ಆ್ಯಪ್ನಗರ

ಬೇಜವಾಬ್ದಾರಿ ಚಾಲನೆ ಅಪಘಾತಕ್ಕೆ ದಾರಿ

ಮದ್ಯಪಾನ ಸೇವಿಸಿ ಬೇಜವಾಬ್ದಾರಿತನದಿಂದ ವಾಹನ ಚಾಲನೆ ಮಾಡುವುದರಿಂದ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸಂಚಾರ ಸಹಾಯಕ ಸಬ್‌ ಇನ್ಸ್‌ಫೆಕ್ಟರ್‌ ವಜೀರ್‌ ಅಹಮ್ಮದ್‌ ಹೇಳಿದರು.

Vijaya Karnataka 21 May 2019, 5:00 am
ಶಿವಮೊಗ್ಗ: ಮದ್ಯಪಾನ ಸೇವಿಸಿ ಬೇಜವಾಬ್ದಾರಿತನದಿಂದ ವಾಹನ ಚಾಲನೆ ಮಾಡುವುದರಿಂದ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸಂಚಾರ ಸಹಾಯಕ ಸಬ್‌ ಇನ್ಸ್‌ಫೆಕ್ಟರ್‌ ವಜೀರ್‌ ಅಹಮ್ಮದ್‌ ಹೇಳಿದರು.
Vijaya Karnataka Web SMR-19ganesh3


ನಗರದ ರೋಟರಿ ಕ್ಲಬ್‌ ಜುಬಿಲಿಯಲ್ಲಿ ಶನಿವಾರ ಏರ್ಪಡಿಸಿದ್ದ ರಸ್ತೆ ಸುರಕ್ಷ ತೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರತಿಯೊಬ್ಬ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಕಾರು ಚಾಲಕರು, ಸೀಟ್‌ ಬೆಲ್ಟ್‌ ಧರಿಸಬೇಕು ಹಾಗೂ ವೇಗದಲ್ಲಿ ನಿಯಂತ್ರಣವಿರಬೇಕು. ಆಗ ಅಪಘಾತಕ್ಕೆ ಒಂದಿಷ್ಟು ಕಡಿವಾಣ ಹಾಕಬಹುದು ಎಂದರು.

ಅವೈಜ್ಞಾನಿಕವಾದ ಹಂಪುಗಳಿಂದ ಕಿರಿದಾದ ರಸ್ತೆಗಳಿಂದ ಹಾಗೂ ಓವರ್‌ ಸ್ಪೀಡ್‌ ವೀಲಿಂಗ್‌ ಮಾಡುವುದರಿಂದ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದು ದುರದೃಷ್ಟಕರ. ಜನಸಂಖ್ಯೆ ಹೆಚ್ಚಳದಿಂದ ರಸ್ತೆ ಸುರಕ್ಷ ತೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ನಾವು ಹೆಚ್ಚು ಸಮಯ ರಸ್ತೆಗಳನ್ನು ಬಳಸುವುದರಿಂದ ರಸ್ತೆಯಲ್ಲಿ ಏಕಾಗ್ರತೆಯಿಂದ ಜಾಗರೂಕರಾಗಿ ವಾಹನ ಚಲಾಯಿಸಿದಾಗ ರಸ್ತೆ ಅಪಘಾತ ಕಡಿಮೆ ಮಾಡಬಹುದು ಎಂದರು.

ಸಾರ್ವಜನಿಕರು ಸಹಕಾರ ನೀಡಿದಲ್ಲಿ ರಸ್ತೆಯ ಅಪಘಾತಗಳನ್ನು ಆದಷ್ಟು ತಪ್ಪಿಸಿ ಅಮೂಲ್ಯ ಜೀವನ ಉಳಿಸಬಹುದು. ಅಪಾಪ್ತರು ಚಾಲನೆ ಮಾಡುವುದರ ಮುಖಾಂತರ ಅಪಘಾತಗಳು ಹೆಚ್ಚಾಗುತ್ತಿವೆ. ಎಲ್ಲರೂ ಕಡ್ಡಾಯವಾಗಿ ಪರವಾನಗಿ ಪಡೆದು ಗಾಡಿಗಳನ್ನು ಚಲಾಯಿಸಬೇಕು. ರಸ್ತೆಯ ಸುರಕ್ಷ ತಾ ನಿಯಮ ತಪ್ಪದೇ ಪಾಲಿಸಬೇಕೆಂದರು. ರೋಟರಿ ಜುಬ್ಲಿ ಕ್ಲಬ್‌ ಅಧ್ಯಕ್ಷ ಓಂಗಣೇಶ್‌ ಶೇಟ್‌ ಅಧ್ಯಕ್ಷ ತೆವಹಿಸಿದ್ದರು. ವಜೀರ್‌ ಅಹಮ್ಮದ್‌ರನ್ನು ಸನ್ಮಾನಿಸಲಾಯಿತು. ಮಾಜಿ ಅಧ್ಯಕ್ಷ ದೇವಾನಂದ್‌, ಎಸ್‌.ಎಸ್‌.ವಾಗೀಶ್‌, ಉಮಾದೇವಿ, ಎಸ್‌.ಆರ್‌.ಲಕ್ಷ್ಮೀನಾರಾಯಣ್‌, ಭಾರಧ್ವಾಜ್‌, ಅಶೋಕ್‌ಕುಮಾರ್‌, ವೆಂಕಟರಮಣ ಭಟ್‌ ಹಾಗೂ ರೋಟರಿ ವಿಜಯಕುಮಾರ್‌, ಶಿವಕುಮಾರ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ