದೆ.

Vijaya Karnataka 28 Jul 2019, 5:00 am
ಹೊಸನಗರ: ತಾಲೂಕಿನ ಹುಲಿಕಲ್‌ ಘಾಟಿ ಸಮೀಪ ರಾಜ್ಯ ಹೆದ್ದಾರಿಯ ನಡುವೆ ಬೃಹದಾಕಾರದ ಹೊಂಡಗುಂಡಿಗಳು ಬಿದ್ದಿದ್ದು, ವಾಹನ ಚಾಲಕರು ತೊಂದರೆ ಅನುಭವಿಸುವಂತಾಗಿದೆ.
Vijaya Karnataka Web SMR-27HOSP2


ಇದು ಉಡುಪಿ ಜಿಲ್ಲೆಯೊಂದಿಗೆ ತಾಲೂಕಿನ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತವೆ. ಕುಂದಾಪುರ, ಉಡುಪಿಯಿಂದ ಹುಲಿಕಲ್‌, ಮಾಸ್ತಿಕಟ್ಟೆ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುವ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ರಸ್ತೆ ನಡುವೆ ಹೊಂಡ ಬಿದ್ದಿರುವ ಕಾರಣಕ್ಕೆ ಪ್ರಯಾಸದ ಪ್ರಯಾಣವಾಗಿ ಮಾರ್ಪಟ್ಟಿದೆ.

ಮಳೆಗಾಲ ಆರಂಭಗೊಂಡ ನಂತರ ಮಾಸ್ತಿಕಟ್ಟೆಯಿಂದ ಹುಲಿಕಲ್‌ ನಡುವೆ ಹಲವು ಕಡೆ ರಸ್ತೆ ಹದಗೆಟ್ಟಿದ್ದು, ದ್ವಿಚಕ್ರ ಮತ್ತು ಸಣ್ಣ ವಾಹನ ಚಾಲಕರಿಗೆ ಸಂಚಾರ ಸವಾಲಾಗಿ ಪರಿಣಮಿಸಿದೆ. ರಾತ್ರಿ ವೇಳೆಯಂತೂ ದೊಡ್ಡ ಹೊಂಡಗಳಲ್ಲಿ ನೀರು ಸಂಗ್ರಹಗೊಂಡು ಹೊಂಡ ಇರುವ ಅರಿವಿಲ್ಲದೇ ಅವಘಡಗಳಿಗೆ ಆಹ್ವಾನ ನೀಡುತ್ತಿದೆ.

ಪ್ರತಿ ವರ್ಷವೂ ಈ ಭಾಗದಲ್ಲಿ ರಸ್ತೆ ಹಾಳಾಗುತ್ತಿದ್ದರೂ, ಸಂಬಂಧಪಟ್ಟ ಇಲಾಖೆ ಗಮನ ಹರಿಸುತ್ತಿಲ್ಲ. ಬೃಹತ್‌ ಹೊಂಡಗುಂಡಿಗಳು ಬಿದ್ದಿದ್ದರೂ, ತಾತ್ಕಾಲಿಕ ದುರಸ್ತಿ ಸಹ ನಡೆಸಿಲ್ಲ. ಮಳೆಗಾಲದ ವೇಳೆ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

----

ಬೃಹತ್‌ ಗಾತ್ರದ ಹೊಂಡ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಮಳೆ ಬರುವ ವೇಳೆ, ರಾತ್ರಿ ಪ್ರಯಾಣ ತೀವ್ರ ಕಷ್ಟಕರವಾಗಿದೆ. ದ್ವಿಚಕ್ರ ಮತ್ತು ಸಣ್ಣ ವಾಹನ ಚಾಲಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ದುರಸ್ತಿ ಕಾರ‍್ಯ ನಡೆಸಬೇಕು.

-ಕೃಷ್ಣಾನಂದ ಕಿಣಿ, ಹುಲಿಕಲ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ