ಆ್ಯಪ್ನಗರ

ಗಣಕೀಕೃತ ಬಿಲ್‌ ಬಗ್ಗೆ ಮಾಹಿತಿ ಅಗತ್ಯ

ಖಜಾನೆ ಬಿಲ್ಲು ತಯಾರಿಸುವ ಪ್ರಕ್ರಿಯೆ ಇದೀಗ ಗಣಕೀಕೃತವಾಗಿದ್ದು, ಪ್ರತಿಯೊಂದು ಇಲಾಖೆ ಸಿಬ್ಬಂದಿ ಹೊಸ ವ್ಯವಸ್ಥೆ ಕುರಿತು ಮಾಹಿತಿ ಹೊಂದಿರುವುದು ಇಂದಿನ ಅಗತ್ಯ ಎಂದು ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್‌.ಷಡಾಕ್ಷ ರಿ ಹೇಳಿದರು.

Vijaya Karnataka 21 Feb 2019, 5:00 am
ಶಿಕಾರಿಪುರ: ಖಜಾನೆ ಬಿಲ್ಲು ತಯಾರಿಸುವ ಪ್ರಕ್ರಿಯೆ ಇದೀಗ ಗಣಕೀಕೃತವಾಗಿದ್ದು, ಪ್ರತಿಯೊಂದು ಇಲಾಖೆ ಸಿಬ್ಬಂದಿ ಹೊಸ ವ್ಯವಸ್ಥೆ ಕುರಿತು ಮಾಹಿತಿ ಹೊಂದಿರುವುದು ಇಂದಿನ ಅಗತ್ಯ ಎಂದು ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್‌.ಷಡಾಕ್ಷ ರಿ ಹೇಳಿದರು.
Vijaya Karnataka Web SMR-20SKP2


ಪಟ್ಟಣದಲ್ಲಿ ಮಂಗಳವಾರ ಸರಕಾರಿ ನೌಕರರ ತಾಲೂಕು ಘಟಕ ಆಯೋಜಿಸಿದ್ದ ಖಜಾನೆ 2 ಬಿಲ್ಲುಗಳ ತಯಾರಿಕೆ, ಆದಾಯ ತೆರಿಗೆ ಸಲ್ಲಿಸುವ ಕಾರಾರ‍ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೌಕರರು ತಮ್ಮ ಆದಾಯ ತೆರಿಗೆಯನ್ನು ಪ್ರತಿ ತಿಂಗಳು ಪಾವತಿಸಬೇಕು, ಈ ಹಿಂದೆ ವರ್ಷದಲ್ಲಿ ಬಾಕಿ ಉಳಿದ ತೆರಿಗೆ ಮುಂದಿನ ವರ್ಷ ಪಾವತಿಸುವುದಕ್ಕೆ ಅವಕಾಶ ಇತ್ತು. ಇದೀಗ ಅಂತಹ ಸೌಲಭ್ಯ ಇಲ್ಲವಾಗಿದೆ, ವರ್ಷದ ಕೊನೆಗೆ ಎಲ್ಲ ತೆರಿಗೆ ಪಾವತಿಸದಿದ್ದರೆ ಸಂಬಳದ ಬಿಲ್‌ ತಯಾರಿಸುವುದಕ್ಕೆ ಆಗುವುದಿಲ್ಲ ಎಂದರು.

ಕಚೇರಿ ಮೂಲಕ ಯಾವುದೆ ಹಣ ನೀಡುವಾಗ ತೆರಿಗೆ ಮೊತ್ತ ಸರಕಾರಕ್ಕೆ ಪಾವತಿಸುವುದು ಕಡ್ಡಾಯವಾಗಿದ್ದು ಈ ಕುರಿತು ಬಹಳಷ್ಟು ಮುನ್ನೆಚ್ಚರಿಕೆ ವಹಿಸಬೇಕು. ತೆರಿಗೆ ಲೆಕ್ಕ ಹಾಕುವುದು, ಟಿಡಿಎಸ್‌ ಲೆಕ್ಕ ಗಣಕೀಕೃತ ವ್ಯವಸ್ಥೆಯಲ್ಲಿ ಸರಳವಾಗಿದ್ದು, ನೌಕರರು ತಮ್ಮ ಯಾವುದೆ ಅನುಮಾನಕ್ಕೂ ಸಂಪನ್ಮೂಲ ವ್ಯಕ್ತಿಗಳಿಂದ ಪರಿಹಾರ ಪಡೆದುಕೊಳ್ಳಬೇಕು. ಬಿಲ್‌ ತಯಾರಿಕೆಗೆ ಹೊರ ಸಿಬ್ಬಂದಿ ನೇಮಿಸುವುದಕ್ಕಿಂತಲೂ ತಾವೆ ಕಲಿತುಕೊಳ್ಳಬೇಕು ಎನ್ನುವುದು ಸಂಘದ ಆಶಯ ಎಂದು ಹೇಳಿದರು.

ಸರಕಾರಿ ನೌಕರರ ಸಂಘದ ತಾಲೂಕು ಘಟಕ ಅಧ್ಯಕ್ಷ ಚಿನ್ನಪ್ಪ ಅಧ್ಯಕ್ಷ ತೆ ವಹಿಸಿದ್ದರು. ಸಂಘದ ಕಾರ‍್ಯದರ್ಶಿ ಎಂ.ಎಚ್‌.ಮಲ್ಲಿಕಾರ್ಜುನ್‌, ಸಹಕಾರ‍್ಯದರ್ಶಿ ಪಿ.ರೇಣುಕಪ್ಪ, ಖಜಾಂಚಿ ರಾಮಚಂದ್ರಪ್ಪ, ರಾಜ್ಯ ಪರಿಷತ್‌ ಸದಸ್ಯ ಜೆ.ಎಸ್‌.ಶಿವಣ್ಣ, ಉಪಾಧ್ಯಕ್ಷ ರಾದ ಪಿ.ಎಸ್‌.ಕೇಶವ, ಎಚ್‌.ಎಸ್‌.ಶಂಕರ್‌, ಬಿ.ಆರ್‌.ಹನುಮಂತಪ್ಪ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ