ಆ್ಯಪ್ನಗರ

ಸಂಚಾರ ಸುವ್ಯವಸ್ಥೆಗೆ ಒತ್ತಾಯ

ನಗರದ ಸಂಚಾರ ಸುವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಭಾರತೀಯ ಮಾನವ ಹಕ್ಕುಗಳ ಸಂಘಟನೆ ಪದಾಧಿಕಾರಿಗಳು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎಂ. ಅಶ್ವಿನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Vijaya Karnataka 19 Mar 2019, 5:00 am
ಶಿವಮೊಗ್ಗ : ನಗರದ ಸಂಚಾರ ಸುವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಭಾರತೀಯ ಮಾನವ ಹಕ್ಕುಗಳ ಸಂಘಟನೆ ಪದಾಧಿಕಾರಿಗಳು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎಂ. ಅಶ್ವಿನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
Vijaya Karnataka Web SMG-1803-2-15-18SMG1


ದಿನದಿಂದ ದಿನಕ್ಕೆ ನಗರದಲ್ಲಿ ವಾಹನಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಸಂಚಾರ ವ್ಯವಸ್ಥೆ ಸುಧಾರಿಸುವ ಅಗತ್ಯವಿದೆ. ಹೀಗಾಗಿ, ದ್ವಿಚಕ್ರ ಸವಾರರಿಗೆ ಸೂಕ್ತವಾಗಲು ಬಿಎಚ್‌ ರಸ್ತೆ ಮಾರ್ಡನ್‌ ಟಾಕೀಸ್‌ ಎದುರು, ನೆಹರೂ ರಸ್ತೆಯ ಜೆಡಿಎಸ್‌ ಕಚೇರಿ ಎದುರು ತಿರುವು ಕಲ್ಪಿಸುವ ವ್ಯವಸ್ಥೆಯನ್ನು ಪಾಲಿಕೆಯಿಂದ ಮಾಡಿಸಬೇಕು ಎಂದು ಮನವಿ ಮಾಡಿದರು.

ಹೆಲ್ಮೆಟ್‌ ರಹಿತ ವಾಹನ ಚಾಲಕರನ್ನು ಹಿಡಿದು ದಂಡ ಹಾಕುವುದು ಸರಿಯಷ್ಟೆ. ಆದರೆ, ಸಿಗ್ನಲ್‌ಗಳ ಬಳಿ ತಿರುವು ರಸ್ತೆಗಳಲ್ಲಿ ಕಳ್ಳರನ್ನು ಹಿಡಿದಂತೆ ವಾಹನ ಸವಾರರನ್ನು ಅಡ್ಡ ಹಾಕುವ ವ್ಯವಸ್ಥೆಯನ್ನು ಬದಲಿಸಬೇಕು. ಸಂಚಾರ ಪೊಲೀಸರು ವಾಹನ ಸವಾರರೊಂದಿಗೆ ಅತ್ಯಂತ ಹೀನಾಯವಾಗಿ ನಡೆæದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಭಾರತೀಯ ಮಾನವ ಹಕ್ಕುಗಳ ಸಂಘಟನೆಯ ಜಿಲ್ಲಾ ಅಧ್ಯಕ್ಷ ಕೆ. ನಾಗರಾಜ್‌, ಪ್ರಧಾನ ಕಾರ್ಯದರ್ಶಿ ವೀರೇಶ್‌ ಚಿತ್ತರಗಿ, ಪದಾಧಿಕಾರಿಗಳಾದ ಹನುಮಂತಪ್ಪ, ಬಿ.ಟಿ.ಪ್ರಶಾಂತ್‌ ರಮೇಶ್‌, ಎ.ಕೃಷ್ಣಮೂರ್ತಿ, ಎಸ್‌.ಕರಿಬಸಪ್ಪ, ಎ.ರವಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ