ಆ್ಯಪ್ನಗರ

ಆದಾಯ ತೆರಿಗೆ ದಿನಾಚರಣೆ

ನಗರದ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಬುಧವಾರ ಸಂಜೆ ಆದಾಯ ತೆರಿಗೆ ದಿನಾಚರಣೆ ನಡೆಯಿತು.

Vijaya Karnataka 25 Jul 2019, 5:00 am
ಶಿವಮೊಗ್ಗ : ನಗರದ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಬುಧವಾರ ಸಂಜೆ ಆದಾಯ ತೆರಿಗೆ ದಿನಾಚರಣೆ ನಡೆಯಿತು.
Vijaya Karnataka Web income tax day
ಆದಾಯ ತೆರಿಗೆ ದಿನಾಚರಣೆ


ತೆರಿಗೆದಾರರು, ಸಾರ್ವಜನಿಕರು, ಎಫ್‌ಕೆಸಿಸಿಐ, ನಿವೃತ್ತಿ ಸಿಬ್ಬಂದಿಗೋಸ್ಕರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸಿಎ ಸಿ.ಆರ್‌.ವಸಂತ್‌ ಕುಮಾರ್‌, ಆದಾಯ ತೆರಿಗೆ ವೃತ್ತಿಪರ ಎಸ್‌.ಜಿ.ಗೋಪಾಲ್‌, ಇಲಾಖೆಯ ನಿವೃತ್ತ ಉಪ ಆಯುಕ್ತ ಕೆ.ಸಿ.ಬಿ.ಪಿಲ್ಲೈ, ಡಾ.ರಜನಿ ಪೈ ಉದ್ಘಾಟಿಸಿದರು.

'ಆದಾಯ ತೆರಿಗೆ-ಭಾರತವನ್ನು ಪರಿವರ್ತಿಸುವ ಶಕ್ತಿ' ವಿಷಯ ಕುರಿತು ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಆದಾಯ ತೆರಿಗೆ ಇಲಾಖೆಯ ಶಿವಮೊಗ್ಗ ವೃತ್ತ 1ರ ಸಹಾಯಕ ಆಯುಕ್ತ ಎಸ್‌.ಎನ್‌.ಸುರೇಶ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರದ ಪ್ರಗತಿಯಲ್ಲಿ ಆದಾಯ ತೆರಿಗೆಯ ಪಾತ್ರ ದೊಡ್ಡ ಪ್ರಮಾಣದಲ್ಲಿದೆ. ಸಕಾಲಕ್ಕೆ ಪಾವತಿಸುವುದರಿಂದ ಗ್ರಾಹಕರಿಗೆ ಆಗುವ ಲಾಭಗಳ ಬಗ್ಗೆ ಮಾಹಿತಿ ನೀಡಿದರು.

ಆದಾಯ ತೆರಿಗೆ ವೃತ್ತಿಪರ ಮಧುಸೂದನ್‌ ಐತಾಳ್‌, ಸಿ.ಆರ್‌.ವಸಂತ್‌ ಕುಮಾರ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ತೆರಿಗೆ ಇಲಾಖೆಯ ಸಾಧನೆಗಳನ್ನು ಒಳಗೊಂಡ ವಿಡಿಯೋ ಪ್ರದರ್ಶಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ