ಆ್ಯಪ್ನಗರ

ತೀರ್ಥಹಳ್ಳಿಗೂ ವ್ಯಾಪಿಸಿದ ಕೇಸರಿ-ಹಿಜಾಬ್ ವಿವಾದ; ಕೇಸರಿ ಶಾಲು ಧರಿಸಿದ್ದಕ್ಕೆ ಬುರ್ಖಾ ಹಾಕಿದ ವಿದ್ಯಾರ್ಥಿನಿಯರು

ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಭೆ ನಡೆಸಿದ ಕಾಲೇಜು ಆಡಳಿತ ಮಂಡಳಿ, 'ಕಾಲೇಜು ಆವರಣದ ಹೊರತಾಗಿ ತರಗತಿಯ ಒಳಗೆ ಬುರ್ಖಾ, ಹಿಜಾಬ್, ಕೇಸರಿ ಶಾಲು ಇನ್ನಿತರ ಯಾವುದನ್ನೂ ಧರಿಸಿಕೊಂಡು ಬರಲು ಅವಕಾಶ ಇಲ್ಲ. ವಸ್ತ್ರ ಸಂಹಿತೆಯನ್ನು ಪಾಲಿಸಬೇಕು' ಎಂದು ಸೂಚಿಸಿತ್ತು. ಇದಕ್ಕೆ ಒಪ್ಪಿಗೆ ಸೂಚಿಸಿದ ವಿದ್ಯಾರ್ಥಿಗಳು ವಸ್ತ್ರಸಂಹಿತೆಯನ್ನು ಪಾಲಿಸುತ್ತಿದ್ದರು. ಆದರೆ ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಕೇಸರಿ ಶಾಲು ಹಾಕಿಕೊಂಡು ಬಂದ ಪರಿಣಾಮ ವಿವಾದ ಮತ್ತೆ ಶುರುವಾಗಿದೆ. ಕೆಲ ವಿದ್ಯಾರ್ಥಿನಿಯರು ಬುರ್ಖಾ, ಹಿಜಬ್‌ ಧರಿಸಿ ಕಾಲೇಜಿಗೆ ಆಗಮಿಸಿರುವುದು ಬೆಂಕಿಗೆ ಬಿಸಿತುಪ್ಪ ಸುರಿದಂತಾಗಿದೆ.

Vijaya Karnataka 21 Jan 2022, 3:13 pm
ತೀರ್ಥಹಳ್ಳಿ: ಉಡುಪಿಯ ಸರ್ಕಾರಿ ಕಾಲೇಜಿನ ಹಿಜಾಬ್‌ ವಿವಾದ ತಣ್ಣಗಾಗುವ ಮೊದಲೇ ಇದೀಗ ತೀರ್ಥಹಳ್ಳಿಯ ಕಾಲೇಜಿಗೂ ಕೂಡ ಇದರ ಪರಿಣಾಮ ತಟ್ಟಿದೆ.
Vijaya Karnataka Web teerta halli college burkha


ವಿದ್ಯಾರ್ಥಿಯೊಬ್ಬ ಕೇಸರಿ ಶಾಲು ಹಾಕಿಕೊಂಡು ಬಂದಿದ್ದಕ್ಕೆ ಪ್ರತಿಯಾಗಿ ಹತ್ತಾರು ವಿದ್ಯಾರ್ಥಿನಿಯರು ಬುರ್ಖಾ, ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿರುವ ಘಟನೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. ಸಮವಸ್ತ್ರ ಸಂಹಿತೆ ನಿಯಮ ಜಾರಿಯಲ್ಲಿರುವ ನಡುವೆಯೂ ಗುರುವಾರ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿನಿಯರು ಬುರ್ಕಾ, ಹಿಜಾಬ್‌ ಧರಿಸಿ ಕಾಲೇಜಿಗೆ ಆಗಮಿಸಿರೋದು ವಿವಾದಕ್ಕೆ ಗುರಿಯಾಗಿದೆ.

ಕಾಲೇಜು ನಿಯಮಾವಳಿ ಅನ್ವಯ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಸಮವಸ್ತ್ರ ಧರಿಸಿ ಕಾಲೇಜಿಗೆ ಆಗಮಿಸುವುದು ಕಡ್ಡಾಯ. ವಿದ್ಯಾರ್ಥಿನಿಯರು ದಿಢೀರನೆ ಬುರ್ಖಾ, ಕುತ್ತಿಗೆ ಸುತ್ತವ ಹಿಜಬ್‌ ಧರಿಸಿ ಕಾಲೇಜಿಗೆ ಆಗಮಿಸಿದ್ದು ಚರ್ಚೆಗೆ ಕಾರಣವಾಗಿದೆ. ಕೆಲ ದಿನದ ಹಿಂದೆ ಒಬ್ಬ ವಿದ್ಯಾರ್ಥಿಯೊಬ್ಬ ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದ. ಇದು ವಿವಾದ ಆಗುತ್ತಿದ್ದಂತೆ ಎಚ್ಚೆತ್ತ ಕಾಲೇಜು ಆಡಳಿತ ಮಂಡಳಿ ತಕ್ಷಣ ಸಮವಸ್ತ್ರ ಸಂಹಿತೆ ಅನ್ವಯ ಕೇಸರಿ ಶಾಲು ಹಾಕದಂತೆ ನಿರ್ಬಂಧ ವಿಧಿಸಿತ್ತು. ಈ ಸಂಬಂಧ ಸಭೆ ನಡೆಸಿ, 'ಕಾಲೇಜು ಆವರಣದ ಹೊರತಾಗಿ ತರಗತಿಯ ಒಳಗೆ ಬುರ್ಖಾ, ಹಿಜಾಬ್, ಕೇಸರಿ ಶಾಲು ಇನ್ನಿತರ ಯಾವುದನ್ನೂ ಧರಿಸಿಕೊಂಡು ಬರಲು ಅವಕಾಶ ಇಲ್ಲ. ವಸ್ತ್ರ ಸಂಹಿತೆಯನ್ನು ಪಾಲಿಸಬೇಕು' ಎಂದು ಸೂಚಿಸಿತ್ತು. ಇದಕ್ಕೆ ಒಪ್ಪಿಗೆ ಸೂಚಿಸಿದ ವಿದ್ಯಾರ್ಥಿಗಳು ವಸ್ತ್ರಸಂಹಿತೆಯನ್ನು ಪಾಲಿಸುತ್ತಿದ್ದರು. ಆದರೆ ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಕೇಸರಿ ಶಾಲು ಹಾಕಿಕೊಂಡು ಬಂದ ಪರಿಣಾಮ ವಿವಾದ ಮತ್ತೆ ಶುರುವಾಗಿದೆ. ಕೆಲ ವಿದ್ಯಾರ್ಥಿನಿಯರು ಬುರ್ಖಾ, ಹಿಜಬ್‌ ಧರಿಸಿ ಕಾಲೇಜಿಗೆ ಆಗಮಿಸಿರುವುದು ಬೆಂಕಿಗೆ ಬಿಸಿತುಪ್ಪ ಸುರಿದಂತಾಗಿದೆ.
ದಾಖಲಾತಿ ವೇಳೆ ಸಮವಸ್ತ್ರ ನಿಯಮ ಒಪ್ಪಿ, ಈಗ ಹಿಜಾಬ್ ಬೇಕೆಂದು ಹಠ ಮಾಡೋದು ಅಶಿಸ್ತು ತಾನೆ?; ಬಿ.ಸಿ ನಾಗೇಶ್
ಈ ಮಧ್ಯೆ ಪಟ್ಟಣ ಪಂಚಾಯಿತಿಯ ಕೆಲ ಸದಸ್ಯರು ಬುರ್ಖಾ ಧರಿಸಲು ಅವಕಾಶ ನೀಡಬೇಕು ಎಂದು ಕಾಲೇಜು ಆಡಳಿತ ಮಂಡಳಿ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ದೂರಿದೆ. ಸದಸ್ಯರು ನೇರವಾಗಿ ಕಾಲೇಜಿಗೆ ತೆರಳಿ ಸಮವಸ್ತ್ರ ಸಂಹಿತೆ ನಿಯಮವನ್ನು ಪ್ರಶ್ನಿಸಿರುವುದು ವಿವಾದ ತಾರಕ್ಕೇರುವಂತೆ ಮಾಡಿದೆ. ಕಾಲೇಜಿನಲ್ಲಿ ಅಲ್ಪಸಂಖ್ಯಾತ ಕೋಮಿನ ಸುಮಾರು 25ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದು, ಈವರೆಗೂ ಸಮವಸ್ತ್ರ ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದರು. ಈಗ ದಿಢೀರನೆ ಕಾಲೇಜಿನಲ್ಲಿ ಬುರ್ಖಾ, ಹಿಜಾಬ್‌, ಕೇಸರಿ ಶಾಲು ವಿವಾದ ತಲೆದೋರಿದ್ದು ಶೈಕ್ಷಣಿಕ ವಾತಾವರಣದ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿದೆ.

'ಕಾಲೇಜಿನಲ್ಲಿ ಕಟ್ಟುನಿಟ್ಟಾಗಿ ಸಮವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ಕೇಸರಿ ಶಾಲು, ಬುರ್ಖಾ ಧರಿಸಲು ವಿದ್ಯಾರ್ಥಿಗಳಿಗೆ ಅವಕಾಶ ಇಲ್ಲ. ಬುರ್ಖಾ, ಹಿಜಾಬ್‌ ಧರಿಸಿ ಕೆಲ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿದ್ದು, ಈ ಕುರಿತು ಸೂಕ್ತ ಮಾಹಿತಿ ನೀಡಿ ಅವಕಾಶ ನಿರಾಕರಿಸಲಾಗಿದೆ.'
- ನಾಗರಾಜ ಶೆಟ್ಟಿ, ಅಧ್ಯಕ್ಷರು, ಕಾಲೇಜು ಅಭಿವೃದ್ಧಿ ಸಮಿತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ