ಆ್ಯಪ್ನಗರ

ಸಿಗಂದೂರು ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಿದರೆ ಉಗ್ರ ಹೋರಾಟ; ಬೇಳೂರು ಗೋಪಾಲಕೃಷ್ಣ ಎಚ್ಚರಿಕೆ

ಸಿಗಂದೂರಲ್ಲಿ ನಡೆದ ಗೊಂದಲವನ್ನು ಪರಿಹರಿಸುವ ಬದಲು ಸರಕಾರ ಮೇಲುಸ್ತುವಾರಿ ಸಮಿತಿಯನ್ನು ನೇಮಿಸಿದೆ. ಅದನ್ನು ಸಂಪೂರ್ಣವಾಗಿ ಮುಜರಾಯಿ ಇಲಾಖೆಗೆ ಸೇರಿಸುವ ಹುನ್ನಾರ ನಡೆದಿದೆ. ಯಾವುದೇ ಕಾರಣಕ್ಕೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಸಿದ್ದಾರೆ.

Vijaya Karnataka Web 5 Nov 2020, 9:13 am
ಶಿವಮೊಗ್ಗ: ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಪ್ರಯತ್ನಿಸಿದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಸಿದ್ದಾರೆ.
Vijaya Karnataka Web beloor gopalkrishna


ನಗರದಲ್ಲಿ ನಿನ್ನೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಗಂದೂರಲ್ಲಿ ನಡೆದ ಗೊಂದಲವನ್ನು ಪರಿಹರಿಸುವ ಬದಲು ಸರಕಾರ ಮೇಲುಸ್ತುವಾರಿ ಸಮಿತಿಯನ್ನು ನೇಮಿಸಿದೆ. ಅದನ್ನು ಸಂಪೂರ್ಣವಾಗಿ ಮುಜರಾಯಿ ಇಲಾಖೆಗೆ ಸೇರಿಸುವ ಹುನ್ನಾರ ನಡೆದಿದೆ. ಯಾವುದೇ ಕಾರಣಕ್ಕೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಳದಲ್ಲಿ ಹೊಡೆದಾಟ; ಬೀದಿಗೆ ಬಿದ್ದ ಅರ್ಚಕರ-ಧರ್ಮದರ್ಶಿಗಳ ಆಂತರಿಕ ಕಲಹ..!

ಶಾಸಕನಾಗಿದ್ದಾಗ ಶ್ರೀ ಚೌಡೇಶ್ವರಿ ದೇವಾಲಯದ ಸಮಸ್ಯೆಯನ್ನು ಬಗೆಹರಿಸಲು ಈ ಹಿಂದೆಯೆ ಪ್ರಯತ್ನಪಟ್ಟಿದ್ದೆ. ಅದಕ್ಕೆ ಧರ್ಮದರ್ಶಿ ರಾಮಪ್ಪ ಮತ್ತು ಪ್ರಧಾನ ಅರ್ಚಕ ಶೇಷಗಿರಿ ಭಟ್‌ ಒಪ್ಪಿಕೊಂಡಿದ್ದರು. ಆದರೆ, ಶಾಸಕ ಹರತಾಳು ಹಾಲಪ್ಪ ಮತ್ತು ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ವಿವಾದ ಉಂಟು ಮಾಡಿದ್ದಾರೆ. ಗಲಾಟೆ ನಡೆಯುವಂತೆ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಸಿಗಂದೂರು ದೇವಸ್ಥಾನಕ್ಕೆ ಸಲಹಾ ಸಮಿತಿ ರಚನೆ ಮಾಡಿದ್ದಕ್ಕೆ ಆಕ್ಷೇಪ

ಗೋಕರ್ಣ, ಕೊಲ್ಲೂರು ಮತ್ತು ಉಡುಪಿಯಲ್ಲೂ ಗೊಂದಲಗಳು, ಗಲಾಟೆಗಳಾದಾಗ ಸರಕಾರ ಅಲ್ಲಿನ ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ಸೇರಿಸುವ ಪ್ರಯತ್ನ ಮಾಡಲಿಲ್ಲ. ಸಿಗಂದೂರು ದೇವಾಲಯ ಮಾತ್ರ ಇವರ ಕಣ್ಣಿಗೇಕೆ ಬಿತ್ತು. ಮೇಲುಸ್ತುವಾರಿ ಸಮಿತಿ ರಚನೆ ಮಾಡಲು ಜಿಲ್ಲಾಧಿಕಾರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ಸಿಗಂದೂರು ದೇವಾಲಯ ಮೇಲುಸ್ತುವಾರಿ ಸಮಿತಿ ಮೊದಲ ಸಭೆ; ಜಿಲ್ಲಾಧಿಕಾರಿಗೆ ಲೆಕ್ಕಪತ್ರ ಉಸ್ತುವಾರಿ

ಇನ್ನು ಡಿಸಿ ಕೆ.ಬಿ.ಶಿವಕುಮಾರ ಬಿಜೆಪಿ ಏಜೆಂಟರಂತೆ ಕೆಲಸ ಮಾಡಬಾರದು. ಅಲ್ಲದೇ ಆರ್ಯ ಈಡಿಗ ಸಂಘವನ್ನು ಸ್ವಯಂ ಘೋಷಿತ ಸಂಘವೆಂದು ಹೇಳಿದ್ದಾರೆ. ನಿಯಮಬದ್ಧವಾಗಿ ನಡೆಯುತ್ತಿರುವ ಸಂಘಗಳನ್ನು ಸ್ವಯಂ ಘೋಷಿತ ಸಂಘಗಳೆಂದು ಜರಿದ ಜಿಲ್ಲಾಧಿಕಾರಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ