ಆ್ಯಪ್ನಗರ

ಕೇಂದ್ರದಿಂದ ಐಟಿ, ಇಡಿ ದುರ್ಬಳಕೆ

ಆಪರೇಷನ್‌ ಕಮಲ ಮಾಡುವುದಕ್ಕಾಗಿ ಯಡಿಯೂರಪ್ಪ ಅವರು ದಿಲ್ಲಿಯಲ್ಲಿ, ವಿಜಯೇಂದ್ರ ಮುಂಬಯಿನಲ್ಲಿ ಕುಳಿತಾಗ ಆದಾಯ ತೆರಿಗೆ ಇಲಾಖೆ ದಾಳಿ ಮಾಡಬೇಕಿತ್ತು. ಅದನ್ನು ಭೇಷ್‌ ಎನ್ನುತ್ತಿದ್ದೇವು. ಅದನ್ನು ಬಿಟ್ಟು ಚುನಾವಣೆ ಸಂದರ್ಭದಲ್ಲಿ ದಾಳಿ ನಡೆಸುತ್ತಿರುವುದು ಖಂಡನೀಯ ಎಂದು ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.

Vijaya Karnataka 29 Mar 2019, 5:00 am
ಶಿವಮೊಗ್ಗ: ಆಪರೇಷನ್‌ ಕಮಲ ಮಾಡುವುದಕ್ಕಾಗಿ ಯಡಿಯೂರಪ್ಪ ಅವರು ದಿಲ್ಲಿಯಲ್ಲಿ, ವಿಜಯೇಂದ್ರ ಮುಂಬಯಿನಲ್ಲಿ ಕುಳಿತಾಗ ಆದಾಯ ತೆರಿಗೆ ಇಲಾಖೆ ದಾಳಿ ಮಾಡಬೇಕಿತ್ತು. ಅದನ್ನು ಭೇಷ್‌ ಎನ್ನುತ್ತಿದ್ದೇವು. ಅದನ್ನು ಬಿಟ್ಟು ಚುನಾವಣೆ ಸಂದರ್ಭದಲ್ಲಿ ದಾಳಿ ನಡೆಸುತ್ತಿರುವುದು ಖಂಡನೀಯ ಎಂದು ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.
Vijaya Karnataka Web it ed misuse from central
ಕೇಂದ್ರದಿಂದ ಐಟಿ, ಇಡಿ ದುರ್ಬಳಕೆ


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ದಾಳಿ ಮಾಡುವುದರ ಬಗ್ಗೆ ನನಗ್ಯಾವುದೇ ಅಭ್ಯಂತರವಿಲ್ಲ. ಅದನ್ನು ತಪ್ಪೆಂದೂ ಹೇಳುವುದಿಲ್ಲ. ಆದರೆ, ಉದ್ದೇಶಪೂರ್ವಕವಾಗಿ ಟಾರ್ಗೆಟ್‌ ಮಾಡುವುದು ಅಸಹನೀಯ. ಕೇಂದ್ರ ಸರಕಾರ ಈ ಹಿಂದೆಯೂ ಸಿಬಿಐ ದುರ್ಬಳಕೆ ಮಾಡಿ, ಸಂಸ್ಥೆಯ ಮರ್ಯಾದೆ ಕಳೆಯಲಾಗಿತ್ತು. ಈಗ ಐಟಿ ದುರ್ಬಳಕೆ ಮಾಡಲಾಗುತ್ತಿದೆ. ಇದು ಅಕ್ಷಮ್ಯ ಎಂದು ಗುಡುಗಿದರು.

ಜನರ ಭಾವನೆ ಕೆದಕುವ ಕೆಲಸ ಇದಾಗಿದ್ದು, ಐದು ವರ್ಷ ಯಾವುದೇ ಕೆಲಸ ಮಾಡಿಲ್ಲವೆಂಬುದಕ್ಕೆ ಸಾಕ್ಷಿಯಾಗಿದೆ. ಸೋಲುತ್ತೇವೆಂಬ ಭಯದಲ್ಲಿ ಇಂತಹ ಹೀನ ಕೃತ್ಯ ಎಸಗಲಾಗುತ್ತಿದೆ. ಸಿಬಿಐ, ಇಡಿ ಹಾಗೂ ಐಟಿ ಯಂತಹ ಇಲಾಖೆಗಳನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಬೇಕು. ಆದರೆ, ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌- ಕಾಂಗ್ರೆಸ್‌ನವರ ಮೇಲೆಯೇ ದಾಳಿ ನಡೆಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

=========


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ