ಆ್ಯಪ್ನಗರ

ತಾಯಿ ಮಗು ಆಸ್ಪತ್ರೆಯಲ್ಲಿ ಔಷಧ ಮಳಿಗೆಗೆ ಒತ್ತಾಯ

ಬಿ.ಎಚ್‌.ರಸ್ತೆಯಲ್ಲಿನ ಪ್ರವಾಸಿ ಮಂದಿರ ಸಮೀಪದ ಸರಕಾರಿ ತಾಯಿಮಗು ಆಸ್ಪತ್ರೆಯಲ್ಲಿ ಔಷಧ ಮಳಿಗೆ ತೆರೆಯುವಂತೆ ಒತ್ತಾಯಿಸಿ ಸೋಮವಾರ ತಾಲೂಕು ಮಾಹಿತಿ ಹಕ್ಕು ಹೋರಾಟಗಾರರ ಒಕ್ಕೂಟದಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 28 Dec 2018, 5:00 am
ಸಾಗರ : ಬಿ.ಎಚ್‌.ರಸ್ತೆಯಲ್ಲಿನ ಪ್ರವಾಸಿ ಮಂದಿರ ಸಮೀಪದ ಸರಕಾರಿ ತಾಯಿಮಗು ಆಸ್ಪತ್ರೆಯಲ್ಲಿ ಔಷಧ ಮಳಿಗೆ ತೆರೆಯುವಂತೆ ಒತ್ತಾಯಿಸಿ ಸೋಮವಾರ ತಾಲೂಕು ಮಾಹಿತಿ ಹಕ್ಕು ಹೋರಾಟಗಾರರ ಒಕ್ಕೂಟದಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web SMR-25sgr3


ಬಿ.ಎಚ್‌.ರಸ್ತೆಯಲ್ಲಿರುವ ತಾಯಿಮಗು ಆಸ್ಪತ್ರೆಯಲ್ಲಿ ಔಷಧ ಮಳಿಗೆ ಇಲ್ಲ. ವೈದ್ಯರು ಬರೆದು ಕೊಟ್ಟ ಔಷಧ ತರಲು ರೋಗಿಗಳು ಪಟ್ಟಣದ ನಡುವೆ ಇರುವ ಔಷಧ ಮಳಿಗೆಗಳಿಗೆ ಹೋಗಬೇಕು. ಹೀಗೆ ಹೋಗಲು ಆಟೋದವರಿಗೆ 50ರಿಂದ 70ರೂ.ವರೆಗೆ ಬಾಡಿಗೆ ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ರಸ್ತೆಯಲ್ಲಿ ಖಾಸಗಿ ಹಾಗೂ ಸರಕಾರಿ ಬಸ್‌ ಓಡಾಡುತ್ತಿದ್ದರೂ ರೋಗಿ ಅಥವಾ ಅವರ ಸಂಬಂಧಿಕರು ಕೈ ಮಾಡಿದರೆ ಬಸ್‌ ನಿಲ್ಲಿಸುತ್ತಿಲ್ಲ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಉಪವಿಭಾಗಾಧಿಕಾರಿಗಳು ಸಂಬಂಧಪಟ್ಟ ಬಸ್‌ ಮಾಲೀಕರ ಸಭೆ ಕರೆದು ಆಸ್ಪತ್ರೆ ಬಳಿ ಬಸ್‌ ನಿಲ್ಲಿಸುವಂತೆ ಸೂಚನೆ ನೀಡುವ ಜತೆಗೆ ಆಸ್ಪತ್ರೆಯೊಳಗೆ ಔಷಧದ ಮಳಿಗೆ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಬಂಗಾರಪ್ಪ, ಶೇಟ್‌, ಸುರೇಶ್‌ ಕಾರ್ಗಲ್‌, ವಿಶ್ವನಾಥ ಗೌಡ ಅದರಂತೆ, ಹುಚ್ಚಪ್ಪ ಗಾಳಿಪುರ, ನಾಗರಾಜ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ