ಶಿವಮೊಗ್ಗ: ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾಣವು ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದೆ ಎಂದು ಎನ್ಎನ್ಎಫ್ ಅಧ್ಯಕ್ಷ ಹಾಗೂ ಶಿಶು ತಜ್ಞ ಡಾ. ಕೊಟ್ಟೂರೇಶ್ ಕಳವಳ ವ್ಯಕ್ತಪಡಿಸಿದರು.
ಸುಬ್ಬಯ್ಯ ವೈದ್ಯಕೀಯ ಮಹಾ ವಿದ್ಯಾಲಯದ ನವಜಾತ ಶಿಶು ವಿಭಾಗ, ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಹಾಗೂ ಭಾರತೀಯ ಶಿಶು ವೈದ್ಯ ಸಂಘ ಇತ್ತೀಚೆಗೆ ಏರ್ಪಡಿಸಿದ್ದ ನವಜಾತ ಶಿಶುವಿನ ತುರ್ತು ಚಿಕಿತ್ಸಾ ಕಾರಾರಯಗಾರ ಉದ್ಘಾಟಿಸಿ ಮಾತನಾಡಿದರು.
ಶಿಶು ಜನಿಸಿದ ಒಂದು ನಿಮಿಷದ ಒಳಗೆ ಅತ್ತರೆ ಶಿಶು ಆರೋಗ್ಯಯುತವಾಗಿದೆ ಎಂದರ್ಥ. ಒಂದರಿಂದ ಒಂದೂವರೆ ನಿಮಿಷದ ಒಳಗೆ ಅಳದಿದ್ದರೆ ಶಿಶು ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ತಿಳಿದುಕೊಳ್ಳಬೇಕು. ಎರಡು ನಿಮಿಷದ ಒಳಗೆ ಅಳದಿದ್ದರೆ ಶಿಶುವಿಗೆ ವೆಂಟಿಲೇಷನ್ ಸೇರಿದಂತೆ ವಿಶೇಷ ಚಿಕಿತ್ಸೆ ಅಗತ್ಯ ಎಂದರು.
ನವಜಾತ ಶಿಶುವಿನ ಪರಿಸ್ಥಿತಿಯು ಒಬ್ಬ ಅಪಘಾತವಾದ ವ್ಯಕ್ತಿಗಿಂತ ಹೆಚ್ಚು ಪಟ್ಟು ಸೂಕ್ಷ ್ಮವಾಗಿರುತ್ತದೆ. ಒಂದು ವೇಳೆ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಿಲ್ಲವಾದರೆ ಅದರ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು ಎಂದರು. ಹುಟ್ಟಿದ ಮಗುವಿಗೆ ಸೂಕ್ತ ಆರೈಕೆ ನೀಡುವುದನ್ನು ಪ್ರತಿಯೊಬ್ಬ ವೈದ್ಯರು ತಿಳಿದುಕೊಂಡಿರಬೇಕೆಂದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕಿ ಡಾ. ವಿನಯಾ ಶ್ರೀನಿವಾಸ್, ಡಾ. ಆರ್.ಪಿ.ಪೈ, ಉಪಪ್ರಾಂಶುಪಾಲ ಡಾ. ಸಿದ್ದಲಿಂಗಪ್ಪ, ಸುಬ್ಬಯ್ಯ ದಂತವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಎಸ್. ಸುರೇಶ್, ಪ್ರಭಾರ ವೈದ್ಯಕೀಯ ಅಧೀಕ್ಷ ಕ ಡಾ. ಸುಜಿತ್, ಪೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಜಿ.ವಿನಾಯಕ, ಐಎಪಿ ಕಾರ್ಯದರ್ಶಿ ಡಾ. ಸತೀಶ್ ಇತರರಿದ್ದರು.
ಸುಬ್ಬಯ್ಯ ವೈದ್ಯಕೀಯ ಮಹಾ ವಿದ್ಯಾಲಯದ ನವಜಾತ ಶಿಶು ವಿಭಾಗ, ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಹಾಗೂ ಭಾರತೀಯ ಶಿಶು ವೈದ್ಯ ಸಂಘ ಇತ್ತೀಚೆಗೆ ಏರ್ಪಡಿಸಿದ್ದ ನವಜಾತ ಶಿಶುವಿನ ತುರ್ತು ಚಿಕಿತ್ಸಾ ಕಾರಾರಯಗಾರ ಉದ್ಘಾಟಿಸಿ ಮಾತನಾಡಿದರು.
ಶಿಶು ಜನಿಸಿದ ಒಂದು ನಿಮಿಷದ ಒಳಗೆ ಅತ್ತರೆ ಶಿಶು ಆರೋಗ್ಯಯುತವಾಗಿದೆ ಎಂದರ್ಥ. ಒಂದರಿಂದ ಒಂದೂವರೆ ನಿಮಿಷದ ಒಳಗೆ ಅಳದಿದ್ದರೆ ಶಿಶು ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ತಿಳಿದುಕೊಳ್ಳಬೇಕು. ಎರಡು ನಿಮಿಷದ ಒಳಗೆ ಅಳದಿದ್ದರೆ ಶಿಶುವಿಗೆ ವೆಂಟಿಲೇಷನ್ ಸೇರಿದಂತೆ ವಿಶೇಷ ಚಿಕಿತ್ಸೆ ಅಗತ್ಯ ಎಂದರು.
ನವಜಾತ ಶಿಶುವಿನ ಪರಿಸ್ಥಿತಿಯು ಒಬ್ಬ ಅಪಘಾತವಾದ ವ್ಯಕ್ತಿಗಿಂತ ಹೆಚ್ಚು ಪಟ್ಟು ಸೂಕ್ಷ ್ಮವಾಗಿರುತ್ತದೆ. ಒಂದು ವೇಳೆ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಿಲ್ಲವಾದರೆ ಅದರ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು ಎಂದರು. ಹುಟ್ಟಿದ ಮಗುವಿಗೆ ಸೂಕ್ತ ಆರೈಕೆ ನೀಡುವುದನ್ನು ಪ್ರತಿಯೊಬ್ಬ ವೈದ್ಯರು ತಿಳಿದುಕೊಂಡಿರಬೇಕೆಂದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕಿ ಡಾ. ವಿನಯಾ ಶ್ರೀನಿವಾಸ್, ಡಾ. ಆರ್.ಪಿ.ಪೈ, ಉಪಪ್ರಾಂಶುಪಾಲ ಡಾ. ಸಿದ್ದಲಿಂಗಪ್ಪ, ಸುಬ್ಬಯ್ಯ ದಂತವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಎಸ್. ಸುರೇಶ್, ಪ್ರಭಾರ ವೈದ್ಯಕೀಯ ಅಧೀಕ್ಷ ಕ ಡಾ. ಸುಜಿತ್, ಪೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಜಿ.ವಿನಾಯಕ, ಐಎಪಿ ಕಾರ್ಯದರ್ಶಿ ಡಾ. ಸತೀಶ್ ಇತರರಿದ್ದರು.