ಆ್ಯಪ್ನಗರ

ಜಂಕ್‌ಪುಟ್‌ನಿಂದ ರೋಗಗಳಿಗೆ ಆಹ್ವಾನ

ಯುವ ಜನತೆ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ಅಧೀಕ್ಷ ಕ ಡಾ. ಬಿ.ಶ್ರೀನಿವಾಸ್‌ ಹೇಳಿದರು.

Vijaya Karnataka 19 Feb 2019, 5:00 am
ಶಿವಮೊಗ್ಗ:ಯುವ ಜನತೆ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ಅಧೀಕ್ಷ ಕ ಡಾ. ಬಿ.ಶ್ರೀನಿವಾಸ್‌ ಹೇಳಿದರು.
Vijaya Karnataka Web SMR-18GANESH5


ನಗರದ ಸಹ್ಯಾದ್ರಿ ಕಲಾ ಕಾಲೇಜಿನ ಯುವ ರೆಡ್‌ಕ್ರಾಸ್‌ ಘಟಕ, ಐಕ್ಯೂಎಸಿ ಮತ್ತು ರೇಂಜರ್ಸ್‌, ರೋವರ್ಸ್‌ ಘಟಕದ ವತಿಯಿಂದ ಇತ್ತೀಚೆಗೆ ಯುವ ಜನತೆಯ ಜೀವನ ಶೈಲಿ ಹವ್ಯಾಸಗಳು ವಿಷಯ ಕುರಿತು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ಯುಗದಲ್ಲಿ ಯುವ ಜನತೆ ಆರೋಗ್ಯಕ್ಕೆ ಗಮನ ನೀಡಿದೆ ನಿರ್ಲಕ್ಷಿಸುತ್ತಿದ್ದಾರೆ. ಜಂಕ್‌ಫುಡ್‌ ಹಾಗೂ ಫಾಸ್ಟ್‌ಫುಡ್‌ಗಳನ್ನು ಸೇವಿಸಿ ತಮಗೇ ಗೊತ್ತಿಲ್ಲದೆ ರೋಗಗಳಿಗೆ ಆಹ್ವಾನ ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಣ್ಣ ವಯಸ್ಸಿಗೇ ವಿದ್ಯಾರ್ಥಿಗಳಿಗೆ ಮಧುಮೇಹ ಹಾಗೂ ರಕ್ತದೊತ್ತಡ ಆವರಿಸುತ್ತಿದೆ. ವ್ಯಾಯಾಮ ರಹಿತ ಜೀವನದಿಂದ ಅವರು ರೋಗಿಗಳಾಗುತ್ತಿದ್ದಾರೆ. ಭಾರತ ಪ್ರಪಂಚದಲ್ಲದೇ ಅತಿ ಹೆಚ್ಚು ಯುವ ಜನತೆ ಹೊಂದಿರುವ ರಾಷ್ಟ್ರವಾಗಿದೆ. ಆದರೆ, ಯುವ ಜನತೆ ಮಾರಕ ರೋಗಗಳಿಗೆ ಬಲಿಯಾಗಿ ಭವಿಷ್ಯಕ್ಕೆ ತಾವೇ ಕೊಳ್ಳಿ ಇಟ್ಟುಕೊಳ್ಳುತ್ತಿದ್ದಾರೆ ಎಂದರು.

ಯುವಜನತೆ ಹೊರಗಿನ ಅಸುರಕ್ಷಿತ ಆಹಾರ ಸೇವಿಸುವುದರೊಂದಿಗೆ ಅವರು ಮಾದಕ ವ್ಯಸನ, ಧೂಮಪಾನ, ಮದ್ಯಪಾನ, ಗುಟ್ಕಾದಂತಹ ಚಟಕ್ಕೆ ದಾಸರಾಗುತ್ತಿದ್ದಾರೆ. ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಶೇ.75ರಷ್ಟು ಯುವ ಜನತೆ ಧೂಮಪಾನ, ಮದ್ಯಪಾನ ಹಾಗೂ ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಬಿ. ಧನಂಜಯ, ನ್ಯಾಕ್‌ ಸಂಚಾಲಕ ಡಾ.ಎಸ್‌.ಸಿರಾಜ್‌ ಅಹಮದ್‌, ಐಕ್ಯೂಎಸಿ ಸಂಚಾಲಕ ಕೆ.ಎನ್‌. ಮಹದೇವಸ್ವಾಮಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ. ಪ್ರಸನ್ನಕುಮಾರ್‌, ರೇಂಜರ್ಸ್‌, ರೋವರ್ಸ್‌ ಘಟಕದ ಸಂಚಾಲಕ ಕೆ.ಶಫಿವುಲ್ಲಾ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ