ಆ್ಯಪ್ನಗರ

ಅಕ್ರಮ ಮರಳು ಸಾಗಣೆ: 18 ಜನ ಅರೆಸ್ಟ್‌

ತಾಲೂಕಿನ ಹೊಳೆಹನಸವಾಡಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 18 ಜನರನ್ನು ಸೋಮವಾರ ಬಂಧಿಸಲಾಗಿದೆ.

Vijaya Karnataka 19 Feb 2019, 5:00 am
ಶಿವಮೊಗ್ಗ : ತಾಲೂಕಿನ ಹೊಳೆಹನಸವಾಡಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 18 ಜನರನ್ನು ಸೋಮವಾರ ಬಂಧಿಸಲಾಗಿದೆ.
Vijaya Karnataka Web illegal sand transport 18 people arrested
ಅಕ್ರಮ ಮರಳು ಸಾಗಣೆ: 18 ಜನ ಅರೆಸ್ಟ್‌


ತುಂಗಾ ಎಡದಂಡೆಯಲ್ಲಿ ಸರಕಾರದಿಂದ ಪರವಾನಗಿ ಪಡೆಯದೇ ಮರಳನ್ನು ತೆಗೆದು ಜರಡಿ ಹಿಡಿದು ಟ್ರ್ಯಾಕ್ಟರ್‌ ತುಂಬುತ್ತಿದ್ದಾಗ ಇವರನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಮರಳನ್ನು ತುಂಬುತ್ತಿದ್ದರು. ಹಿಡಿಯಲು ಮುಂದಾದಾಗ ಅವರು ತುಂಗಾ ನದಿಗೆ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೂ ಪೊಲೀಸ್‌ ಸಿಬ್ಬಂದಿ ಇವರನ್ನು ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದಾರೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ