ಆ್ಯಪ್ನಗರ

ಕೇಬಲ್‌ ದುರಸ್ತಿ ವೇಳೆ ಗಾಯ

ಇಲ್ಲಿನ ಎಸ್‌.ಎನ್‌.ನಗರದಲ್ಲಿ ಡಿಶ್‌ ಸಮಸ್ಯೆ ಸಂದರ್ಭ ಟಿವಿ ಸಂಪರ್ಕದ ಕೇಬಲ್‌ ದುರಸ್ತಿ ಮಾಡುವ ಕಾರ‍್ಯದಲ್ಲಿ ತೊಡಗಿದ್ದ ಫೈಜಾನ್‌ ಎಂಬ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.

Vijaya Karnataka 19 Jun 2019, 5:00 am
ಸಾಗರ: ಇಲ್ಲಿನ ಎಸ್‌.ಎನ್‌.ನಗರದಲ್ಲಿ ಡಿಶ್‌ ಸಮಸ್ಯೆ ಸಂದರ್ಭ ಟಿವಿ ಸಂಪರ್ಕದ ಕೇಬಲ್‌ ದುರಸ್ತಿ ಮಾಡುವ ಕಾರ‍್ಯದಲ್ಲಿ ತೊಡಗಿದ್ದ ಫೈಜಾನ್‌ ಎಂಬ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
Vijaya Karnataka Web injury during cable repair
ಕೇಬಲ್‌ ದುರಸ್ತಿ ವೇಳೆ ಗಾಯ


ಫೈಜಾನ್‌ ಆನಂದಪುರಂನ ಯಡೇಹಳ್ಳಿಯ ವಾಸಿಯಾಗಿದ್ದು, ಸಾಗರದಲ್ಲಿನ ತನ್ನ ಚಿಕ್ಕಮ್ಮನ ಮನೆಯಲ್ಲಿದ್ದ. ಕೇಬಲ್‌ ದುರಸ್ತಿ ಸಂದರ್ಭ ಹೈ ಟೆನ್‌ಷನ್‌ ವಿದ್ಯುತ್‌ ಲೈನ್‌ನ ಶಾಕ್‌ ಸಂಭವಿಸಿ ಕುಸಿದು ಬಿದ್ದಿದ್ದಾನೆ. ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ