ಆ್ಯಪ್ನಗರ

ಜೋಯಾಲುಕ್ಕಾಸ್‌ ನವೀಕೃತ ಮಳಿಗೆ ಆರಂಭ

ನಗರದ ಬಾಲರಾಜ್‌ ಅರಸ್‌ ರಸ್ತೆಯಲ್ಲಿ ಚಿನ್ನಾಭರಣ ಮಾರಾಟ ಕ್ಷೇತ್ರದಲ್ಲಿ ಜನಪ್ರಿಯತೆ ಹೊಂದಿರುವ ಜೋಯಾಲುಕ್ಕಾಸ್‌ ನವೀಕೃತ ಮಳಿಗೆ ಆರಂಭಗೊಂಡಿದ್ದು, ಚಿತ್ರನಟ ಧ್ರುವ ಸರ್ಜಾ ನವೀಕೃತ ಉದ್ಘಾಟಿಸಿದರು.

Vijaya Karnataka 18 Dec 2018, 5:00 am
ಶಿವಮೊಗ್ಗ : ನಗರದ ಬಾಲರಾಜ್‌ ಅರಸ್‌ ರಸ್ತೆಯಲ್ಲಿ ಚಿನ್ನಾಭರಣ ಮಾರಾಟ ಕ್ಷೇತ್ರದಲ್ಲಿ ಜನಪ್ರಿಯತೆ ಹೊಂದಿರುವ ಜೋಯಾಲುಕ್ಕಾಸ್‌ ನವೀಕೃತ ಮಳಿಗೆ ಆರಂಭಗೊಂಡಿದ್ದು, ಚಿತ್ರನಟ ಧ್ರುವ ಸರ್ಜಾ ನವೀಕೃತ ಉದ್ಘಾಟಿಸಿದರು.
Vijaya Karnataka Web SMG-1712-2-15-17GANESH3


ಈಗಾಗಲೇ ಜೋಯಾಲುಕ್ಯಾಸ್‌ ಶಿವಮೊಗ್ಗದ ಜನರನ್ನು ಆಕರ್ಷಿಸಿದ್ದು, ಮರುಸೃಷ್ಟಿಯನ್ನು ಪಡೆದಿದೆ. ಉದ್ಘಾಟನಾ ಕೊಡುಗೆಯಾಗಿ ಪ್ರತಿ ಗ್ರಾಹಕರು ತಮ್ಮ ಖರೀದಿ ಮೇಲೆ ಖಚಿತವಾದ ಗೃಹಬಳಕೆ ಉತ್ಪನ್ನವನ್ನು ಉಚಿತವಾಗಿ ಪಡೆಯಲಿದ್ದಾರೆ. ಅತ್ಯಾಕರ್ಷಕ ಫರ್ನಿಷಿಂಗ್‌, ವಿಶಾಲ ಪ್ರದೇಶ, ಮುದಗೊಳ್ಳುವ ಒಳಾಂಣದೊಂದಿಗೆ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ನವೀಕೃತ ಮಳಿಗೆ, ಜೋಯಾಲುಕ್ಕಾಸ್‌ ಬ್ರಾಂಡ್‌ನೊಂದಿಗೆ ಅಧಿಕ ವಿನ್ಯಾಸದ ಆಭರಣಗಳೊಂದಿಗೆ ಸಜ್ಜುಗೊಂಡಿದೆ.

ವಿಶೇಷ ಕೊಡುಗೆ: ಜೋಯಾಲುಕ್ಕಾಸ್‌ ನವೀಕೃತ ಮಳಿಗೆ ಉದ್ಘಾಟನೆ ಅಂಗವಾಗಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಪತ್ರಿ ಖರೀದಿಯ ಮೇಲೆ ಖಚಿತವಾದ ಗೃಹ ಬಳಕೆ ಉತ್ಪನ್ನವೊಂದನ್ನು ಉಚಿತವಗಿ ನೀಡಲಾಗುತ್ತಿದೆ. ವೇದ ಆಭರಣಗಳ ಪ್ರಾಚೀನ ಸಂಗ್ರಹಗಳು, ಕುಂದನ್‌ ಹರಳುಗಳ ಅಪೂರ್ವ ಸಂಗ್ರಹ ಸೇರಿದಂತೆ ವಿಸ್ತೃತ ಶ್ರೇಣಿಯ ಆಭರಣಗಳು, ಜತೆಗೆ ವಿಶ್ವಾದ್ಯಂತ ಪರಪಂರೆ ಮತ್ತು ಸಂಸ್ಕೃತಿಯಿಂದ ಪ್ರೇರಿತ ಮಿಲಿಯನ್‌ಗೂ ಅಧಿಕ ವಿನ್ಯಾಸದ ಆಭರಗಳು ಮಳಿಗೆಯಲ್ಲಿ ಲಭ್ಯವಿವೆ.

ಧ್ರುವ ನೋಡಲು ಮುಗಿಬಿದ್ದ ಅಭಿಮಾನಿಗಳು:
ಮಳಿಗೆ ಉದ್ಘಾಟನೆಗೆ ಆಗಮಿಸಿದ್ದ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ವೇದಿಕೆ ಬಳಿ ಬರುತ್ತಿದಂತೆ ಅಭಿಮಾನಗಳು ಸಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು. ಇಂದೇ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗಾಗಿ ಧ್ರುವ ಅವರು, ಭರ್ಜರಿ ಡೈಲಾಂಗ್‌ ಹೇಳಿ ರಂಜಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ