ಆ್ಯಪ್ನಗರ

ಬ್ಯಾಂಕ್‌ ಸಿಬ್ಬಂದಿ ಮೇಲೆ ಹೆಚ್ಚಿದ ಒತ್ತಡ

ಈಚೆಗೆ ಆತ್ಮಹತ್ಯೆ ಮಾಡಿಕೊಂಡ ಜೋಗ್‌ಫಾಲ್ಸ್‌ ಎಸ್‌ಬಿಐ ವ್ಯವಸ್ಥಾಪಕ ಅನಿಲ್‌ಕುಮಾರ್‌ ಅವರಿಗೆ ಇಲ್ಲಿನ ವರದಾ ರಸ್ತೆಯ ಎಸ್‌ಬಿಐ ಶಾಖೆಯಲ್ಲಿಸಾಗರ ಹಾಗೂ ಸುತ್ತಮುತ್ತಲಿನ ಶಾಖೆ ಸಿಬ್ಬಂದಿ ಬುಧವಾರ ಶ್ರದ್ದಾಂಜಲಿ ಸಲ್ಲಿಸಿದರು.

Vijaya Karnataka 25 Oct 2019, 5:00 am
ಸಾಗರ: ಈಚೆಗೆ ಆತ್ಮಹತ್ಯೆ ಮಾಡಿಕೊಂಡ ಜೋಗ್‌ಫಾಲ್ಸ್‌ ಎಸ್‌ಬಿಐ ವ್ಯವಸ್ಥಾಪಕ ಅನಿಲ್‌ಕುಮಾರ್‌ ಅವರಿಗೆ ಇಲ್ಲಿನ ವರದಾ ರಸ್ತೆಯ ಎಸ್‌ಬಿಐ ಶಾಖೆಯಲ್ಲಿಸಾಗರ ಹಾಗೂ ಸುತ್ತಮುತ್ತಲಿನ ಶಾಖೆ ಸಿಬ್ಬಂದಿ ಬುಧವಾರ ಶ್ರದ್ದಾಂಜಲಿ ಸಲ್ಲಿಸಿದರು.
Vijaya Karnataka Web 24SGR4_46


ಈ ಸಂದರ್ಭ ನೌಕರ ಸಂಘಟನೆ ದಾವಣಗೆರೆ ವಲಯ ಕಾರ್ಯದರ್ಶಿ ರಾಮಸ್ವಾಮಿ ಮಾತನಾಡಿ, ಎಲ್ಲಬ್ಯಾಂಕುಗಳಲ್ಲಿಸಿಬ್ಬಂದಿ ಕೊರತೆಯಿದೆ. ಕರ್ತವ್ಯದಲ್ಲಿರುವ ಸಿಬ್ಬಂದಿ ಬಹಳ ಒತ್ತಡದಲ್ಲಿಯೇ ಕೆಲಸ ನಿರ್ವಹಿಸಬೇಕಿದೆ. ಸಿಬ್ಬಂದಿ ನೇಮಕಕ್ಕೆ ಮುಷ್ಕರದ ಮೂಲಕ ನೌಕರ ಸಂಘಟನೆಗಳು ಹಕ್ಕೊತ್ತಾಯ ಮಾಡುತ್ತಿದ್ದರೂ ಕೇಂದ್ರ ಸರಕಾರ, ಬ್ಯಾಂಕ್‌ಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿಲ್ಲಎಂದರು.

ಅನಿಲ್‌ ಕುಮಾರ್‌ ಅಂತಹ ಬುದ್ಧಿವಂತ ಯುವಕ ಇಂತಹ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು ಅರಗಿಸಿಕೊಳ್ಳಲಾಗದ ಸಂಗತಿ. ಕೆಲಸದ ಒತ್ತಡ ಇಂತಹ ಅನಾಹುತಕ್ಕೆ ದಾರಿ ಮಾಡಿಕೊಡುತ್ತಿರುವುದು ದುರಂತ . ಈ ಸಂದರ್ಭ ಉನ್ನತ ಮಟ್ಟದ ಅಧಿಕಾರಿಗಳು ನೌಕರರ ಮೇಲಿರುವ ಒತ್ತಡ ಪರಿಗಣಿಸಿ, ಸಿಬ್ಬಂದಿ ನೇಮಕಕ್ಕೆ ಮನಸ್ಸು ಮಾಡಬೇಕೆಂದರು.

ಮುಖ್ಯ ವ್ಯವಸ್ಥಾಪಕ ಪ್ರಕಾಶ್‌ ಕುಂದಾಪುರ ಮಾತನಾಡಿ, ಸಣ್ಣ ವಯಸ್ಸಿನಲ್ಲಿಇಂತಹ ದುಡುಕಿನ ನಿರ್ಧಾರ ಕುಟುಂಬವನ್ನು ಅನಾಥರನ್ನಾಗಿಸುತ್ತದೆ. ಕೆಲಸದ ಒತ್ತಡದಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ಪರಿಹಾರದ ದಾರಿಯಾಗಬಾರದು. ತಮ್ಮ ಕಷ್ಟಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡಾಗ ಇಂತಹ ಅವಘಡಗಳನ್ನು ತಪ್ಪಿಸಿಕೊಳ್ಳಬಹುದು ಎಂದರು. ಸ್ಥಳೀಯ ಶಾಖೆಗಳ ನೌಕರರು ಹಾಜರಿದ್ದರು.

---------
ಇಂತಹ ಸಾವುಗಳ ಸಂದರ್ಭ ಸಹೋದ್ಯೋಗಿಗಳ ಹೊಣೆಗಾರಿಕೆ ಕೇವಲ ಶ್ರದ್ಧಾಂಜಲಿಯಲ್ಲಿಮುಗಿಯಬಾರದು. ಸಂಘಟನೆಗಳು ಬಲಿಷ್ಠವಾಗಿ ಮೇಲಧಿಕಾರಿಗಳ ಅಮಾನವೀಯ ಒತ್ತಡವನ್ನು ವಿರೋಧಿಸಬೇಕಾಗಿದೆ. ಅದಕ್ಕೆ ಸಾಂಕೇತಿಕವಾಗಿ ಅ.31ರ ವರೆಗೆ ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗುತ್ತೇವೆ.

-ಶಾಂತಕುಮಾರ್‌, ಬ್ಯಾಂಕ್‌ ಅಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ