ಆ್ಯಪ್ನಗರ

ಅಕ್ರಮ ವಿದ್ಯುತ್‌ ಸ್ಪರ್ಶ: ಎಮ್ಮೆ ಸಾವು

ಎಮ್ಮೆಯೊಂದು ಗದ್ದೆಯಲ್ಲಿ ಮೇಯಲು ಹೋದಾಗ ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟ ಘಟನೆ ಪಟ್ಟಣದ ಹೊಸಪೇಟೆ ಬಡಾವಣೆಯ ರಾಜೀವ ನಗರದಲ್ಲಿ ಗುರುವಾರ ನಡೆದಿದೆ.

Vijaya Karnataka 23 Jun 2019, 5:00 am
ಸೊರಬ: ಎಮ್ಮೆಯೊಂದು ಗದ್ದೆಯಲ್ಲಿ ಮೇಯಲು ಹೋದಾಗ ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟ ಘಟನೆ ಪಟ್ಟಣದ ಹೊಸಪೇಟೆ ಬಡಾವಣೆಯ ರಾಜೀವ ನಗರದಲ್ಲಿ ಗುರುವಾರ ನಡೆದಿದೆ.
Vijaya Karnataka Web illegal electric touch buffalo death
ಅಕ್ರಮ ವಿದ್ಯುತ್‌ ಸ್ಪರ್ಶ: ಎಮ್ಮೆ ಸಾವು


ಇಲ್ಲಿನ ನಿವಾಸಿ ದೇವೇಂದ್ರಪ್ಪ ಅವರಿಗೆ ಸೇರಿದ ಎಮ್ಮೆಯು ಬುಧವಾರ ಬೆಳಗಿನ ಜಾವ ಕೊಟ್ಟಿಗೆಯಿಂದ ಹಗ್ಗ ಕಳಚಿಕೊಂಡು ಮೇಯಲು ಹೊರಹೋಗಿದೆ. ಬೆಳಗ್ಗೆ ಮನೆ ಮಾಲೀಕ ಎಮ್ಮೆ ಹುಡುಕುತ್ತಾ ಹೋದಾಗ ಸಿಕ್ಕಿರಲಿಲ್ಲ. ಗುರುವಾರ ಮತ್ತೆ ಹುಡುಕಿದಾಗ ಸಮೀಪದ ಸಂಜಯ ನಗರದ ಬೋವಿ ಮಂಜಪ್ಪ ಅವರ ಕಬ್ಬಿನ ಹೊಲಕ್ಕೆ ಅಕ್ರಮವಾಗಿ ಹರಿಸಿದ ವಿದ್ಯುತ್‌ ತಂತಿಗೆ ತಗುಲಿ ಎಮ್ಮೆ ಮೃತಪಟ್ಟಿದೆ. ಎಮ್ಮೆ ಸಾವಿಗೆ ಬೋವಿ ಮಂಜಪ್ಪನೇ ಕಾರಣ ಎಂದು ದೂರುದಾರ ದೇವೇಂದ್ರಪ್ಪ ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಎಮ್ಮೆಯು ಹಾಲುಕೊಡುತ್ತಿದ್ದು, ತಿಂಗಳಿಗೆ 4500 ಆದಾಯವಿತ್ತು. ಇದರಿಂದ ಕುಟುಂಬ ಸಾಗಿಸುತ್ತಿದ್ದೆ. ಮಂಜಪ್ಪ ಅವರ ಮೇಲೆ ಕಾನೂನು ಕ್ರಮ ಜರುಗಿಸಿ, ಸರಕಾರ ನನಗೆ ಸೂಕ್ತ ಪರಿಹಾರ ನೀಡಬೇಕೆಂದು ದೇವೇಂದ್ರಪ್ಪ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ