ಆ್ಯಪ್ನಗರ

ಪರಿಸರ ಸಂರಕ್ಷಿಸಿದರೆ ವಿಕೋಪ ದೂರ

ಮಲೆನಾಡು ಭಾಗ ಅಪಾರ ಪ್ರಮಾಣದಲ್ಲಿ ಪರಿಸರ ನಾಶಕ್ಕೆ ತುತ್ತಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ದರ್ಶನ್‌ ಹೇಳಿದರು.

Vijaya Karnataka 7 Jun 2019, 5:00 am
ಸಾಗರ: ಮಲೆನಾಡು ಭಾಗ ಅಪಾರ ಪ್ರಮಾಣದಲ್ಲಿ ಪರಿಸರ ನಾಶಕ್ಕೆ ತುತ್ತಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ದರ್ಶನ್‌ ಹೇಳಿದರು.
Vijaya Karnataka Web SMR-05SGR7


ಇಲ್ಲಿನ ಬಿ.ಹೆಚ್‌. ರಸ್ತೆಯಲ್ಲಿರುವ ತಾಯಿ ಮಗು ಸಾರ್ವಜನಿಕ ಸರಕಾರಿ ಆಸ್ಪತ್ರೆ ಆವರಣದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಬುಧವಾರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಇಲ್ಲಿನ 31 ವಾರ್ಡಗಳಲ್ಲೂ ಗಿಡಗಳನ್ನು ನೆಟ್ಟು ಗ್ರೀನ್‌ ಸಿಟಿಯಾಗಿ ಮಾಡುವ ಯತ್ನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಪರಿಸರ ಇದ್ದರೆ ಮಾತ್ರ ಮಾನವ ಬದುಕಲು ಸಾಧ್ಯ. ಆದರೆ ಪರಿಸರ ಬೆಳೆಸಲು ನಮ್ಮ ಯೋಚನೆ, ಕಾರ‍್ಯ ಸಾಗುತ್ತಿಲ್ಲ. ಈ ಬಗ್ಗೆ ದೊಡ್ಡ ಮಟ್ಟದ ಜನಜಾಗೃತಿಯೇ ಆಗಬೇಕಾಗಿದೆ. ಪ್ರತಿ ಊರಿನಲ್ಲೂ ಪರಿಸರವನ್ನು ಬೆಳೆಸಿ, ಸಂರಕ್ಷಿಸಿದರೆ ಪ್ರಕೃತಿ ವಿಕೋಪಗಳು ಇಲ್ಲವಾಗುತ್ತದೆ ಎಂದರು. ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು, ನಗರಸಭೆ ಸಿಬ್ಬಂದಿ, ತಾಯಿ ಮಗು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಇದ್ದರು. ಶೈಲೇಶ್‌ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ