ಆ್ಯಪ್ನಗರ

‘ಆರೋಗ್ಯ ಲೆಕ್ಕಿಸದೇ ಸಂಪಾದನೆ ಸಲ್ಲದು’

ಆರ್ಥಿಕ ಹಾಗೂ ಶೈಕ್ಷ ಣಿಕವಾಗಿ ಹಿಂದುಳಿದ ವರ್ಗದವರ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಲು ಸ್ವಾತಂತ್ರ್ಯಪೂರ್ವದಲ್ಲೇ ಸಿರಿಗೆರೆಯ ಶ್ರೀಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಚಿಂತನೆ ನಡೆಸಿದ್ದರು ಎಂದು ಬೃಹನ್ಮಠ ಸಿರಿಗೆರೆ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

Vijaya Karnataka 8 Sep 2018, 5:00 am
ಭದ್ರಾವತಿ: ಆರ್ಥಿಕ ಹಾಗೂ ಶೈಕ್ಷ ಣಿಕವಾಗಿ ಹಿಂದುಳಿದ ವರ್ಗದವರ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಲು ಸ್ವಾತಂತ್ರ್ಯಪೂರ್ವದಲ್ಲೇ ಸಿರಿಗೆರೆಯ ಶ್ರೀಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಚಿಂತನೆ ನಡೆಸಿದ್ದರು ಎಂದು ಬೃಹನ್ಮಠ ಸಿರಿಗೆರೆ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
Vijaya Karnataka Web SMR-7BDVT2


ಅವರು ನಗರದ ಶ್ರೀಬಸವೇಶ್ವರ ಸಭಾ ಭವನದಲ್ಲಿ ಶ್ರೀ ಸಾಧು ವೀರಶೈವ ಸಮಾಜ ಹಾಗೂ ತರಳುಬಾಳು ಯುವ ವೇದಿಕೆ ಶುಕ್ರವಾರ ಏರ್ಪಡಿಸಿದ್ದ ಶ್ರೀ ತರಳುಬಾಳು ಜಗದ್ಗುರು ಶ್ರೀಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 26ನೇ ಶ್ರದ್ಧಾಂಜಲಿ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಭಕ್ತಿ ಸಮರ್ಪಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮನುಷ್ಯ ಆರೋಗ್ಯವನ್ನು ಲೆಕ್ಕಿಸದೆ ಸಂಪಾದನೆಗೆ ಮುಂದಾಗುತ್ತಿದ್ದಾನೆ. ಕೌಟುಂಬಿಕ ಹಿತ ಹಾಗೂ ಸಮಾಜದ ಒಳಿತಿಗಾಗಿ, ಧರ್ಮದ ನೆಲೆಗಟ್ಟಿನಲ್ಲಿ ಸಂಪಾದನೆ ಇರಬೇಕೆಂದರು.

ನಗರದ ಅವಳಿ ಕಾರ್ಖಾನೆಗಳು ದುಸ್ಥಿತಿಗೆ ಬರಲು ಆಡಳಿತದ ವೈಫಲ್ಯ ಕಾರಣ ಎಂದ ಅವರು, ಸೆ.24ರಂದು ಸಿರಿಗೆರೆಯಲ್ಲಿ ನಡೆಯುವ ಶ್ರೀಗಳ 26ನೇ ಶ್ರದ್ಧಾಂಜಲಿ ಸಮಾರಂಭಕ್ಕೆ ಸರ್ವರು ಆಗಮಿಸಬೇಕೆಂದರು.

ಸನ್ಮಾನ ಸ್ವೀಕರಿಸಿದ ಶಾಸಕ ಬಿ.ಕೆ.ಸಂಗಮೇಶ್ವರ್‌ ಮಾತನಾಡಿ, ದೇಶದಲ್ಲಿ ಆಧ್ಯಾತ್ಮಿಕ ಚಿಂತನೆಗಳೊಂದಿಗೆ ಶೈಕ್ಷ ಣಿಕ ಉನ್ನತಿಗೆ ಶ್ರಮಿಸಿದ ಮಠಗಳಲ್ಲಿ ಸಿರಿಗೆರೆ ಮಠವು ಪ್ರಮುಖವಾಗಿದೆ ಎಂದರು. ವಿಧಾನಪರಿಷತ್‌ ಸದಸ್ಯ ಎಸ್‌.ರುದ್ರೇಗೌಡ, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್‌ ನಾಯ್ಕ ಹಾಗೂ ಮಾಜಿ ಸಂಸದ ಬಿ.ವೈ.ರಾಘವೇಂದ್ರ, ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಶ್ರೀ ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್‌.ಬಸಪ್ಪ ಅಧ್ಯಕ್ಷ ತೆ ವಹಿಸಿದ್ದರು. ರೈತ ಸಂಘದ ರಾಜ್ಯ ಕಾರಾರ‍ಯಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ, ಕೆ.ಸಿ.ವೀರಭದ್ರೇಗೌಡ, ಎಚ್‌.ಎಸ್‌.ಸಂಜೀವ್‌ಕುಮಾರ್‌, ಬಸವನಗೌಡ ಮಾಳಗಿ, ಎಚ್‌.ವಿ.ಶಿವರುದ್ರಪ್ಪ, ಎಚ್‌.ಎಲ್‌.ಷಡಾಕ್ಷ ರಿ, ಲೋಹೀತೇಶ್ವರಪ್ಪ, ಮಂಗೋಟೆ ರುದ್ರೇಶ್‌ ಇತರರು ಇದ್ದರು. ರಾಜಣ್ಣ ಪ್ರಾಸ್ತಾವಿಕ ಮಾತನಾಡಿದರು. ಯಶೋದಮ್ಮ ಹಾಗೂ ಸುನಂದ ಪ್ರಾರ್ಥಿಸಿ, ಹೆಬ್ಬಂಡಿ ಲೋಹಿತೇಶ್ವರ್‌ ಸ್ವಾಗತಿಸಿದರು. ಎಚ್‌.ಭುವನೇಶ್ವರ್‌ ನಿರೂಪಿಸಿದರು. ಇದೇ ಸಂದರ್ಭ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೊಡಗು ಜಿಲ್ಲೆ ನೆರೆ ಹಾವಳಿ ಘಟನೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಮೌನಾಚರಣೆ ಮಾಡಲಾಯಿತು.

-----------------
ಅಂದು ಶ್ರೀಗಳು ಜಾತಿ, ಮತ, ಪಂಥ, ಭೇಧಭಾವವಿಲ್ಲದೆ ಸಹಪಂಕ್ತಿ ಭೋಜನ ವ್ಯವಸ್ಥೆ ಮಾಡಿದ್ದರು. ಇದಕ್ಕೆ ಸಾರ್ವಜನಿಕವಾಗಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅಂದು ಇಂತಹ ಪ್ರಯತ್ನ ನಡೆಯದಿದ್ದರೆ ಇಂದಿಗೂ ಸಮಾಜದ ಬದಲಾವಣೆ ಸಾಧ್ಯವಾಗುತ್ತಿರಲಿಲ್ಲ.

-ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಬೃಹನ್ಮಠ ಸಿರಿಗೆರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ