ಆ್ಯಪ್ನಗರ

ಕುಸಿತದ ಭೀತಿಯಲ್ಲಿರಾಷ್ಟ್ರೀಯ ಹೆದ್ದಾರಿ ಸೇತುವೆ

ತಾಲೂಕಿನ ನಗರ ಸಮೀಪದ ಸೇತುವೆ ಜಖಂಗೊಂಡಿದ್ದು ರಾಣೆಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.

Vijaya Karnataka 24 Jun 2020, 5:00 am
ಹೊಸನಗರ: ತಾಲೂಕಿನ ನಗರ ಸಮೀಪದ ಸೇತುವೆ ಜಖಂಗೊಂಡಿದ್ದು ರಾಣೆಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.
Vijaya Karnataka Web 23HOSP2_46
ಹೊಸನಗರ ತಾಲೂಕು ನಗರದಲ್ಲಿರಾಣೆಬೆನ್ನೂರು- ಬೈಂದುರು ರಾಷ್ಟ್ರೀಯ ಹೆದ್ದಾರಿಯ ಸೇತುವೆ ಕೆಳಭಾಗದ ಗೋಡೆ ಕುಸಿತಗೊಂಡಿರುವುದು.

ಮೂಡುಗೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಿರಿದಾದ ಈ ಪುರಾತನ ಸೇತುವೆಯ ಕೆಳೆಭಾಗದ ಗೋಡೆಗೆ ಧಕ್ಕೆಯಾಗಿದ್ದು, ಅಳವಡಿಸಿರುವ ಕಲ್ಲುಗಳು ಕಳಚಿ ಬಿದ್ದಿವೆ. ಒಂದು ವೇಳೆ ಸೇತುವೆ ಕುಸಿತಗೊಂಡಲ್ಲಿಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆ ಸಂಚಾರ ಸ್ಥಗಿತಗೊಳ್ಳಲಿದೆ. ಮಾತ್ರವಲ್ಲತಾಲೂಕಿನ ನಗರ ಹೋಬಳಿಯ ಜನತೆಗೂ ತೀವ್ರ ಸಮಸ್ಯೆಯಾಗಲಿದೆ. ಹೊಸನಗರದಿಂದ ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರ ತಲುಪಲು ಹಾಗೂ ಸಂಪೆಕಟ್ಟೆ, ನಿಟ್ಟೂರು ಮಾರ್ಗವಾಗಿ ಕೊಲ್ಲೂರು ತಲುಪಲು ಈ ಸೇತುವೆಯನ್ನೇ ಬಳಸಿ ಹೋಗಬೇಕಾಗಿದೆ.

ಆಗುಂಬೆ ಘಾಟಿಯಲ್ಲಿಬೃಹತ್‌ ವಾಹನ ಸಂಚಾರ ನಿಷೇಧಿಸಿದ ಬಳಿಕ ಈ ಸೇತುವೆ ಬಳಸಿ ಬೃಹತ್‌ ವಾಹನಗಳ ಸಂಚಾರ ಹೆಚ್ಚಾಗಿತ್ತು. ಈಗ ಶಿಥಿಲಗೊಂಡಿರುವುದು ಸಂಚಾರ ಸಮಸ್ಯೆಯನ್ನು ಹೆಚ್ಚುವಂತೆ ಮಾಡಿದೆ. ಕೆಲ ವರ್ಷಗಳ ಹಿಂದೆ ಈಗಿರುವ ಸೇತುವೆಯ ಸಮೀಪದಲ್ಲಿದ್ದ ಇನ್ನೊಂದು ರಸ್ತೆ ಸೇತುವೆ ದಿಢೀರ್‌ ಕುಸಿತಗೊಂಡಿದ್ದು, ಸಂಪರ್ಕ ಕಡಿತಗೊಂಡಿತ್ತು. ಇದು ಸಹಜವಾಗಿಯೇ ಹೆಚ್ಚಿನ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಮಳೆಗಾಲದಲ್ಲಿಶರಾವತಿ ಹಿನ್ನೀರು ಸೇತುವೆ ಮೇಲು ಭಾಗದ ವರೆಗೂ ನಿಲ್ಲುವುದರಿಂದ ಹೆಚ್ಚಿನ ಮುಂಜಾಗ್ರತೆ ಅಗತ್ಯವಾಗಿದೆ. ಐದು ದಶಕಗಳ ಹಿಂದೆ ನಿರ್ಮಾಣವಾಗಿದ್ದ ಈ ಸೇತುವೆಯನ್ನು ಪುನರ್‌ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿಲ್ಲಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

====
ಬದಲಿ ಮಾರ್ಗ ಆದೇಶ
ಸೇತುವೆ ಕುಸಿತದ ಆತಂಕ ಎದುರಾಗುತ್ತಿದ್ದಂತೆ ಶಾಸಕ ಆರಗ ಜ್ಞಾನೇಂದ್ರ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ, ಸೇತುವೆ ಮೇಲೆ ಭಾರಿ ವಾಹನ ಸಂಚಾರ ನಿಷೇಧಿಸುವಂತೆ ಒತ್ತಾಯಿಸಿದ್ದರು. ಅಲ್ಲದೇ ತಾತ್ಕಾಲಿಕ ತುರ್ತು ದುರಸ್ತಿ ಕಾರ‍್ಯ ನಡೆಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ಭಾರಿ ವಾಹನ ಸಂಚಾರ ನಿಷೇಧಿಸಿ, ಪರಾರ‍ಯಯ ಮಾರ್ಗ ಸೂಚಿಸಿ ಆದೇಶ ನೀಡಿತು. ರಾಷ್ಟ್ರೀಯ ಹೆದ್ದಾರಿಯಲ್ಲಿಸಂಚರಿಸುವ ವಾಹನಗಳು ಹೊಸನಗರದಿಂದ ನಗರ-ನಿಲ್ಸಕಲ್‌-ಹುಲಿಕಲ್‌-ಹೊಸಂಗಡಿ ಮೂಲಕ ಬೈಂದೂರಿಗೆ ಸಂಪರ್ಕ ಕಲ್ಪಿಸುವಂತೆ ಆದೇಶದಲ್ಲಿತಿಳಿಸಲಾಗಿದೆ. ಆದರೆ ಬದಲಿ ಮಾರ್ಗ ಹೆಂಡೆಗದ್ದೆ ಗ್ರಾಮದ ಮೂಲಕ ಹಾದು ಹೋಗುವ ಕಿರಿದಾದ ರಸ್ತೆಯಾಗಿದ್ದು, ಮಳೆ ಹೆಚ್ಚಾದಲ್ಲಿವಾಹನ ಸಂಚಾರ ಕಷ್ಟಸಾಧ್ಯ.

---
ನೂತನ ಸೇತುವೆ ನಿರ್ಮಾಣಕ್ಕೆ ಅಂದಾಜುಪಟ್ಟಿ ಸಿದ್ಧಪಡಿಸಲಾಗಿದೆ. ಸೇತುವೆಯ ತಳಪಾಯ ಶಿಥಿಲಗೊಂಡಿದೆ. ಹಿನ್ನೀರಿನ ಹೊಡೆತಕ್ಕೆ ಈ ಭಾಗದಲ್ಲಿಸೇತುವೆಗಳು ಹಾಳಾಗುತ್ತಿವೆ. ಸದ್ಯ ತಾತ್ಕಾಲಿಕ ದುರಸ್ತಿ ಕಾರ‍್ಯ ನಡೆಸಲಾಗುವುದು. ಭಾರಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
- ಪೀರ್‌ ಪಾಶಾ, ಎಇಇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಿವಮೊಗ್ಗ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ