ಆ್ಯಪ್ನಗರ

‘ದೇಗುಲ ಅಭಿವೃದ್ಧಿಗೆ ಕೈ ಜೋಡಿಸಿ’

ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವಾದ ಯಲ್ಲಮ್ಮ ದೇವಸ್ಥಾನ ಪುನರ್‌ ನಿರ್ಮಾಣ ಮಹತ್ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಯಲ್ಲಮ್ಮ ದೇವಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಸ್‌.ಬಿ.ರಘುನಾಥ್‌ ಹೇಳಿದರು.

Vijaya Karnataka 23 Feb 2019, 5:00 am
ಸಾಗರ: ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವಾದ ಯಲ್ಲಮ್ಮ ದೇವಸ್ಥಾನ ಪುನರ್‌ ನಿರ್ಮಾಣ ಮಹತ್ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಯಲ್ಲಮ್ಮ ದೇವಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಸ್‌.ಬಿ.ರಘುನಾಥ್‌ ಹೇಳಿದರು.
Vijaya Karnataka Web SMR-22SGR1


ಇಲ್ಲಿನ ಸೊರಬ ರಸ್ತೆಯಲ್ಲಿರುವ ಶ್ರೀಯಲ್ಲಮ್ಮ ದೇವಿಯ ದೇವಸ್ಥಾನದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.

ದೇವಸ್ಥಾನ ಪುನರ್‌ ನಿರ್ಮಾಣ ಉದ್ದೇಶ ಹಲವು ವರ್ಷಗಳಿಂದ ಸಮಿತಿಗೆ ಇತ್ತು. ಇದೀಗ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ನೂತನ ದೇವಸ್ಥಾನ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಲಾಗಿದೆ. ದಾನಿಗಳು ದೇವಸ್ಥಾನ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಶಿಲಾನ್ಯಾಸ ನೆರವೇರಿಸಿದ ಹಿರಿಯ ಜ್ಯೋತಿಷಿ ಅನಂತಹೆಗಡೆ ಹಿರೇಮನೆ ಮಾತನಾಡಿ, ಇದು ಅತ್ಯಂತ ಶಕ್ತಿಯುತ ಸ್ಥಾನವಾಗಿದ್ದು ಯಲ್ಲಮ್ಮ ದೇವಿಗೆ ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ವರ್ಷದಲ್ಲಿ ದೇವಸ್ಥಾನ ನಿರ್ಮಾಣ ನಿಟ್ಟಿನಲ್ಲಿ ಸೇವಾ ಸಮಿತಿ ಅಗತ್ಯ ಕ್ರಮ ಕೈಗೊಳ್ಳಬೇಕು. ದಾನಿಗಳು ಇಂತಹ ಮಹತ್ವದ ಕೆಲಸಕ್ಕೆ ಕೈಜೋಡಿಸಬೇಕೆಂದರು. ವೇದಿಕೆಯಲ್ಲಿ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್‌.ನಾಗೇಂದ್ರ, ಉದ್ಯಮಿಗಳಾದ ಸುನೀಲ್‌ ಗಾಯ್‌ತೊಂಡೆ, ಶಿವಾನಂದ ಭಂಡಾರಕರ್‌, ಯು.ಜಿ.ಶ್ರೀಧರ , ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್‌, ಸಿ. ಪ್ರತಾಪ್‌ ಇದ್ದರು. ಲೋಕೇಶ್‌ಕುಮಾರ್‌ ಸ್ವಾಗತಿಸಿ, ಚಂದ್ರಕಾಂತ್‌ ಜಿಂಗಾಡೆ ಪ್ರಾಸ್ತಾವಿಕ ಮಾತನಾಡಿದರು. ಪ್ರತಾಪ್‌ಸಿಂಗ್‌ ವಂದಿಸಿ, ಷಣ್ಮುಖ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ