ಶಿವಮೊಗ್ಗ : ಸಹಕಾರಿ ಕ್ಷೇತ್ರದಲ್ಲಾದ ದೊಡ್ಡ ಚಳವಳಿಯ ಫಲವಾಗಿ ಸಾಕಷ್ಟು ಜನರಿಗೆ ಅನುಕೂಲವಾಗಿದೆ. ಆದರೆ, ಬಡ್ಡಿ ವ್ಯವಹಾರ ಪೂರ್ಣಪ್ರಮಾಣದಲ್ಲಿ ನಿಂತಿಲ್ಲ. ಇದಕ್ಕೆ ತಿಳಿವಳಿಕೆಯ ಕೊರತೆಯೇ ಕಾರಣ ಎಂದು ಜಿಲ್ಲಾಧಿಕಾರಿ ಕೆ. ಎ. ದಯಾನಂದ್ ಕಳವಳ ವ್ಯಕ್ತಪಡಿಸಿದರು.
ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಇಲ್ಲಿನ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 'ರಾಜ್ಯಮಟ್ಟದ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರ'ವನ್ನು ಉದ್ಘಾಟಿಸಿ ಮಾತನಾಡಿದರು.
ಸಣ್ಣ ಹಿಡುವಳಿದಾರರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿರುವುದರಿಂದ ಸಹಕಾರಿ ವಲಯಕ್ಕೆ ಉಜ್ವಲ ಭವಿಷ್ಯವಿದೆ. ಸಣ್ಣ ಹಿಡುವಳಿದಾರರಲ್ಲಿ ಜಾಗೃತಿ ಮೂಡಿಸಿದ್ದಲ್ಲಿ ಅವರು ಬಡ್ಡಿ ವ್ಯವಹಾರಕ್ಕೆ ಸಿಲುಕುವ ಸಾಧ್ಯತೆ ಕಡಿಮೆ. ತಿಳಿವಳಿಕೆಯ ಕೊರತೆಯಿಂದಾಗಿ ಮತ್ತೆ ಮತ್ತೆ ಸಾಲ ಪಡೆದವರೇ ಪ್ರತಿ ಸಲ ಅದರ ಲಾಭ ಪಡೆಯುತ್ತಿದ್ದಾರೆ. ಹೊಸಬರು ಬರುವುದಕ್ಕೆ ಅವಕಾಶವೇ ಸಿಗುತ್ತಿಲ್ಲ. ಇದೆಲ್ಲದರ ಬಗ್ಗೆ ಮಾಹಿತಿ ನೀಡಲು ಇಂತಹ ಶಿಬಿರಗಳು ಪೂರಕ ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ್ಗೌಡ, ಸಾಲ ಮನ್ನಾ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ. ರಾಜ್ಯ ಸರಕಾರ ಮನ್ನಾ ಮಾಡಿದ ಸಾಲದ ಹಣ ರೈತರ ಖಾತೆಗಳಿಗೆ ಜಮಾ ಆಗುವುದಿಲ್ಲ. ಬದಲಿಗೆ, ಸಾಲದ ಖಾತೆಗೆ ಹೋಗುತ್ತದೆ. ಇಂತಹ ತಾಂತ್ರಿಕ ಅಂಶಗಳ ಬಗ್ಗೆ ತಿಳಿಹೇಳುವ ಕೆಲಸವಾಗಿಲ್ಲ. ಹೀಗಾಗಿ, ಗೊಂದಲ ಏರ್ಪಟ್ಟಿದೆ. ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಇದರ ಬಗ್ಗೆ ಅರಿವು ಮೂಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಸಹಕಾರಿ ಬ್ಯಾಂಕ್ ಇದುವರೆಗೆ 500 ಕೋಟಿ ರೂ. ಸಾಲ ನೀಡಿದೆ. ನಬಾರ್ಡ್ನಿಂದ ಇದುವರೆಗೆ ಕೇವಲ 113 ಕೋಟಿ ರೂ. ಆರ್ಥಿಕ ನೆರವು ಬಂದಿದೆ. ಆದರೂ ಡಿಸಿಸಿ ಬ್ಯಾಂಕ್ 500 ಕೋಟಿ ರೂ. ಸಾಲ ನೀಡಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಅಂದಾಜು 140 ಕೋಟಿ ರೂ.ಗಳಷ್ಟು ಹಣ ಬರಬೇಕಿದೆ ಎಂದರು.
ರೈತರ ಸಾಲದ ಮೇಲಿನ ಬಡ್ಡಿ ವಸೂಲಿ ಮಾಡಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಒಂದುವೇಳೆ, ವಸೂಲಿಯಾದರೂ ಗ್ಯಾಸ್ ಸಬ್ಸಿಡಿ ದರದ ಹಣದಂತೆಯೇ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ ಎಂದರು.
ಜಿಲ್ಲಾ ಸಹಕಾರ ಮಹಾಮಂಡಳ ಅಧ್ಯಕ್ಷ ಅರಕೆರೆ ಎಚ್.ಎಲ್.ಷಡಾಕ್ಷರಿ, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಎಸ್.ಆರ್.ಗಿರೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಡಿ.ಭೂಕಾಂತ್, ಸಹಕಾರಿ ಹಾಲು ಒಕ್ಕೂಟ ಅಧ್ಯಕ್ಷ ಡಿ.ಆನಂದ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಪಿ. ವೀರಣ್ಣ, ಸಿ.ಹೊನ್ನಪ್ಪ, ಜಯರಾಮ್ ಗೋಂದಿ, ಎನ್.ಜಿ.ನಾಗರಾಜಪ್ಪ, ಎ.ಬಸವನಗೌಡ, ಜಿಲ್ಲಾ ಸಹಕಾರ ಕೇಂದ್ರದ ನಿರ್ದೇಶಕರಾದ ಎಚ್.ಕೆ.ವೆಂಕಟೇಶ್, ಅಗಡಿ ಅಶೋಕ್, ಜಿ.ಎನ್.ಸುಧೀರ್, ಎಸ್.ಪಿ.ದಿನೇಶ್, ಎಂ.ಬಿ.ಚನ್ನವೀರಪ್ಪ ಮತ್ತಿತರರು ಹಾಜರಿದ್ದರು.
'ಇತ್ತೀಚೆಗೆ ತಿದ್ದುಪಡಿಯಾದ ಸಹಕಾರಿ ಕಾಯಿದೆ ಕಾನೂನಿನ ಮುಖ್ಯಾಂಶಗಳ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸಂಪನ್ಮೂಲ ವ್ಯಕ್ತಿ ಎಚ್.ಎಸ್.ನಾಗರಾಜಯ್ಯ ಹಾಗೂ 'ಇತ್ತೀಚೆಗೆ ತಿದ್ದುಪಡಿಯಾದ ಜಿಎಸ್ಟಿ' ಬಗ್ಗೆ ಚಾರ್ಟಡ್ ಅಕೌಟೆಂಟ್ ನರೇಂದ್ರ ಮಾತನಾಡಿದರು.
===
ಸಹಕಾರ ಸಂಘಗಳು ಸ್ವಂತ ಆರ್ಥಿಕ ನೆರವನ್ನು ಕ್ರೋಡೀಕರಿಸುವ ಕೆಲಸ ಮಾಡಬೇಕು. ಆದರೆ, ಡಿಸಿಸಿ ಬ್ಯಾಂಕ್ ಮೇಲೆಯೇ ಅವಲಂಬಿಸಲಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಅಲ್ಲ. ಹೆಚ್ಚು ಆರ್ಥಿಕ ನೆರವು ನೀಡಲು ಡಿಸಿಸಿಗೂ ಸಾಧ್ಯವಾಗುವುದಿಲ್ಲ. ಆದ್ದರಿಂದ, ಸ್ವಂತ ಬಲದ ಮೇಲೆ ವಹಿವಾಟು ವೃದ್ಧಿಸಿಕೊಳ್ಳಬೇಕು.
- ಡಾ.ಆರ್.ಎಂ.ಮಂಜುನಾಥ್ಗೌಡ, ಅಧ್ಯಕ್ಷರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಶಿವಮೊಗ್ಗ
===
ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಇಲ್ಲಿನ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 'ರಾಜ್ಯಮಟ್ಟದ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರ'ವನ್ನು ಉದ್ಘಾಟಿಸಿ ಮಾತನಾಡಿದರು.
ಸಣ್ಣ ಹಿಡುವಳಿದಾರರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿರುವುದರಿಂದ ಸಹಕಾರಿ ವಲಯಕ್ಕೆ ಉಜ್ವಲ ಭವಿಷ್ಯವಿದೆ. ಸಣ್ಣ ಹಿಡುವಳಿದಾರರಲ್ಲಿ ಜಾಗೃತಿ ಮೂಡಿಸಿದ್ದಲ್ಲಿ ಅವರು ಬಡ್ಡಿ ವ್ಯವಹಾರಕ್ಕೆ ಸಿಲುಕುವ ಸಾಧ್ಯತೆ ಕಡಿಮೆ. ತಿಳಿವಳಿಕೆಯ ಕೊರತೆಯಿಂದಾಗಿ ಮತ್ತೆ ಮತ್ತೆ ಸಾಲ ಪಡೆದವರೇ ಪ್ರತಿ ಸಲ ಅದರ ಲಾಭ ಪಡೆಯುತ್ತಿದ್ದಾರೆ. ಹೊಸಬರು ಬರುವುದಕ್ಕೆ ಅವಕಾಶವೇ ಸಿಗುತ್ತಿಲ್ಲ. ಇದೆಲ್ಲದರ ಬಗ್ಗೆ ಮಾಹಿತಿ ನೀಡಲು ಇಂತಹ ಶಿಬಿರಗಳು ಪೂರಕ ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ್ಗೌಡ, ಸಾಲ ಮನ್ನಾ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ. ರಾಜ್ಯ ಸರಕಾರ ಮನ್ನಾ ಮಾಡಿದ ಸಾಲದ ಹಣ ರೈತರ ಖಾತೆಗಳಿಗೆ ಜಮಾ ಆಗುವುದಿಲ್ಲ. ಬದಲಿಗೆ, ಸಾಲದ ಖಾತೆಗೆ ಹೋಗುತ್ತದೆ. ಇಂತಹ ತಾಂತ್ರಿಕ ಅಂಶಗಳ ಬಗ್ಗೆ ತಿಳಿಹೇಳುವ ಕೆಲಸವಾಗಿಲ್ಲ. ಹೀಗಾಗಿ, ಗೊಂದಲ ಏರ್ಪಟ್ಟಿದೆ. ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಇದರ ಬಗ್ಗೆ ಅರಿವು ಮೂಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಸಹಕಾರಿ ಬ್ಯಾಂಕ್ ಇದುವರೆಗೆ 500 ಕೋಟಿ ರೂ. ಸಾಲ ನೀಡಿದೆ. ನಬಾರ್ಡ್ನಿಂದ ಇದುವರೆಗೆ ಕೇವಲ 113 ಕೋಟಿ ರೂ. ಆರ್ಥಿಕ ನೆರವು ಬಂದಿದೆ. ಆದರೂ ಡಿಸಿಸಿ ಬ್ಯಾಂಕ್ 500 ಕೋಟಿ ರೂ. ಸಾಲ ನೀಡಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಅಂದಾಜು 140 ಕೋಟಿ ರೂ.ಗಳಷ್ಟು ಹಣ ಬರಬೇಕಿದೆ ಎಂದರು.
ರೈತರ ಸಾಲದ ಮೇಲಿನ ಬಡ್ಡಿ ವಸೂಲಿ ಮಾಡಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಒಂದುವೇಳೆ, ವಸೂಲಿಯಾದರೂ ಗ್ಯಾಸ್ ಸಬ್ಸಿಡಿ ದರದ ಹಣದಂತೆಯೇ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ ಎಂದರು.
ಜಿಲ್ಲಾ ಸಹಕಾರ ಮಹಾಮಂಡಳ ಅಧ್ಯಕ್ಷ ಅರಕೆರೆ ಎಚ್.ಎಲ್.ಷಡಾಕ್ಷರಿ, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಎಸ್.ಆರ್.ಗಿರೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಡಿ.ಭೂಕಾಂತ್, ಸಹಕಾರಿ ಹಾಲು ಒಕ್ಕೂಟ ಅಧ್ಯಕ್ಷ ಡಿ.ಆನಂದ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಪಿ. ವೀರಣ್ಣ, ಸಿ.ಹೊನ್ನಪ್ಪ, ಜಯರಾಮ್ ಗೋಂದಿ, ಎನ್.ಜಿ.ನಾಗರಾಜಪ್ಪ, ಎ.ಬಸವನಗೌಡ, ಜಿಲ್ಲಾ ಸಹಕಾರ ಕೇಂದ್ರದ ನಿರ್ದೇಶಕರಾದ ಎಚ್.ಕೆ.ವೆಂಕಟೇಶ್, ಅಗಡಿ ಅಶೋಕ್, ಜಿ.ಎನ್.ಸುಧೀರ್, ಎಸ್.ಪಿ.ದಿನೇಶ್, ಎಂ.ಬಿ.ಚನ್ನವೀರಪ್ಪ ಮತ್ತಿತರರು ಹಾಜರಿದ್ದರು.
'ಇತ್ತೀಚೆಗೆ ತಿದ್ದುಪಡಿಯಾದ ಸಹಕಾರಿ ಕಾಯಿದೆ ಕಾನೂನಿನ ಮುಖ್ಯಾಂಶಗಳ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸಂಪನ್ಮೂಲ ವ್ಯಕ್ತಿ ಎಚ್.ಎಸ್.ನಾಗರಾಜಯ್ಯ ಹಾಗೂ 'ಇತ್ತೀಚೆಗೆ ತಿದ್ದುಪಡಿಯಾದ ಜಿಎಸ್ಟಿ' ಬಗ್ಗೆ ಚಾರ್ಟಡ್ ಅಕೌಟೆಂಟ್ ನರೇಂದ್ರ ಮಾತನಾಡಿದರು.
===
ಸಹಕಾರ ಸಂಘಗಳು ಸ್ವಂತ ಆರ್ಥಿಕ ನೆರವನ್ನು ಕ್ರೋಡೀಕರಿಸುವ ಕೆಲಸ ಮಾಡಬೇಕು. ಆದರೆ, ಡಿಸಿಸಿ ಬ್ಯಾಂಕ್ ಮೇಲೆಯೇ ಅವಲಂಬಿಸಲಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಅಲ್ಲ. ಹೆಚ್ಚು ಆರ್ಥಿಕ ನೆರವು ನೀಡಲು ಡಿಸಿಸಿಗೂ ಸಾಧ್ಯವಾಗುವುದಿಲ್ಲ. ಆದ್ದರಿಂದ, ಸ್ವಂತ ಬಲದ ಮೇಲೆ ವಹಿವಾಟು ವೃದ್ಧಿಸಿಕೊಳ್ಳಬೇಕು.
- ಡಾ.ಆರ್.ಎಂ.ಮಂಜುನಾಥ್ಗೌಡ, ಅಧ್ಯಕ್ಷರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಶಿವಮೊಗ್ಗ
===