ಆ್ಯಪ್ನಗರ

ಶಿವರಾಜ್‌ಕುಮಾರ್‌ ಅವರಿಂದ ಕವಚ ಚಿತ್ರ ಪ್ರಚಾರ

ರಾಜ್ಯದೆಲ್ಲೆಡೆ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ 'ಕವಚ' ಸಿನಿಮಾಗೆ ನಗರದಲ್ಲಿಯೂ ಉತ್ತಮ ಪ್ರತಿಕ್ರಿಯೆ ದೊರಕುತ್ತಿರುವುದು ಸಂತಸದ ಸಂಗತಿ ಎಂದು ನಟ ಡಾ.ಶಿವರಾಜಕುಮಾರ್‌ ಹೇಳಿದರು.

Vijaya Karnataka 11 Apr 2019, 5:00 am
ಭದ್ರಾವತಿ: ರಾಜ್ಯದೆಲ್ಲೆಡೆ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ 'ಕವಚ' ಸಿನಿಮಾಗೆ ನಗರದಲ್ಲಿಯೂ ಉತ್ತಮ ಪ್ರತಿಕ್ರಿಯೆ ದೊರಕುತ್ತಿರುವುದು ಸಂತಸದ ಸಂಗತಿ ಎಂದು ನಟ ಡಾ.ಶಿವರಾಜಕುಮಾರ್‌ ಹೇಳಿದರು.
Vijaya Karnataka Web SMR-10BDVT3


ಅವರು ಬುಧವಾರ ಮಧ್ಯಾಹ್ನ ಕವಚ ಚಿತ್ರದ ಪ್ರಚಾರಕ್ಕಾಗಿ ನಗರದ ವೆಂಕಟೇಶ್ವರ/ಸತ್ಯ ಚಿತ್ರಮಂದಿರಕ್ಕೆ ಆಗಮಿಸಿ ಪ್ರೇಕ್ಷ ಕರನ್ನುದ್ದೇಶಿಸಿ ಮಾತನಾಡಿ, ಈ ಚಿತ್ರದ ಯಶಸ್ಸಿಗೆ ಕೇವಲ ನಾನೊಬ್ಬನೇ ಕಾರಣನಲ್ಲ. ಚಿತ್ರದ ನವ ನಿರ್ದೇಶಕ ವಸಿಷ್ಠಸಿಂಹ,ಬಾಲನಟಿ ಸೇರಿದಂತೆ ಇಡೀ ಚಿತ್ರತಂಡದ ಪರಿಶ್ರಮ ಹಾಗೂ ತಂಡದ ಸಾಮೂಹಿಕ ಪ್ರಯತ್ನ ಕಾರಣ. ರಾಜಕುಮಾರ, ಟಗರು ಸೇರಿದಂತೆ ಹಲವು ಸದಭಿರುಚಿ ಚಿತ್ರಗಳನ್ನು ಭದ್ರಾವತಿ ತಾಲೂಕಿನ ಚಿತ್ರ ಪ್ರೇಮಿಗಳು ಪ್ರೋತ್ಸಾಹಿಸುತ್ತಾ ಬಂದಿರುವುದು ಸಂತಸ ತಂದಿದೆ. ನಿಮ್ಮ ಪ್ರೀತಿ,ಅಭಿಮಾನ, ಆಶೀರ್ವಾದ ಇದೇರೀತಿ ನಮ್ಮ ಮೇಲೆ ನಿರಂತರವಾಗಿರಲಿ ಎಂದು ಹೇಳಿದರು. ಈ ಸಂದರ್ಭ ಚಿತ್ರ ನಿರ್ದೇಶಕ ವಸಿಷ್ಠಸಿಂಹ, ಡಾ.ರಾಜ್‌ ಬಳಗದ ಶಿವಸ್ವಾಮಿ, ಎಚ್‌.ಎನ್‌.ತಿರುಮಲೇಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ