ಆ್ಯಪ್ನಗರ

12ಕ್ಕೆ ಜೆ.ಎಚ್‌.ಪಟೇಲ್‌ ನೆನಪು ಕಾರ್ಯಕ್ರಮ

ಜೆ.ಎಚ್‌.ಪಟೇಲ್‌ ಪ್ರತಿಷ್ಠಾನದಿಂದ ಡಿ.12ರಂದು ಬೆಳಗ್ಗೆ 11ಕ್ಕೆ ನಗರದ ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಜೆ.ಎಚ್‌.ಪಟೇಲ್‌ ನೆನಪು ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಮಹಿಮ ಜೆ.ಪಟೇಲ್‌ ಹೇಳಿದರು.

Vijaya Karnataka 11 Dec 2018, 5:00 am
ಶಿವಮೊಗ್ಗ: ಜೆ.ಎಚ್‌.ಪಟೇಲ್‌ ಪ್ರತಿಷ್ಠಾನದಿಂದ ಡಿ.12ರಂದು ಬೆಳಗ್ಗೆ 11ಕ್ಕೆ ನಗರದ ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಜೆ.ಎಚ್‌.ಪಟೇಲ್‌ ನೆನಪು ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಮಹಿಮ ಜೆ.ಪಟೇಲ್‌ ಹೇಳಿದರು.
Vijaya Karnataka Web j h patel memory programme on 12
12ಕ್ಕೆ ಜೆ.ಎಚ್‌.ಪಟೇಲ್‌ ನೆನಪು ಕಾರ್ಯಕ್ರಮ


ಸುದ್ದಿಗೋಷ್ಠಿಯಲ್ಲಿ ಸೋಮವಾರ ಅವರು ಮಾತನಾಡಿ, ಜೆ.ಎಚ್‌.ಪಟೇಲ್‌ ನೆನಪು ಎಂಬುದು ಕೇವಲ ಒಂದು ದಿನದ ಕಾರ್ಯಕ್ರಮವಾಗದೆ ಅದು ಹೊಸ ಚಿಂತನೆ ಆರಂಭಕ್ಕೆ ಕಾರಣವಾಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಇಂದಿನ ಕಾಲದಲ್ಲಿ ಹಿಂದಿನ ಕಾಲ ಹಾಗಿತ್ತು. ಅದರ ಹಿಂದೆ ಇನ್ನೂ ಚೆನ್ನಾಗಿತ್ತು ಎನ್ನುತ್ತ ಬರಿ ಹಳೆಯದನ್ನೆ ಚಿಂತಿಸುತ್ತಾ ಕಾಲ ಕಳೆಯುತ್ತಿದ್ದೇವೆ. ಆದರೆ, ಮುಂದೇನು ಮಾಡಬೇಕು ಎಂದು ಯೋಚಿಸುವುದನ್ನೆ ಮರೆಯುತ್ತಿದ್ದೇವೆ. ಹೀಗಾಗಿ ಈ ಕಾರ್ಯಕ್ರಮದಲ್ಲಿ ಮುಂದೇನು ಎಂಬ ಅಂಶವಿಟ್ಟುಕೊಂಡು ಎಲ್ಲರ ಚಿಂತನೆಗಳನ್ನು ಒಟ್ಟಿಗೆ ಸೇರಿಸಿ ಹೊಸದಾಗಿ ಚಿಂತನೆ ಹುಟ್ಟು ಹಾಕುವ ಪ್ರಯತ್ನವಾಗುತ್ತಿದೆ. ವ್ಯಕ್ತಿಯನ್ನು ದೊಡ್ಡದು ಮಾಡುವುದಕ್ಕಿಂತ ಅವರ ಆಲೋಚನೆ, ಚಿಂತನೆಗಳನ್ನು ದೊಡ್ಡದು ಮಾಡುವ ಉದ್ದೇಶವಿದೆ ಎಂದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಉದ್ಘಾಟಿಸುವರು. ಮಾಜಿ ಗೃಹ ಸಚಿವ ಪಿ.ಜಿ.ಆರ್‌.ಸಿಂದ್ಯಾ, ಅರ್ಥಶಾಸ್ತ್ರಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ, ಗಾಂಧಿ ಅಧ್ಯಯನ ಕೇಂದದ ನಿರ್ದೇಶಕ ಡಾ.ನಟರಾಜ್‌ ಹುಳಿಯಾರ್‌, ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ್‌ ಭಾಗವಹಿಸುವರು ಎಂದರು. ಗೋಷ್ಠಿಯಲ್ಲಿ ಪ್ರಮುಖರಾದ ವಿ.ರಾಜು, ವೆಂಕಟೇಶ್‌, ಕಲ್ಲೂರು ಮೇಘರಾಜ್‌, ಜಿ.ಮಾದಪ್ಪ, ಶಶಿಧರ್‌, ವಿ.ಪುಟ್ಟಣ್ಣಯ್ಯ ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ