ಆ್ಯಪ್ನಗರ

ಕಾಂಗ್ರೆಸ್‌ ಜನ ಸಂಪರ್ಕ ಅಭಿಯಾನಕ್ಕೆ ಚಾಲನೆ

ಜಿಲ್ಲಾ ಕಾಂಗ್ರೆಸ್‌ನ ಜನ ಸಂಪರ್ಕ ಅಭಿಯಾನಕ್ಕೆ ನಗರದ ಲಕ್ಷ್ಮೇ ಟಾಕೀಸ್‌ ವೃತ್ತದಲ್ಲಿ ಸೋಮವಾರ ಸಂಜೆ ಚಾಲನೆ ನೀಡಲಾಯಿತು.

Vijaya Karnataka 19 Feb 2019, 5:00 am
ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್‌ನ ಜನ ಸಂಪರ್ಕ ಅಭಿಯಾನಕ್ಕೆ ನಗರದ ಲಕ್ಷ್ಮೇ ಟಾಕೀಸ್‌ ವೃತ್ತದಲ್ಲಿ ಸೋಮವಾರ ಸಂಜೆ ಚಾಲನೆ ನೀಡಲಾಯಿತು.
Vijaya Karnataka Web inaguaration to public contact congress programme
ಕಾಂಗ್ರೆಸ್‌ ಜನ ಸಂಪರ್ಕ ಅಭಿಯಾನಕ್ಕೆ ಚಾಲನೆ


ಈ ಸಂದರ್ಭ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಎಸ್‌.ಸುಂದರೇಶ್‌, ಕೇಂದ್ರ ಸರಕಾರದ ವೈಫಲ್ಯ ಮತ್ತು ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ಪ್ರಚಾರ ಮಾಡುವ ಉದ್ದೇಶದ ಅಭಿಯಾನದಲ್ಲಿ ಜಿಲ್ಲಾದ್ಯಂತ ಪ್ರತಿ ಮನೆ ಮತ್ತು ಅಂಗಡಿಗಳಿಗೆ ಭೇಟಿ ನೀಡಿ ಕರಪತ್ರಗಳನ್ನು ಹಂಚಲಾಗುತ್ತದೆ. ಹಿಂದಿನ ಕಾಂಗ್ರೆಸ್‌ ಸರಕಾರದಲ್ಲಿ ಸಿದ್ದರಾಮಯ್ಯ ಅವರು ಹಾಗೂ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸಿಎಂ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದ್ದಾರೆ. ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.

ಪ್ರಸಕ್ತ ಬಜೆಟ್‌ನಲ್ಲಿ ಜಿಲ್ಲೆಗೆ ಅತಿಹೆಚ್ಚು ಅನುದಾನ ಘೋಷಣೆ ಮಾಡಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೂ ಜಿಲ್ಲೆಗೆ ಇಷ್ಟೊಂದು ಯೋಜನೆ ಮತ್ತು ಅನುದಾನ ಘೋಷಣೆ ಮಾಡಿರಲಿಲ್ಲ. ಪಕ್ಷ ಮತ್ತು ಕ್ಷೇತ್ರ ಭೇದ ಮಾಡದೆ ಯಡಿಯೂರಪ್ಪ ಅವರು ಪ್ರತಿನಿಧಿಸುವ ಶಿಕಾರಿಪುರ ತಾಲೂಕಿಗೂ 200 ಕೋಟಿ ರೂ.ಗಳಿಗೂ ಅಧಿಕ ಅನುದಾನ ಪ್ರಕಟಿಸಿದ್ದಾರೆ ಎಂದರು.

ಲಕ್ಷ್ಮಿ ಟಾಕೀಸ್‌ ವೃತ್ತದಿಂದ ಆರಂಭವಾದ ಜನ ಸಂಪರ್ಕ ಅಭಿಯಾನವು ಜೈಲ್‌ ರಸ್ತೆ, ಜೈಲ್‌ ವೃತ್ತ, ದುರ್ಗಿಗುಡಿ, ನೆಹರೂ ರಸ್ತೆ ಮಾರ್ಗವಾಗಿ ನಡೆಯಿತು. ಅಭಿಯಾನದಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್‌, ಮುಖಂಡರಾದ ಇಸ್ಮಾಯಿಲ್‌ ಖಾನ್‌, ವಿಶ್ವನಾಥ ಕಾಶಿ, ವಿಜಯಲಕ್ಷ್ಮಿ,ದೇವೇಂದ್ರಪ್ಪ, ಎನ್‌.ಡಿ.ಪ್ರವೀಣ್‌ಕುಮಾರ್‌ ಮತ್ತಿತರರು ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ