ಆ್ಯಪ್ನಗರ

ಓದುಗರ ಜಾಗೃತಗೊಳಿಸುವ ಸಾಹಿತ್ಯ ಹೆಚ್ಚಲಿ

ಓದುಗರನ್ನು ಜಾಗೃತಗೊಳಿಸುವಂತಹ ಸಾಹಿತ್ಯ ಕೃತಿಗಳು ಹೆಚ್ಚು ರಚನೆಯಾಗಬೇಕಿರುವುದು ಇಂದಿನ ಕಾಲಘಟ್ಟಕ್ಕೆ ಅಗತ್ಯವಾಗಿದೆ ಎಂದು ಶಿಕ್ಷ ಕ, ಸಾಹಿತಿ ತಿರುಪತಿ ನಾಯಕ್‌ ಹೇಳಿದರು.

Vijaya Karnataka 10 Jul 2019, 5:00 am
ಹೊಸನಗರ: ಓದುಗರನ್ನು ಜಾಗೃತಗೊಳಿಸುವಂತಹ ಸಾಹಿತ್ಯ ಕೃತಿಗಳು ಹೆಚ್ಚು ರಚನೆಯಾಗಬೇಕಿರುವುದು ಇಂದಿನ ಕಾಲಘಟ್ಟಕ್ಕೆ ಅಗತ್ಯವಾಗಿದೆ ಎಂದು ಶಿಕ್ಷ ಕ, ಸಾಹಿತಿ ತಿರುಪತಿ ನಾಯಕ್‌ ಹೇಳಿದರು.
Vijaya Karnataka Web SMR-9HOSP5


ತಾಲೂಕಿನ ಮಾರುತಿಪುರ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಮಾರುತಿಪುರ ಸಾಹಿತ್ಯಾಭಿಮಾನಿಗಳ ಬಳಗ ಏರ್ಪಡಿಸಿದ್ದ ಕಾರ‍್ಯಕ್ರಮದಲ್ಲಿ ಸ್ಥಳೀಯ ಬರಹಗಾರ ಸಂಜೀವಶೆಟ್ಟಿ ಅವರ 'ಪುಣ್ಯ ಚರಿತೆ ಭರತ ಮಾತೆ' ದೇಶ ಭಕ್ತಿ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಸೃಜನಶೀಲತೆ ಹೊಂದಿರುವ ಅನೇಕರು ಎಲೆಮರೆ ಕಾಯಿಯಂತೆ ಇದ್ದಾರೆ. ಸೂಕ್ತ ಅವಕಾಶ, ಪ್ರೋತ್ಸಾಹ ದೊರೆತಲ್ಲಿ ಉತ್ತಮ ಕೃತಿಗಳು ರಚನೆಯಾಗುವುದರಲ್ಲಿ ಸಂಶಯವಿಲ್ಲ. ತನ್ನ ಹುಟ್ಟೂರು, ಹೆತ್ತವರನ್ನು ಗೌರವಿಸುವ ಗುಣ ಯಾರ ಅಂತರಾಳದಲ್ಲಿರುತ್ತದೆಯೋ ಅವರಲ್ಲಿ ದೇಶ ಪ್ರೇಮದ ಸೆಲೆ ಹಾಸುಹೊಕ್ಕಾಗಿರುತ್ತದೆ ಎಂದರು.

ಹಿರಿಯ ಸಾಹಿತಿ, ಬಹುಭಾಷಾ ತಜ್ಞ ಡಾ. ಶಾಂತಾರಾಂ ಪ್ರಭು ಮಾತನಾಡಿ, ಅನುಭವಗಳನ್ನು ಹೊತ್ತು ತರುವ ಬರಹಗಳು ಜನರ ಮನಸ್ಸನ್ನು ತಲುಪುತ್ತವೆ. ಸಾಹಿತಿಗಳಾಗುವವರೆಲ್ಲರೂ ಉನ್ನತ ಶಿಕ್ಷ ಣ ಪಡೆದಿರಬೇಕು ಎಂಬುದಿಲ್ಲ. ಮನದಾಳದ ಮಾತುಗಳು ಅಕ್ಷ ರ ರೂಪ ನೀಡುವ ಶಕ್ತಿ ಇದ್ದಲ್ಲಿ, ಉತ್ತಮ ಕೃತಿಗಳು ರಚನೆಯಾಗುತ್ತವೆ ಎಂದರು.

ಲೇಖಕ ಸಂಜೀವ ಶೆಟ್ಟಿ, ರಮೇಶ್‌ಹೆಗಡೆ ಗುಂಡೂಮನೆ, ನಿವೃತ್ತ ಸೈನಿಕ ಕೆ.ಪಿ. ಕೃಷ್ಣಮೂರ್ತಿ, ಗ್ರಾ.ಪಂ. ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹಾಬಲೇಶ್ವರ, ಪ್ರಮುಖರಾದ ಬಿ.ಸಿ.ಸ್ವಾಮಿಗೌಡ, ಉಮೇಶ್‌ ಕಂಚುಗಾರ್‌, ದೇವಾನಂದ, ರಾಮಣ್ಣಶೆಟ್ಟಿ, ಶಾಲಾ ಸಮಿತಿ ಅಧ್ಯಕ್ಷ ಗಣಪತಿ, ಮುಖ್ಯ ಶಿಕ್ಷ ಕ ಮಂಜುನಾಥ್‌, ಕೆ.ಎಲ್‌. ಹೆಗಡೆ, ಬಂಟರ ಸಂಘದ ವಲಯಾಧ್ಯಕ್ಷ ನಾಗರಾಜ್‌, ಮಂಡಾನಿ ಮೋಹನ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ