ಆ್ಯಪ್ನಗರ

‘ಪರಿಸರ ಮಹತ್ವ ಅರಿಯದಿದ್ದರೆ ಗಂಡಾಂತರ’

ಪರಿಸರ ಕಾಳಜಿ ಇಲ್ಲದವರಿಂದ ನಿರಂತರವಾಗಿ ಭೂ ತಾಯಿ ಮೇಲೆ ನಿರಂತರ ಶೋಷಣೆ ನಡೆಯುತ್ತದೆ. ಪರಿಸರ ನಾಶ ಹೆಚ್ಚಾದರೆ ಜೀವ ಜಗತ್ತು ಉಳಿಯಲು ಸಾಧ್ಯವಿಲ್ಲ ಎಂದು ಜಲತಜ್ಞ ಚಕ್ರವಾಕ ಸುಬ್ರಮಣ್ಯ ಅಭಿಪ್ರಾಯಪಟ್ಟರು.

Vijaya Karnataka 29 Dec 2018, 5:00 am
ತೀರ್ಥಹಳ್ಳಿ: ಪರಿಸರ ಕಾಳಜಿ ಇಲ್ಲದವರಿಂದ ನಿರಂತರವಾಗಿ ಭೂ ತಾಯಿ ಮೇಲೆ ನಿರಂತರ ಶೋಷಣೆ ನಡೆಯುತ್ತದೆ. ಪರಿಸರ ನಾಶ ಹೆಚ್ಚಾದರೆ ಜೀವ ಜಗತ್ತು ಉಳಿಯಲು ಸಾಧ್ಯವಿಲ್ಲ ಎಂದು ಜಲತಜ್ಞ ಚಕ್ರವಾಕ ಸುಬ್ರಮಣ್ಯ ಅಭಿಪ್ರಾಯಪಟ್ಟರು.
Vijaya Karnataka Web SMR-28TTH2


ಶುಕ್ರವಾರ ತಾಲೂಕಿನ ಗುಡ್ಡೇಕೇರಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪರಿಸರ ನಡೆ ಕಾರ‍್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಸ್ವಾರ್ಥಕೋಸ್ಕರ ಭೂತಾಯಿ ಬದುಕು ಹಾಳು ಮಾಡುವ ಜನರಿಂದ ಪರಿಸರ ಶೋಷಣೆ ಹೆಚ್ಚಾಗಿದೆ. ಜನಪ್ರತಿನಿಧಿಗಳು, ಜನರು ಪರಿಸರ ಸಂರಕ್ಷಣೆಗೆ ಮಹತ್ವ ಅರಿಯದಿದ್ದರೆ ಗಂಡಾಂತರ ದಿನಗಳು ಎದುರಿಸಬೇಕಾಗುತ್ತದೆ ಎಂದರು. ಪರಿಸರ ನಾಶ ಕೃತ್ಯಗಳಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪ್ರಕೃತಿ ನಾಶದಿಂದ ಭೂಮಿಯಲ್ಲಿ ಜಲಕೊರತೆ ಉಂಟಾಗುವ ಅಪಾಯ ಹೆಚ್ಚಿದೆ. ನೈಜ ಕಾಳಜಿ ಬೆಳೆಸಿಕೊಂಡರೆ ಮಾತ್ರ ಪರಿಸರ ಉಳಿಯಲು ಸಾಧ್ಯ ಎಂದರು.

ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಕುರಿತು ರಸಪ್ರಶ್ನೆ, ಸಂಗೀತ ಕಾರ‍್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕ ಮಂಜುಬಾಬು ವಿದ್ರ್ಯಾಥಿಗಳಿಗೆ ಬಹುಮಾನ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಅಶೋಕ, ರುದ್ರಾಚಾರಿ ಮತ್ತಿತರರು ಇದ್ದರು. ವಿದ್ಯಾರ್ಥಿಗಳಾದ ಶಿಫಾನ್‌ ಸ್ವಾಗತಿಸಿ, ಆಶ್ವೀಜ ನಿರೂಪಿಸಿ, ಸನತ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ