ಆ್ಯಪ್ನಗರ

ಯೋಜನೆ ವಿರುದ್ಧ ಪ್ರತಿಭಟನೆ ಜಾಥಾ ಇಂದು

ಶರಾವತಿ ನದಿ ನೀರು ಬೆಂಗಳೂರಿಗೆ ಹರಿಸುವ ಯೋಜನೆಯ ವಿರುದ್ಧ ಶರಾವತಿ ನೀರು ಉಳಿಸಿ ಆಂದೋಲನ ಸಮಿತಿ ಹಾಗೂ ತಾಲೂಕಿನ ಎಲ್ಲ ಸಂಘ-ಸಂಸ್ಥೆಗಳಿಂದ ಜು.8ರಂದು ಪಟ್ಟಣದ ರಂಗನಾಥ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಬೃಹತ್‌ ಪ್ರತಿಭಟನೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಆಂದೋಲನದ ತಾಲೂಕು ಸಮಿತಿ ಸಂಚಾಲಕ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.

Vijaya Karnataka 8 Jul 2019, 5:00 am
ಸೊರಬ: ಶರಾವತಿ ನದಿ ನೀರು ಬೆಂಗಳೂರಿಗೆ ಹರಿಸುವ ಯೋಜನೆಯ ವಿರುದ್ಧ ಶರಾವತಿ ನೀರು ಉಳಿಸಿ ಆಂದೋಲನ ಸಮಿತಿ ಹಾಗೂ ತಾಲೂಕಿನ ಎಲ್ಲ ಸಂಘ-ಸಂಸ್ಥೆಗಳಿಂದ ಜು.8ರಂದು ಪಟ್ಟಣದ ರಂಗನಾಥ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಬೃಹತ್‌ ಪ್ರತಿಭಟನೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಆಂದೋಲನದ ತಾಲೂಕು ಸಮಿತಿ ಸಂಚಾಲಕ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
Vijaya Karnataka Web SMR-7srbp1


ಪಟ್ಟಣದ ನಾಮದೇವ ಹರಿಮಂದಿರದಲ್ಲಿ ಶರಾವತಿ ನೀರು ಉಳಿಸಿ ಆಂದೋಲನ ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಶರಾವತಿ ನದಿ ನೀರು ಮಲೆನಾಡಿನವರ ಸ್ವತ್ತು. ಅವೈಜ್ಞಾನಿಕ ಯೋಜನೆ ವಿರುದ್ಧ ಜನರು ಎಚ್ಚರವಾಗಿದ್ದಾರೆ. ತಾಲೂಕಿನ ರೈತಸಂಘ ಸೇರಿದಂತೆ ನೂರಾರು ಸಂಘ-ಸಂಸ್ಥೆಗಳು ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಳ್ಳಲಿವೆ. ತಾಲೂಕಿನ ಜನತೆ ಸ್ವಯಂಪ್ರೇರಿತವಾಗಿ ಭಾಗವಹಿಸಬೇಕೆಂದರು. ಪ್ರತಿಭಟನೆಯ ಖರ್ಚು ವೆಚ್ಚ ನಿಭಾಯಿಸಲು ಹಾಗೂ ಜಾಗೃತಿ ಮೂಡಿಸಲು 20 ರೂ.ನಿಗದಿ ಮಾಡಿದ ಸ್ಟಿಕ್ಕರ್‌ ವಿತರಿಸಲಾಗುವುದು. ಸ್ಟಿಕ್ಕರ್‌ ತೆಗೆದುಕೊಳ್ಳಲು ಯಾವುದೇ ಒತ್ತಾಯ ಇಲ್ಲ. ಜನತೆ ಸಹಕರಿಸಬೇಕೆಂದರು. ರಾಜ್ಯ ರೈತ ಸಂಘದ ಕಾರಾರ‍ಯಧ್ಯಕ್ಷ ಮಂಜುನಾಥ್‌ ಗೌಡ, ತಾಲೂಕು ಖಜಾಂಚಿ ಈಶ್ವರಪ್ಪ, ಪ್ರಶಾಂತ್‌ ದೊಡ್ಡಮನೆ, ಜಗದೀಶ್‌ ಕಕ್ಕರಸೆ, ಅನ್ಸರ್‌, ಡಾ.ಜ್ಞಾನೇಶ್‌, ಎಚ್‌.ಎಸ್‌.ಮಂಜಪ್ಪ, ಎಂ.ಆರ್‌.ಪಾಟೀಲ್‌, ರಾಜಶೇಖರಗೌಡ, ಡಿ.ಎಸ್‌.ಶಂಕರ್‌, ಎಂ.ಡಿ.ಉಮೇಶ್‌, ನಟರಾಜ್‌, ಮೋಹನ್‌ ಸುರಭಿ, ಹಾಲೇಶ್‌ ನವುಲೆ, ಎಸ್‌.ಎಂ.ನೀಲೇಶ್‌, ಪ್ರಶಾಂತ ಹುನವಳ್ಳಿ, ವೀರೇಶಗೌಡ, ಗೌರಮ್ಮ ಭಂಡಾರಿ, ಸುಜಾತ ಜೋತಾಡಿ ಲಕ್ಷ್ಮೀ ಮುರಳಿಧರ್‌, ಸವಿತಾ ಭಟ್‌ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ