ಆ್ಯಪ್ನಗರ

‘ಸುರಕ್ಷ ತೆಯ ಸಂಸ್ಕೃತಿ ಬೆಳೆಸಿಕೊಳ್ಳಿ’

ಆರೋಗ್ಯ, ಸುರಕ್ಷ ತೆ, ಪರಿಸರ ಈ ಮೂರು ಅಂಶಗಳು ಮನಸ್ಸಿನಲ್ಲಿ ಬೇರೂರಿ ನಿಂತಾಗ ಸಂಪೂರ್ಣ ಸುರಕ್ಷ ತೆ ಸಾಧ್ಯ ಎಂದು ಮಂಗಳೂರಿನ ಇನ್ಸ್ಟಿಟ್ಯೂಟ್‌ಆಫ್‌ ಫೈರ್‌ಆಂಡ್‌ ಸೇಫ್ಟಿ ಆಡಳಿತಾಧಿಕಾರಿ ಕೆ.ಬಿ.ಸನತ್‌ ಹೇಳಿದರು.

Vijaya Karnataka 7 Mar 2019, 5:00 am
ಶಿವಮೊಗ್ಗ: ಆರೋಗ್ಯ, ಸುರಕ್ಷ ತೆ, ಪರಿಸರ ಈ ಮೂರು ಅಂಶಗಳು ಮನಸ್ಸಿನಲ್ಲಿ ಬೇರೂರಿ ನಿಂತಾಗ ಸಂಪೂರ್ಣ ಸುರಕ್ಷ ತೆ ಸಾಧ್ಯ ಎಂದು ಮಂಗಳೂರಿನ ಇನ್ಸ್ಟಿಟ್ಯೂಟ್‌ಆಫ್‌ ಫೈರ್‌ಆಂಡ್‌ ಸೇಫ್ಟಿ ಆಡಳಿತಾಧಿಕಾರಿ ಕೆ.ಬಿ.ಸನತ್‌ ಹೇಳಿದರು.
Vijaya Karnataka Web improve culture safety
‘ಸುರಕ್ಷ ತೆಯ ಸಂಸ್ಕೃತಿ ಬೆಳೆಸಿಕೊಳ್ಳಿ’


ಕರ್ನಾಟಕ ವಿದ್ಯುತ್‌ ನಿಗಮ, ಮಹಾತ್ಮಾಗಾಂಧಿ ವಿದ್ಯುದಾಗಾರ ಮತ್ತು ಶರಾವತಿ ವಿದ್ಯುದಾಗಾರಗಳ ಸಹಯೋಗದಲ್ಲಿ ಬುಧವಾರ ಶರಾವತಿ ವಿದ್ಯುದಾಗಾರದ ಆವರಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸುರಕ್ಷ ತಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ತಾವು ಕೆಲಸ ಮಾಡುವ ಕ್ಷೇತ್ರದಲ್ಲಿ ಸುರಕ್ಷತೆಯ ವಿಧಾನ ಅಳವಡಿಸಿಕೊಳ್ಳಬೇಕು. ಜೀವ ಅಮೂಲ್ಯವಾದ ವರ. ಅದನ್ನು ಅಸುರಕ್ಷತೆಯಿಂದ ಕಳೆದುಕೊಳ್ಳಬಾರದು. ನಿತ್ಯಜೀವನದಲ್ಲಿ ಸುರಕ್ಷತೆಯ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಜೀವನದ ಬಗ್ಗೆ ಕಾಳಜಿ ಇದ್ದರೆ ಸಾಕಾಗುವುದಿಲ್ಲ. ಜಾಗೃತಿಯೂ ನಿರಂತರವಾಗಿರಬೇಕು. ನಿಗಮದಿಂದ ಸುರಕ್ಷ ತಾ ವಿಧಾನ ಅಳವಡಿಕೆಗೆ ಉತ್ತಮ ಉತ್ತೇಜನ ಸಿಗುತ್ತಿರುವುದು ಶ್ಲಾಘನೀಯ ಎಂದರು.

ಶರಾವತಿಯೋಜನಾ ಪ್ರದೇಶದ ಮುಖ್ಯಸ್ಥ ಎಚ್‌.ಮೋಹನ್‌ ಅಧ್ಯಕ್ಷತೆ ವಹಿಸಿದ್ದರು. ನಿಗಮದ ಹಿರಿಯ ಅಧಿಕಾರಿ ಜಿ.ಸಿ.ಮಹೇಂದ್ರ, ಅಧೀಕ್ಷ ಕ ಅಭಿಯಂತರಾದ ದಿನೇಶ್‌ಕುಮಾರ್‌, ಶಂಕರ್‌ಯಾದವಾಡ್‌ ಮಾತನಾಡಿದರು. ಜಿ.ನಾಗರಾಜ್‌ ಸುರಕ್ಷ ತಾ ವಾಗ್ದಾನ ಬೋಧಿಸಿದರು. ಶರಾವತಿ ವಿದ್ಯುದಾಗಾರ ಮತ್ತು ಮಹಾತ್ಮಾಗಾಂಧಿ ವಿದ್ಯುದಾಗಾರದ ವಾರ್ಷಿಕ ಸುರಕ್ಷ ತಾ ವರದಿ ಸುರಕ್ಷ ತಾಧಿಕಾರಿಗಳಾದ ಎಸ್‌.ಆರ್‌.ಗಿರೀಶ್‌, ವೈ.ಎಸ್‌. ಶಾಂತಾರಾಮ್‌ ವಾಚಿಸಿದರು. ಡಿ.ಎಸ್‌.ಗಿರೀಶ್‌, ಸುಲೋಚನ ಸ್ವಾಗತಿಸಿದರು. ಎಚ್‌.ವಿ.ಪೂರ್ಣಿಮಾ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವಿವಿಧ ಸ್ಪರ್ಧೆ ವಿಜೇತರಾದ ನಿಗಮದ ಉದ್ಯೋಗಿಗಳಿಗೆ ಬಹುಮಾನ ವಿತರಿಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ