ಆ್ಯಪ್ನಗರ

ಜೂನ್‌.1 ರಿಂದ ಜನ್‌ಶತಾಬ್ದಿ ಪುನಾರಂಭ, ಶಿವಮೊಗ್ಗದಿಂದ ಬೆಂಗಳೂರಿಗೆ ಟ್ರೇನ್!

ಜನ್‌ ಶತಾಬ್ದಿ ರೈಲು ಸಂಚಾರ ಜೂನ್‌ 1ರಿಂದ ಪುನಾರಂಭಿಸಲಾಗುತ್ತಿದೆ. 70 ದಿನಗಳ ಬಳಿಕ ರಾಜಧಾನಿಗೆ ರೈಲ್ವೆ ಸಂಚಾರ ಶುರುವಾಗಲಿದೆ.

Vijaya Karnataka Web 1 Jun 2020, 12:25 pm
ಶಿವಮೊಗ್ಗ: ಕೆಲವೊಂದು ನಿಬಂಧನೆಯೊಂದಿಗೆ ಜನ್‌ ಶತಾಬ್ದಿ ರೈಲು ಸಂಚಾರ ಜೂನ್‌ 1ರಿಂದ ಪುನಾರಂಭಿಸಲಾಗುತ್ತಿದೆ. 70 ದಿನಗಳ ಬಳಿಕ ರಾಜಧಾನಿಗೆ ರೈಲ್ವೆ ಸಂಚಾರ ಶುರುವಾಗಲಿದ್ದು, ಜೂ.1ರಂದು ಸಂಜೆ ಯಶವಂತಪುರದಿಂದ (ರೈಲು ಗಾಡಿ ಸಂಖ್ಯೆ 02089) ಹೊರಟು ರಾತ್ರಿ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ (ರೈಲು ಗಾಡಿ ಸಂಖ್ಯೆ 02090) ಜೂ.2ರಂದು ಬೆಳಗ್ಗೆ 5.30ಕ್ಕೆ ಯಶವಂತಪುರಕ್ಕೆ ಹೊರಡಲಿದೆ.
Vijaya Karnataka Web -


ಪ್ರತಿ ಬೋಗಿಯಲ್ಲಿ ಕೇವಲ 54 ಮಂದಿಗಷ್ಟೇ ಪ್ರಯಾಣಿಸಬೇಕೆಂಬ ನಿಯಮ ವಿಧಿಸಲಾಗಿದೆ. ಹೀಗಾಗಿ ರೈಲಿನಲ್ಲಿ648 ಜನ ಮಾತ್ರ ಬುಕಿಂಗ್‌ ಮಾಡಲು ಅವಕಾಶವಿದೆ. ಜತೆಗೆ, ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದ್ದು, ಥರ್ಮಲ್‌ ಸ್ಕ್ಯಾನರ್‌‌ ಮೂಲಕ ಪರೀಕ್ಷಿಸಿ ರೈಲಿನೊಳಗೆ ಬಿಡಲಾಗುತ್ತೆ.

ಎಲ್ಲೆಲ್ಲಿನಿಲುಗಡೆ?
ಭದ್ರಾವತಿ, ಕಡೂರು, ತುಮಕೂರುಗಳಲ್ಲಿ ಮಾತ್ರ ನಿಲುಗಡೆಗೆ ಅವಕಾಶವಿದೆ. ರೈಲು ಬೆಳಗ್ಗೆ 5.30ಕ್ಕೆ ಹೊರಡಲಿದೆಯಾದರೂ ಪ್ರಯಾಣಿಕರು ನಿಲ್ದಾಣದಲ್ಲಿ 90 ನಿಮಿಷ ಮೊದಲೇ ಆಗಮಿಸಿರಬೇಕು. ಪ್ರತಿ ಪ್ರಯಾಣಿಕರ ಥರ್ಮಲ್‌ ಟೆಸ್ಟ್‌, ಸ್ಯಾನಿಟೈಸರ್‌ನಿಂದ ಕೈಗಳನ್ನು ಶುಚಿಗೊಳಿಸಿಯೇ ಒಳಗೆ ಬಿಡಲಾಗುವುದು. ಈ ಮುಂಚೆಯಂತೆ ರೈಲು ನಿಲ್ದಾಣದಿಂದ ಹೊರಡುವಾಗ ಬಂದಲ್ಲಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದಿಲ್ಲ. ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಲೇಬೇಕು.

ಕಣ್ಣಿಗೆ ಕಾಣದ ಶತ್ರುವಿನ ಸಂಹಾರ ಶತಸಿದ್ಧ: ಪ್ರಧಾನಿ ಮೋದಿ ಭರವಸೆಯ ನುಡಿಗಳು!


ಪ್ಯಾಂಟ್ರಿ ಸೇವೆ ಇರಲ್ಲ!ರೈಲಿನಲ್ಲಿ ಉಪಹಾರ, ಟೀ-ಕಾಫಿಯ ಪ್ಯಾಂಟ್ರಿ ಸೇವೆ ಇರುವುದಿಲ್ಲ. ಕುಡಿಯುವ ನೀರು ಮಾರಾಟ ಸಹ ಇರುವುದಿಲ್ಲ. ಆದ್ದರಿಂದ ಪ್ರಯಾಣಿಕರೇ ತಮಗೆ ಅಗತ್ಯವಿರುವ ಪದಾರ್ಥಗಳನ್ನು ತರಬೇಕಾಗುತ್ತದೆ. ಸೋಂಕು ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ