ಆ್ಯಪ್ನಗರ

ನರೇಂದ್ರ ಮೋದಿ ನಿಂತರೂ ಭದ್ರಾವತಿ ಜನ ವೋಟ್ ಹಾಕಲ್ಲ: ನಡ್ಡಾ-ಪಡ್ಡಾ ನಡೆಯಲ್ಲ ಇಲ್ಲಿ ಎಂದ ಸಂಗಮೇಶ್ವರ್

ಬಿಜೆಪಿ ಹೈಕಮಾಂಡ್ ನಾಯಕರು ಬಂದು ಇಲ್ಲಿ ಸ್ಪರ್ಧಿಸಿದರೂ, ಪ್ರಚಾರ ನಡೆಸಿದರೂ ಭದ್ರಾವತಿಯ ಮತದಾರರು ಬಿಜೆಪಿಗೆ ವೋಟ್ ಹಾಕೊಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಸಂಗಮೇಶ್ವರ್ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ. ಪ್ರಧಾನಿ ಮೋದಿಯೇ ಇಲ್ಲಿ ಸ್ಪರ್ಧಿಸಿದರೂ, ಅಮಿತ್ ಶಾ, ನಡ್ಡಾ- ಪಡ್ಡಾ ಯಾರು ಪ್ರಚಾರ ಮಾಡಿದರೂ ಇಲ್ಲಿ ಕಾಂಗ್ರೆಸ್ಸೇ ಗೆಲ್ಲುವುದು ಎಂದು ಸವಾಲು ಹಾಕಿದ್ದಾರೆ. ಭದ್ರಾವತಿ ಕ್ಷೇತ್ರ ತನಗೇನೂ ಹೊಸದಲ್ಲ. ಕಳೆದೈದು ವರ್ಷಗಳಿಂದಲೂ ಇಲ್ಲಿ ನನ್ನ ಪರವಾಗಿ ಪ್ರಚಾರ ನಡೆಯುತ್ತಲೇ ಇದೆ ಎಂದು ಹೇಳಿದ್ದಾರೆ.

ಹೈಲೈಟ್ಸ್‌:

  • ಭದ್ರಾವತಿ ತಾಲೂಕಿನ ತಡಸ, ದಡಂಘಟ್ಟ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಕೆ ಸಂಗಮೇಶ್ವರ್ ರೋಡ್ ಶೋ
  • ಇಲ್ಲಿ ಮೋದಿ ಸ್ಪರ್ಧಿಸಿದರೂ, ಅಮಿತ್ ಶಾ, ನಡ್ಡಾ ಪ್ರಚಾರ ಮಾಡಿದರೂ ನನ್ನ ಗೆಲುವು ತಡೆಯಲು ಅಸಾಧ್ಯ
  • ಭದ್ರಾವತಿ ನನಗೆ ಹೊಸದಲ್ಲಿ, ಐದು ವರ್ಷದಿಂದಲೂ ಇಲ್ಲಿ ನನ್ನ ಪ್ರಚಾರ ನಡೀತಿದೆ ಎಂದ ಸಂಗಮೇಶ್ವರ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bk
ಭದ್ರಾವತಿ ಕ್ಷೇತ್ರದಲ್ಲಿ ರೋಡ್ ಶೋ ನಡೆಸುತ್ತಿರುವ ಬಿಕೆ ಸಂಗಮೇಶ್ವರ್.
ಭದ್ರಾವತಿ: ಭದ್ರಾವತಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಸಂಗಮೇಶ್ವರ್ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ತಾಲೂಕಿನ ತಡಸ, ದಡಂಘಟ್ಟ ಭಾಗದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದ ಸಂಗಮೇಶ್ವರ್ ಭದ್ರಾವತಿಯ ತಮ್ಮ ಕೋಟೆಯನ್ನ ಯಾರೂ ಭೇದಿಸಲು ಸಾಧ್ಯವಿಲ್ಲ. ಇಲ್ಲಿ ಅಮಿತ್ ಶಾ, ನಡ್ಡಾ- ಪಡ್ಡಾ ಯಾರು ಬಂದು ಪ್ರಚಾರ ಮಾಡಿದರೂ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.

ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಭದ್ರಾವತಿ ಕ್ಷೇತ್ರ ನನಗೇನು ಹೊಸದಲ್ಲ. ಐದು ವರ್ಷದಿಂದಲೂ ನನ್ನ ಪ್ರಚಾರ ನಿರಂತರವಾಗಿ ಸಾಗಿದೆ. ಸದ್ಯ ಜೆಡಿಎಸ್ ನ ಶಾರದಾ ಅಪ್ಪಾಜಿ ಗೌಡ ಪ್ರತಿಸ್ಪರ್ಧಿಯಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಯಾವುದೇ ‌ಪಕ್ಷದ ಅಭ್ಯರ್ಥಿ ತಮ್ಮ ವಿರುದ್ಧ ಸೆಣಸಲಾರರು ಎಂದರು.
Bhadravathi VISL Factory: ಭದ್ರಾವತಿ ಕಾರ್ಖಾನೆ ಮುಚ್ಚದಂತೆ ಅಮಿತ್ ಶಾ ತಡೆದಿದ್ದಾರೆ: ಬಿವೈ ರಾಘವೇಂದ್ರ ಹೇಳಿಕೆ
ನಾವು ಜನರ ಕಷ್ಟಕ್ಕೆ ಸ್ಪಂದಿಸಿದ್ದೇವೆ
ಭದ್ರಾವತಿ ಜ‌ನ ಪುನಃ ನನ್ನ ಆಯ್ಕೆ ಮಾಡಲಿದ್ದಾರೆ. ನಾವು ಜನರ ಕಷ್ಟಕ್ಕೆ ಯಾವಾಗಲೂ ಸ್ಪಂದಿಸುತ್ತೇವೆ. ನಮ್ಮ ಕಷ್ಟಕ್ಕೆ ಅವರು ಅವರ ಕಷ್ಟಕ್ಕೆ ನಾವು ಯಾವಾಗಲೂ ನಿರಂತರವಾಗಿ ನಮ್ಮ ಬಾಂಧವ್ಯ ಸಾಗಿದೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ನಾವು ಬರೋದಿಲ್ಲ. ನಾವೇ ಗೆಲ್ಲುತ್ತೇವೆ ನಮ್ಮ ಚಿಂತನೆ ಜೊತೆಗೆ ಕಾಂಗ್ರೆಸ್ ಭರವಸೆ ವರದಾನವಾಗಲಿದೆ. ಕಾಂಗ್ರೆಸ್ ಪರ ಜನರಿದ್ದಾರೆ. ರಾಜ್ಯದ ಆರುವರೆ ಕೋಟಿ ಜನರು ಕೂಡ ಕಾಂಗ್ರೆಸ್ ಪರ ಇದ್ದಾರೆ. ಭದ್ರಾವತಿ ಜನರು ಕೂಡ ನನ್ನನ್ನ ಮನೆ ಮಗ ಎಂದುಕೊಂಡು ಆಶೀರ್ವದಿಸುತ್ತಾರೆ. ನಾನು 50,000 ಅಂತರದಿಂದ ಗೆಲ್ಲುತ್ತೇನೆ ಎಂದು ಸಂಗಮೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ಸೌಹಾರ್ದತೆ ಗೆಲುವು ತರಲಿದೆ

ನನ್ನ ಅಭಿವೃದ್ಧಿ ಕಾರ್ಯಗಳು ಜನರ ಜೊತೆಗೆ ಸೌಹಾರ್ದತೆ ನನಗೆ ಈ ಚುನಾವಣೆಯಲ್ಲಿ ಹೆಚ್ಚು ಅಂತರದಿಂದ ಗೆಲುವು ತರಲಿವೆ. ನಾವು ಒಂದೇ ತಾಯಿ ಮಕ್ಕಳು ಎಂದು ತಿಳಿದುಕೊಂಡಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಭದ್ರಾವತಿ ಕ್ಷೇಚ್ರದ ಪ್ರಚಾರಕ್ಕೆ ನಾಲ್ಕನೇ ತಾರೀಕಿನ ನಂತರ ಬರಬಹುದು ಎಂದರು.

Bhadravati Assembly Constituency- ಕದನ ಕಣ ಕೌತುಕ: ಭದ್ರಾವತಿ ರಾಜಕಾರಣಕ್ಕೂ ಕಾರ್ಖಾನೆಗೂ ಅವಿನಾಭಾವ ಸಂಬಂಧ
ನನ್ನ ಮುಂದೆ ಯಾರೂ ಇಲ್ಲ
ಭದ್ರಾವತಿಯಲ್ಲಿ ಬಿಜೆಪಿ ಈ ತನಕ ಠೇವಣಿ ಹಣವನ್ನೂ ಪಡೆದುಕೊಂಡಿಲ್ಲ. ಗೆಲ್ತೀವಿ, ಗೆಲ್ತೀವಿ ಅಂತ ಅವರು ಹೇಳ್ತಾನೆ ಇರಬೇಕು ಆದರೆ ಅವರು ಗೆಲ್ಲೋದಿಲ್ಲ. ಭದ್ರಾವತಿ ಪ್ರತಿಷ್ಠಿತ ಕಣ ಅಂತ ಎಲ್ಲಾ ಸಮಯದಲ್ಲೂ ಹೇಳ್ತಾನೇ ಇರ್ತಾರೆ. ಪ್ರತಿಷ್ಠಿತನೂ ಅಲ್ಲ, ಯಾವ ಘಟಾನುಘಟಿಯೂ ನನ್ನ ಮುಂದೆ ಇಲ್ಲ‌. ನರೇಂದ್ರ ಮೋದಿ ಬಂದು ನಿಂತರೂ ಭದ್ರಾವತಿ ಗೆಲ್ಲೋದಕ್ಕೆ ಆಗೋದಿಲ್ಲ. ನಮ್ ಜನ ಸೋಲಿಸಿಬಿಡ್ತಾರೆ. ಅಮಿತ್ ಶಾ ಬಂದರೂ ಸೋಲಿಸ್ತೀವಿ ಅವರ ರಾಷ್ಟ್ರೀಯ ಅಧ್ಯಕ್ಷ ನಡ್ಡಾ - ಪಡ್ಡಾ ಬಂದರೂ ಬಿಜೆಪಿ ಗೆಲ್ಲೋದಿಲ್ಲ ಕಾರಣ, ಬಿಜೆಪಿ ಕೋಮುವಾದಿ ಪಕ್ಷ ಅಂತ ಭದ್ರಾವತಿ ಜನರಿಗೆ ಗೊತ್ತು ಎಂದು ಸಂಗಮೇಶ್ವರ್ ಹೇಳಿದರು.
ಲೇಖಕರ ಬಗ್ಗೆ
ಗಣೇಶ್ ಪ್ರಸಾದ್ ಕುಂಬ್ಳೆ
ವಿಜಯ ಕರ್ನಾಟಕದಲ್ಲಿ ಡಿಜಿಟಲ್ ಪತ್ರಕರ್ತ. ಪತ್ರಿಕೋದ್ಯಮದಲ್ಲಿ 15 ವರ್ಷಗಳ ಅನುಭವ. ಓದುವಿಕೆ, ಬರೆಯುವಿಕೆ, ಯಕ್ಷಗಾನದಲ್ಲಿ ಆಸಕ್ತಿ. ಸಮಯ ಸಿಕ್ಕಾಗ ಚೆಸ್, ಕ್ರಿಕೆಟ್, ಶಟಲ್ ಆಡುವುದು, ಪ್ರವಾಸ, ಚಾರಣ ಮಾಡುವುದು ನೆಚ್ಚಿನ ಹವ್ಯಾಸಗಳು. ಶಿವರಾಮ ಕಾರಂತ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಬರಹಳೆಂದರೆ ಅಚ್ಚಮೆಚ್ಚು. ರಾಜಕೀಯ, ಕ್ರೀಡೆ, ಮಾನವೀಯ ಸಂವೇದಿ ಲೇಖನಗಳು, ವ್ಯಕ್ತಿಚಿತ್ರ, ನುಡಿಚಿತ್ರ, ಲಲಿತ ಪ್ರಬಂಧಗಳನ್ನು ಬರೆಯುವುದರಲ್ಲಿ ಆಸಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ