ಆ್ಯಪ್ನಗರ

ಇಂದು ಸಾಗರದಲ್ಲಿ ಆಭರಣ ಮಳಿಗೆ ಆರಂಭ

ಸಾಗರದ ಬಿ.ಎಚ್‌. ರಸ್ತೆಯಲ್ಲಿರುವ ಸತ್ಯನಾರಾಯಣ ಆರ್ಕೇಡ್‌ನಲ್ಲಿ ಮೇ 20ರಂದು ಉಡುಪಿಯ ಪ್ರಸಿದ್ಧ ಚಿನ್ನಾಭರಣ ಸಂಸ್ಥೆ ಆಭರಣ ಜ್ಯುವೆಲ್ಲರ್ಸ್‌ನ ನೂತನ ಮಳಿಗೆ ಆರಂಭಗೊಳ್ಳುತ್ತಿದೆ.

Vijaya Karnataka 19 May 2019, 5:00 am
ಶಿವಮೊಗ್ಗ : ಸಾಗರದ ಬಿ.ಎಚ್‌. ರಸ್ತೆಯಲ್ಲಿರುವ ಸತ್ಯನಾರಾಯಣ ಆರ್ಕೇಡ್‌ನಲ್ಲಿ ಮೇ 20ರಂದು ಉಡುಪಿಯ ಪ್ರಸಿದ್ಧ ಚಿನ್ನಾಭರಣ ಸಂಸ್ಥೆ ಆಭರಣ ಜ್ಯುವೆಲ್ಲರ್ಸ್‌ನ ನೂತನ ಮಳಿಗೆ ಆರಂಭಗೊಳ್ಳುತ್ತಿದೆ.
Vijaya Karnataka Web 18ganesh2


ಈ ಮಳಿಗೆ ಉಡುಪಿ, ಶಿವಮೊಗ್ಗ, ಮಂಗಳೂರು, ಕಾರ್ಕಳ, ಕುಂದಾಪುರ, ಹೆಬ್ರಿ, ಬೈಂದೂರು, ಬ್ರಹ್ಮಾವರ, ಚಿಕ್ಕಮಗಳೂರು, ಪಡುಬಿದ್ರಿ, ಕುಮಟಾ ಮತ್ತು ಬೆಳ್ತಂಗಡಿಯ ಬಳಿಕ ಆಭರಣದ ಹದಿಮೂರನೇ ಮಳಿಗೆಯಾಗಿದೆ.

1935ರಲ್ಲಿ ಅಂದಿನ ಪ್ರಸಿದ್ಧ ವ್ಯಾಪಾರಿಯಾಗಿದ್ದ ದಿ. ಬುರ್ಡೆ ಸದಾನಂದ ಕಾಮತ್‌ರಿಂದ ಸ್ಥಾಪಿತಗೊಂಡ ಆಭರಣ ಪರಿಶುದ್ಧ ಮತ್ತು ಉತ್ತಮ ಗುಣಮಟ್ಟದ ಚಿನ್ನಾಭರಣಗಳು ಕರಾವಳಿ ಕರ್ನಾಟಕ ಹಾಗೂ ಮಲೆನಾಡಿನಲ್ಲಿ ಹೆಸರುವಾಸಿಯಾಗಿದೆ. ಉತ್ಕೃಷ್ಟ ಕರಕುಶಲ ಕೆಲಸ, ಶ್ರೇಷ್ಠ ಮಾದರಿಯ ವಿನ್ಯಾಸಗಳ ಲಭ್ಯತೆ, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಿರುವುದು ಮತ್ತು ಉನ್ನತ ಮಟ್ಟದ ಗ್ರಾಹಕ ಸೇವೆ ಆಭರಣದ ಹೆಗ್ಗಳಿಕೆ.

ತನ್ನ ಎಲ್ಲ ಮಳಿಗೆಗಳಲ್ಲಿ ಚಿನ್ನ, ಬೆಳ್ಳಿ, ವಜ್ರ, ಪ್ಲಾಟಿನಮ್‌ ಮತ್ತು ಬೆಲೆಬಾಳುವ ಮುತ್ತು ಹಾಗೂ ಹರಳುಗಳ ಪಾರಂಪರಿಕ ಮತ್ತು ಆಧುನಿಕ ವಿನ್ಯಾಸಗಳ ವಿಶಾಲ ಶ್ರೇಣಿಯ ಸಂಗ್ರಹವನ್ನು ಆಭರಣವು ಹೊಂದಿದೆ. ಬೆಳ್ಳಿಯ ಆಭರಣ ಹಾಗೂ ಸಾಮಗ್ರಿಗಳಿಗೆ ಇರುವ ಬೇಡಿಕೆ ಮತ್ತು ಮನ್ನಣೆ ಮನಗಂಡಿರುವ ಆಭರಣ, ಬೆಳ್ಳಿಯ ಪೂಜಾ ಸಾಮಗ್ರಿಗಳು, ಬೆಳ್ಳಿ ಆಭರಣಗಳು, ಬೆಳ್ಳಿಯ ಕಲಾತ್ಮಕ ಅಲಂಕಾರ ವಸ್ತುಗಳು ಹಾಗೂ ಬೆಳ್ಳಿಯ ಉಡುಗೊರೆಗಳ ಸಮಗ್ರ ಸಂಗ್ರಹವನ್ನು ಹೊಂದಿದೆ.

ಸಾಗರದ ಆಸುಪಾಸಿನ ಗ್ರಾಹಕರು ಆಭರಣದ ಈ ನೂತನ ಮಳಿಗೆಗೆ ಭೇಟಿಯನ್ನಿತ್ತು, ಉದ್ಘಾಟನಾ ವಿಶೇಷವಾಗಿ ಪ್ರತಿ ಚಿನ್ನಾಭರಣದ ಖರೀದಿ ಮೇಲೆ ಲಭ್ಯವಿರುವ ಕ್ಯಾಶ್‌ ಬ್ಯಾಕ್‌ ಕೊಡುಗೆಯ ಸದುಪಯೋಗ ಪಡೆಯಬಹುದು. ಈ ಕೊಡುಗೆಯು ಆಭರಣದ ಸಾಗರದ ಮಳಿಗೆಯಲ್ಲಿ ಮಾತ್ರ ಸೀಮಿತ ಅವಧಿಯವರೆಗೆ ಲಭ್ಯವಿರುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ