ಆ್ಯಪ್ನಗರ

ಹೊಂಗಿರಣದಲ್ಲಿ‘ಕಲಾನುಸಂಧಾನ’

ಗಾಂಧೀಜಿ ಸತ್ಯದ ಪ್ರತೀಕವಾಗಿದ್ದು, ವಿರೋಧಿಗಳಿಗೆ ನೋವಾಗದಂತೆ ವಿರೋಧಿಸಿದ ಕಾರಣಕ್ಕಾಗಿ ಮಹಾತ್ಮರೆನಿಸಿಕೊಂಡರು ಎಂದು ಅಷ್ಟಾವಧಾನಿ ಪ್ರಶಾಂತ ಮಧ್ಯಸ್ಥ ಹೇಳಿದರು.

Vijaya Karnataka 3 Oct 2019, 5:00 am
ಸಾಗರ : ಗಾಂಧೀಜಿ ಸತ್ಯದ ಪ್ರತೀಕವಾಗಿದ್ದು, ವಿರೋಧಿಗಳಿಗೆ ನೋವಾಗದಂತೆ ವಿರೋಧಿಸಿದ ಕಾರಣಕ್ಕಾಗಿ ಮಹಾತ್ಮರೆನಿಸಿಕೊಂಡರು ಎಂದು ಅಷ್ಟಾವಧಾನಿ ಪ್ರಶಾಂತ ಮಧ್ಯಸ್ಥ ಹೇಳಿದರು.
Vijaya Karnataka Web kalanusandana in hongirana
ಹೊಂಗಿರಣದಲ್ಲಿ‘ಕಲಾನುಸಂಧಾನ’


ತಾಲೂಕಿನ ಅಮಟೇಕೊಪ್ಪದ ಹೊಂಗಿರಣ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ಶಾಲೆಯಲ್ಲಿಬುಧವಾರ ಗಾಂಧಿ ಜಯಂತಿ ಹಾಗೂ ಶಾಸ್ತ್ರೀ ಜಯಂತಿ ಅಂಗವಾಗಿ ಆಯೋಜಿಸಿದ್ದ 'ಕಲಾನುಸಂಧಾನ' ಒಂದು ದಿನದ ಜೀವನ ಕೌಶಲ ಕಾರಾರ‍ಯಗಾರವನ್ನು ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಚಾಲನೆ ನೀಡಿ ಅವರು ಮಾತನಾಡಿದರು.

ಹೊಂಗಿರಣ ಶಾಲೆ ಶೈಕ್ಷಣಿಕ ಸಲಹೆಗಾರ ಅಶೋಕ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿಪುರಸ್ಕೃತ ಪ್ರಸಾದನ ಕಲಾವಿದ ಗುರುಮೂರ್ತಿ ವರದಾಮೂಲ, ಪ್ರಾಚಾರ‍್ಯರಾದ ಕೆ. ಶೋಭಾ, ಅರವಿಂದ ಗುರ್ಜರ್‌ ಇತರರು ಇದ್ದರು. ವಿದ್ಯಾರ್ಥಿನಿಯರು ಭಜನೆ ಹಾಡಿದರು. ಮಾನಸ ನಾಡಿಗ್‌, ನಯನಾ ಜೋಸ್‌, ಸಯಾನ್‌ ಇಕ್ಬಾಲ್‌ ಸರ್ವಧರ್ಮ ಪ್ರಾರ್ಥನೆ ಮಾಡಿದರು. ಪ್ರಿಯಾಂಕ ಸ್ವಾಗತಿಸಿ, ಅಂಬಿಕಾ ಪೈ ಪ್ರಾಸ್ತಾವಿಕ ಮಾತನಾಡಿದರು. ಉಮೇಶ ಗುಡಿಗಾರ ವಂದಿಸಿ, ಅನುಷಾ ನಿರೂಪಿಸಿದರು. ಜನಪದ, ಕಲೆ, ಪ್ರಸಾದನ, ರಂಗಭೂಮಿ ಸೇರಿದಂತೆ ವಿವಿಧ ವಿಷಯ ಕುರಿತು ಕಾರಾರ‍ಯಗಾರ ನಡೆಯಿತು.

------
ಭಾರತ ಕೃಷಿ ಪ್ರಧಾನ ರಾಷ್ಟ್ರ ಎಂಬ ಮಾತಿಗೆ ಹೊಸ ಅರ್ಥವನ್ನು ಲಾಲ್‌ ಬಹದ್ಧೂರ್‌ ಶಾಸ್ತ್ರಿ ಅವರು ನೀಡಿದ್ದಾರೆ. ಕೃಷಿಕರಿಗೂ ಗೌರವ ಸಿಗಬೇಕೆಂದು ನಾಡಿಗೆ ಸಾರಿದವರು ಶಾಸ್ತ್ರಿ .
- ಪ್ರಶಾಂತ ಮಧ್ಯಸ್ಥ, ಅಷ್ಟಾವಧಾನಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ