ರಾಘವೇಂದ್ರ ಮೇಗರವಳ್ಳಿ,
ತೀರ್ಥಹಳ್ಳಿ: ವೈದ್ಯಕೀಯ ಸೇವೆ ಸುಲಭವಾಗಲೆಂದು ಬಡ ರೋಗಿಗಳಿಗೆ ಆಸರೆಯಾಗುವ ನಿಟ್ಟಿನಲ್ಲಿಸರಕಾರ ಜನೌಷಧ ಪೂರೈಸುತ್ತಿದೆ. ಆದರೆ ಗ್ರಾಮಾಂತರ ಪ್ರದೇಶದಲ್ಲಿಜನೌಷಧ ಕೇಂದ್ರ ಇನ್ನು ಆರಂಭವಾಗಿಲ್ಲ!
ನಗರ, ಪಟ್ಟಣದಲ್ಲಿಮಾತ್ರ ಜನೌಷಧ ಮಳಿಗೆ ಇದೆ, ಗ್ರಾಮಾಂತರ ಪ್ರದೇಶದ ಆಸ್ಪತ್ರೆಯಲ್ಲಿಜನೌಷಧ ಕೇಂದ್ರ ಸ್ಥಾಪನೆಗೆ ಆರೋಗ್ಯ ಇಲಾಖೆ ಹೆಚ್ಚಿನ ಆದ್ಯತೆ ನೀಡದಿರುವುದರಿಂದ ಗ್ರಾಮೀಣರಿಗೆ ಜನೌಷಧ ಭಾಗ್ಯ ಇಲ್ಲದಂತಾಗಿದೆ. ಇದರಿಂದ ಖಾಸಗಿ ಔಷಧ ಮಾರಾಟಕ್ಕೆ ಲಾಭವಾದಂತಾಗಿದೆ. ಈ ನಡೆ ಸಾರ್ವಜನಿಕರಲ್ಲಿಅನುಮಾನ ಹೆಚ್ಚಿಸಿದೆ.
ಬ್ಯೂರೋ ಆಫ್ ಫಾರಂ ಪಬ್ಲಿಕ್ ಸೆಕ್ಟರ್ ಅಂಡರ್ಟೇಕಿಂಗ್ಸ್ ಆಫ್ಇಂಡಿಯಾ (ಬಿಪಿಪಿಐ) ಸಹಕಾರದೊಂದಿಗೆ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಸಾರ್ವಜನಿಕ ಆರೋಗ್ಯ ಕೇಂದ್ರ, ಜಿಲ್ಲಾಸರಕಾರಿ ಆಸ್ಪತ್ರೆ ಬಳಿ ಖಾಸಗಿಯಾಗಿ ಜನೌಷಧ ಮಳಿಗೆ ಆರಂಭಿಸಬಹುದಾಗಿದೆ. ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿಜನೌಷಧ ಮಳಿಗೆ ಆರಂಭಿಸಲು ಮುಂದಾಗಿಲ್ಲ. ಜನೌಷಧ ಕೇಂದ್ರ ಸ್ಥಾಪನೆಗೆ ಆರೋಗ್ಯ ಇಲಾಖೆ ಹೆಚ್ಚಿನ ಒತ್ತು ನೀಡಿದಂತಿಲ್ಲ. ಜನೌಷಧ ಖರೀದಿಗೆ ಸರಕಾರದ ಘಟಕ ಅನುದಾನ, ಎಆರ್ಎಸ್, ಜಿ.ಪಂ, ಪ್ರಾಥಮಿಕ, ತಾಲೂಕು, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾಆಸ್ಪತ್ರೆಯಲ್ಲಿಲಭ್ಯ ಸ್ಥಳೀಯ ಅನುದಾನ ಬಳಕೆಗೆ ಸರಕಾರ ಅವಕಾಶ ಕಲ್ಪಿಸಿದೆ. ಔಷಧ ಖರೀದಿಗೆ ಕಾಣುವಂತೆ, ತಿಳಿಯುವಂತೆ ದೊಡ್ಡ ಅಕ್ಷರದಲ್ಲಿವೈದ್ಯರು ಚೀಟಿ ಬರೆಯುವುದು ಕಡ್ಡಾಯ. ಪ್ರಾಥಮಿಕ ಆರೋಗ್ಯ ಕೇಂದ್ರ, 1ಸಮುದಾಯ ಆಸ್ಪತ್ರೆ ವ್ಯಾಪ್ತಿ ಜನೌಷಧ ಕೇಂದ್ರ ಇಲ್ಲದಿರುವುದರಿಂದ ದುಬಾರಿ ಔಷಧ ಖರೀದಿ ಶಿಕ್ಷೆ ಗ್ರಾಮೀಣರಿಗೆ ದೊರಕಿದೆ.
ವೈದ್ಯರಿಗೆ ಮಹತ್ವ ಹೊಣೆ:
ಜನೌಷಧ ಖರೀದಿ, ಬಳಕೆ ಕುರಿತು ರೋಗಿಗಳಲ್ಲಿಜಾಗೃತಿ ಮೂಡಿಸುವ ಹೊಣೆಗಾರಿಕೆ ಸರಕಾರಿ ಆಸ್ಪತ್ರೆ ವೈದ್ಯರಿಗೆ ಹೊರಿಸಲಾಗಿದೆ. ಜನೌಷಧ ಖರೀದಿಯಿಂದಾಗುವ ಲಾಭ, ಚಿಕಿತ್ಸೆ ಕುರಿತು ರೋಗಿಗಳಿಗೆ ನಿಖರ ಮಾಹಿತಿ ಒದಗಿಸಬೇಕು. ಆರೋಗ್ಯ ಕೇಂದ್ರದಲ್ಲಿಲಭ್ಯವಿರದ ಔಷಧಗಳನ್ನು ಬ್ರಾಂಡೆಡ್ ಹೆಸರಲ್ಲಿ ಖಾಸಗಿ ಔಷಧ ಅಂಗಡಿಯಲ್ಲಿ ಖರೀದಿಸುವಂತೆ ವೈದ್ಯರು ರೋಗಿಗಳಿಗೆ ಚೀಟಿ ಬರೆದು ಕೊಡುವಂತಿಲ್ಲ. ಬ್ರಾಂಡೆಡ್ ಔಷಧ ಖರೀದಿಗಾಗಿ ಖಾಸಗಿ ಔಷಧ ಅಂಗಡಿಗೆ ಸರಕಾರಿ ಆಸ್ಪತ್ರೆ ವೈದ್ಯರು ರೋಗಿಗಳಿಗೆ ಚೀಟಿ ಬರೆದು ಕೊಡುವುದನ್ನು ನಿಷೇಧಿಸಿ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ 2016 ಅಕ್ಟೋಬರ್ 1ರಂದು ಆದೇಶ ಹೊರಡಿಸಿದ್ದಾರೆ. ಜನೌಷಧ ಬರೆಯದ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರಕಾರ ಆದೇಶದಲ್ಲಿಎಚ್ಚರಿಸಿದೆ. ಜನೌಷಧ ಮಳಿಗೆಯಲ್ಲಿಔಷಧ ಖರೀದಿಗೆ ಪ್ರೇರೇಪಿಸುವುದು ವೈದ್ಯರ ಪ್ರಮುಖ ಕರ್ತವ್ಯವಾಗಿದೆ. ಬ್ರಾಂಡ್ ಔಷಧದಷ್ಟೇ ಗುಣಮಟ್ಟ ಮತ್ತು ರೋಗ ನಿರೋಧಕ ಸಾಮರ್ಥ್ಯ ಹೊಂದಿರುವ ಜನೌಷಧ ಪೂರೈಕೆಗೆ ಸರಕಾರ ಮಹತ್ವದ ಕ್ರಮ ಕೈಗೊಂಡಿದ್ದರೂ ಪ್ರಯೋಜನವಾಗಿಲ್ಲ.
ಗ್ರಾಮಾಂತರ ಪ್ರದೇಶದಲ್ಲಿಜನೌಷಧ ಮಳಿಗೆ ಆರಂಭವಾಗದ ಕಾರಣ ಜನರಿಗೆ ತುಂಬಾ ತೊಂದರೆ ಆಗಿದ್ದು ಸರಕಾರದ ಮೂಲ ಉದ್ದೇಶ ಈಡೇರಿಲ್ಲ. ಆರೋಗ್ಯ ಇಲಾಖೆ ಗ್ರಾಮಾಂತರ ಪ್ರದೇಶ ಸರಕಾರಿ ಆಸ್ಪತ್ರೆಯಲ್ಲಿಜನೌಷಧ ಕೇಂದ್ರ ಆರಂಭಿಸಬೇಕು.
- ಚಂದವಳ್ಳಿ ಸೋಮಶೇಖರ್, ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರು, ತೀರ್ಥಹಳ್ಳಿ
ಗ್ರಾಮಾಂತರ ಪ್ರದೇಶದ ಆಸ್ಪತ್ರೆಯಲ್ಲಿಜನೌಷಧ ಮಳಿಗೆ ಆರಂಭಿಸಲು ಜಾಗ ನೀಡಲಾಗುತ್ತದೆ. ಆಸಕ್ತರು ಕೇಂದ್ರ ಸ್ಥಾಪನೆಗೆ ಮುಂದೆ ಬಾರದ ಕಾರಣ ಸಮಸ್ಯೆ ಎದುರಾಗಿದೆ. ಜನೌಷಧ ಮಳಿಗೆ ಸ್ಥಾಪನೆ ಮಾಡುವವರಿಗೆ ಇಲಾಖೆ ಎಲ್ಲರೀತಿಯ ಸಹಕಾರ ನೀಡುತ್ತದೆ.
- ರಾಜೇಶ ಸುರಗಿಹಳ್ಳಿ, ಜಿಲ್ಲಾಆರೋಗ್ಯಾಧಿಕಾರಿ, ಶಿವಮೊಗ್ಗ