ಆ್ಯಪ್ನಗರ

ಪ್ರಕೃತಿ ರಕ್ಷಿಸಿದರೆ ದೇವರಿಗೆ ಸಂತಸ: ಸ್ವಾಮೀಜಿ

ದೇವರು ಪ್ರಕೃತಿಯ ಅವಿಭಾಜ್ಯ ಅಂಗ. ಪ್ರಕೃತಿ ಸಂರಕ್ಷಣೆ ಮಾಡಿದದರೆ ದೇವರು ಮೆಚ್ಚಿ ಹರಸುತ್ತಾನೆ ಎಂದು ಆನಂದಪುರಂ ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

Vijaya Karnataka 28 Aug 2019, 5:00 am
ಆನಂದಪುರಂ : ದೇವರು ಪ್ರಕೃತಿಯ ಅವಿಭಾಜ್ಯ ಅಂಗ. ಪ್ರಕೃತಿ ಸಂರಕ್ಷಣೆ ಮಾಡಿದದರೆ ದೇವರು ಮೆಚ್ಚಿ ಹರಸುತ್ತಾನೆ ಎಂದು ಆನಂದಪುರಂ ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
Vijaya Karnataka Web SMR-27ANPP8 KENJAGAPUR


ಅವರು ಸೋಮವಾರ ಕೆಂಜಗಾಪುರದ ಇತಿಹಾಸ ಪ್ರಸಿದ್ಧ ಶ್ರೀವೀರಭದ್ರೇಶ್ವರ ದೇವಾಲಯದಲ್ಲಿಹಮ್ಮಿಕೊಂಡಿದ್ದ ಕೊನೆಯ ಶ್ರಾವಣ ಸೋಮವಾರದ ವಿಶೇಷ ಪೂಜೆ ಮತ್ತು ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನಮ್ಮ ಪೂರ್ವಜರು ಪ್ರಕೃತಿಯ ಗಿಡ ಮರ, ಪ್ರಾಣಿ ಪಕ್ಷಿ ಎಲ್ಲವನ್ನೂ ದೇವರೆಂದು ಬೇರೆ ಬೇರೆ ರೀತಿಯಲ್ಲಿಪೂಜಿಸುತ್ತಿದ್ದರು. ಈಗ ಹಣದಾಸೆಗೆ ಬೆಟ್ಟ ಅಗೆದು ಗಣಿಗಾರಿಕೆ ಮಾಡಲಾಗುತ್ತಿದೆ. ನಿರ್ಸಗ ಸಹಜ ಗುಡ್ಡಗಳಲ್ಲಿಅಸಹಜ ಮರ ಬೆಳೆಸುವುದು, ರೆಸಾರ್ಟ್‌ ನಿರ್ಮಿಸುವುದು ಇತ್ಯಾದಿ ನಡೆಯುತ್ತಿದೆ. ಇದರಿಂದ ಪ್ರಕೃತಿ ವಿಕೋಪದ ಹಲವು ಘಟನೆಗಳು ಮರುಕಳಿಸುತ್ತಿವೆ ಎಂದರು. ಉತ್ತರ ಕರ್ನಾಟಕದ ಜನ ಸದಾ ದಾನಶೂರರು ಮತ್ತು ಉದಾರಿಗಳು. ಅವರ ಸಂಕಷ್ಟಕ್ಕೆ ಎಲ್ಲರೂ ಸ್ಪಂದಿಸುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿದೇವಾಲಯ ಸಮಿತಿಯ ಪದಾಧಿಧಿಕಾರಿಗಳು, ಮುಜರಾಯಿ ಸಮಿತಿ ಸದಸ್ಯರು ಮತ್ತು ಭಕ್ತರು ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ