ಆ್ಯಪ್ನಗರ

ನಾಳೆ ಉಪವಾಸ ಸತ್ಯಾಗ್ರಹ

ಭದ್ರಾ ಜಲಾಶಯ ವೃತ್ತ ಗುತ್ತಿಗೆ ಕಾರ್ಮಿಕರ ಸಂಘದಿಂದ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಫೆ.11ರಂದು ಬೆಳಗ್ಗೆ 10ಕ್ಕೆ ಭದ್ರಾವತಿಯ ಮಿಲ್ಟ್ರಿ ಕ್ಯಾಂಪ್‌ ಬಳಿ ಇರುವ ಜಲ ಸಂಪನ್ಮೂಲ ಇಲಾಖೆ ಕಾರ‍್ಯಪಾಲಕ ಅಭಿಯಂತರರ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಸಿ.ಮಾಯಣ್ಣ ಹೇಳಿದರು.

Vijaya Karnataka 10 Feb 2019, 5:00 am
ಶಿವಮೊಗ್ಗ: ಭದ್ರಾ ಜಲಾಶಯ ವೃತ್ತ ಗುತ್ತಿಗೆ ಕಾರ್ಮಿಕರ ಸಂಘದಿಂದ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಫೆ.11ರಂದು ಬೆಳಗ್ಗೆ 10ಕ್ಕೆ ಭದ್ರಾವತಿಯ ಮಿಲ್ಟ್ರಿ ಕ್ಯಾಂಪ್‌ ಬಳಿ ಇರುವ ಜಲ ಸಂಪನ್ಮೂಲ ಇಲಾಖೆ ಕಾರ‍್ಯಪಾಲಕ ಅಭಿಯಂತರರ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಸಿ.ಮಾಯಣ್ಣ ಹೇಳಿದರು.
Vijaya Karnataka Web hunger strike tomorrow
ನಾಳೆ ಉಪವಾಸ ಸತ್ಯಾಗ್ರಹ


ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅವರು ಮಾತನಾಡಿ, ಭದ್ರಾ ಜಲಾಶಯ ವೃತ್ತದಲ್ಲಿ ಸುಮಾರು 25ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಉಪ ವಿಭಾಗವಾರು ಸೌಡಿ, ಲಿಪಿತ ಸಹಾಯಕ, ಗೇಟ್‌ ರೀಡರ್‌, ಡ್ರೈವರ್‌, ಸ್ಯ್ಕಾವೆಂಜರ್‌, ಹೆವಿಮಜದೂರು, ವಾಚ್‌ಮೆನ್‌, ವಾಲ್‌ಮೆನ್‌, ಜವಾನರ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಮಾರು 600 ಗುತ್ತಿಗೆ ಕಾರ್ಮಿಕರಿಗೆ ಕಳೆದ 6 ತಿಂಗಳಿನಿಂದ ವೇತನ ಸಿಗದೇ ಯಾವುದೇ ರೀತಿಯ ಸುರಕ್ಷ ತಾ ಸೌಲಭ್ಯ ಸಿಗದೇ ಕಾರ್ಮಿಕರ ಜೀವನ ದುಸ್ಥಿತಿಯಲ್ಲಿದೆ ಎಂದರು.

ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಮುಖೇನ ಹಾಗೂ ಮೌಖಿಕವಾಗಿ ಮನವಿ ಮಾಡಿಕೊಂಡರೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಶೋಚನೀಯ. ಪ್ರತಿ ತಿಂಗಳು ನಿಗದಿತ ದಿನಾಂಕದಂದು ವೇತನ ಪಾವತಿಸಬೇಕು. ಬಾಕಿ ಇರುವ ವೇತನ ಕೂಡಲೇ ಪಾವತಿಯಾಗಬೇಕು. ವೇತನ ಸಹಿತ ಗಳಿಕೆ ರಜೆ ನೀಡಬೇಕು. ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು. ಗುತ್ತಿಗೆ ಪದ್ಧತಿ ರದ್ದುಮಾಡಿ ಸರಕಾರದಿಂದಲೇ ನೇರವಾಗಿ ವೇತನ ಪಾವತಿಸಬೇಕು. ಸುರಕ್ಷ ತಾ ಸೌಲಭ್ಯ ಒದಗಿಸಬೇಕು ಸೇರಿದಂತೆ ಇತರೆ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಸದರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ರಾದ ಸೀತಾರಾಮ್‌, ಬಿ.ಪ್ರಕಾಶ್‌, ಬಿ.ಪಾಂಡುರಂಗ, ಜಗದೀಶ್‌, ಕಾರ್ಯದರ್ಶಿ ಎನ್‌.ಹರೀಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ