ಆ್ಯಪ್ನಗರ

ಅಕ್ರಮ ಮರಳು ಸಾಗಣೆ: 3 ಟಿಪ್ಪರ್‌ ವಶ

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 3 ಟಿಪ್ಪರ್‌ ಲಾರಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Vijaya Karnataka 26 Aug 2019, 5:00 am
ಹೊಸನಗರ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 3 ಟಿಪ್ಪರ್‌ ಲಾರಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Vijaya Karnataka Web SMR-25hosp1


ಇಲಾಖೆ ಸಿಬ್ಬಂದಿ ಶನಿವಾರ ತಡರಾತ್ರಿ ಗಸ್ತು ತಿರುತ್ತಿದ್ದ ವೇಳೆ ಕೋಡೂರು ಸಮೀಪದ ಶಾಖವಳ್ಳಿ ರಸ್ತೆಯಲ್ಲಿ ಮರಳು ತುಂಬಿದ್ದ ಮೂರು ಟಿಪ್ಪರ್‌ಗಳು ಸಾಗುತ್ತಿದ್ದವು. ಅಧಿಕಾರಿಗಳನ್ನು ಕಂಡ ಚಾಲಕರು ಟಿಪ್ಪರ್‌ಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಟಿಪ್ಪರ್‌ಗಳಲ್ಲಿ ಮರಳು ತುಂಬಿದ್ದು ಯಾವುದೇ ಪರವಾನಗಿ ಇಲ್ಲದ ಹಿನ್ನೆಲೆಯಲ್ಲಿ, ಅವುಗಳನ್ನು ವಶಕ್ಕೆ ಪಡೆದು ಆರೋಪಿಗಳಾದ ಹೊಸಕೆಸರೆ ಗ್ರಾಮದ ಶರತ್‌ಶೆಟ್ಟಿ, ಮಹೇಶ ಮತ್ತು ಕೆ.ಹುಣಸವಳ್ಳಿ ಗ್ರಾಮದ ದೇವರಾಜ ಎಂಬುವವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಕಾರಾರ‍ಯಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಮಂಜುನಾಥ್‌, ಪ್ರಮೋದ್‌, ಜಗದೀಶ್‌, ಮಲ್ಲಪ್ಪ ಭಾಗಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ