ಆ್ಯಪ್ನಗರ

7ನೇ ಕನ್ನಡ ಸಮ್ಮೇಳನದ ಸರ್ವಾಧ್ಯಕ್ಷ ರಾಗಿ ಸೂರ್ಯನಾರಾಯಣ ಹೆಗಡೆ

ಸಾಹಿತ್ಯ, ಕೃಷಿ, ಜ್ಯೋತಿಷ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿ ಸೂರ್ಯನಾರಾಯಣ ಹೆಗಡೆ ಬಾಸೂರು ಅವರನ್ನು ಸೊರಬ ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರನ್ನಾಗಿ ಭಾನುವಾರ ಗುರುಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Vijaya Karnataka 18 Dec 2018, 5:00 am
ಸೊರಬ: ಸಾಹಿತ್ಯ, ಕೃಷಿ, ಜ್ಯೋತಿಷ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿ ಸೂರ್ಯನಾರಾಯಣ ಹೆಗಡೆ ಬಾಸೂರು ಅವರನ್ನು ಸೊರಬ ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರನ್ನಾಗಿ ಭಾನುವಾರ ಗುರುಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
Vijaya Karnataka Web SMR-16srbp3


ಉಳವಿ ಗ್ರಾಮದಲ್ಲಿ ಜನವರಿ ಮೂರನೇ ವಾರದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಸಭೆ ಒಪ್ಪಿಗೆ ಸೂಚಿಸಿತು. ತಾಲೂಕು ಕಸಾಪ ಅಧ್ಯಕ್ಷ ಹಾಲೇಶ್‌ ನವುಲೆ ಮಾತನಾಡಿ, ಸಾಹಿತ್ಯ ಚಟುವಟಿಕೆ ನಡೆಸುವುದರ ಜತೆಗೆ ಸಾಹಿತಿಗಳನ್ನು ಪ್ರೋತ್ಸಾಹಿಸುವುದು, ಕನ್ನಡ ನೆಲ, ಜಲ, ಭಾಷೆ ಬಗ್ಗೆ ತನ್ನದೇ ಆದ ಪ್ರಭುತ್ವ ಪ್ರದರ್ಶಿಸಲು ಪರಿಷತ್ತು ಸದಾ ಸನ್ನದ್ಧವಾಗಿದೆ. ಸಮ್ಮೇಳನದಲ್ಲಿ ಚಿಂತನ ಮಂಥನ ಹಾಗೂ ಕವಿಗೋಷ್ಠಿ ನಡೆಸಲಾಗುವುದು. ಉದಯೋನ್ಮುಖ ಕವಿಗಳು ತಾವು ಬರೆದ ಮೂರು ಕವನಗಳನ್ನು ಡಿ.31 ರೊಳಗಾಗಿ ಸಾಹಿತ್ಯ ಪರಿಷತ್‌ ಕಚೇರಿಗೆ ಕಳುಹಿಸಿಕೊಟ್ಟರೆ, ಅದರಲ್ಲಿ ಒಂದು ಕವನವನ್ನು ಗೋಷ್ಠಿಯಲ್ಲಿ ವಾಚಿಸಲು ಅವಕಾಶ ಮಾಡಿಕೊಡಲಾಗುವುದು ಎಂದರು.

ಜಿಲ್ಲಾ ಉಪಾಧ್ಯಕ್ಷ ಡಾ.ಎಂ.ಕೆ.ಭಟ್‌, ಪಾಣಿರಾಜಪ್ಪ, ಕೃಷ್ಣಾನಂದ್‌, ಸೂರ‍್ಯನಾರಾಯಣ ಹೆಗಡೆ ಬಾಸೂರು, ಕಾಳಿಂಗ್‌ರಾಜ್‌, ಮೃತ್ಯುಂಜಯಪ್ಪಗೌಡ, ದೀಪಕ್‌ ದೊಂಗಡೇಕರ್‌, ಶಿವಾನಂದ್‌ ಪಾಣಿ ಸಮ್ಮೇಳನ ನಡೆಸುವ ಬಗ್ಗೆ ಮಾತನಾಡಿದರು. ಅರುಣ್‌ಕುಮಾರ್‌, ಶ್ರೀಪಾದ ಬಿಚ್ಚುಗತ್ತಿ, ಮಂಜಪ್ಪ ಸೇರಿದಂತೆ ತಾಲೂಕು ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು, ಹಿರಿಯ ಸದಸ್ಯರು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ